ಉತ್ತರಪ್ರದೇಶದಲ್ಲಿರುವ ಮತಾಂತರ ವಿರೋಧಿ ಕಾನೂನಿನಂತೆ ಇಡೀ ದೇಶಕ್ಕೂ ಕೇಂದ್ರ ಸರಕಾರ ಈ ಕಾನೂನನ್ನು ರೂಪಿಸಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ರಾಮಪುರ (ಉತ್ತರಪ್ರದೇಶ) – ಇಲ್ಲಿ ಓರ್ವ ಮಹಿಳೆಯನ್ನು ಮತಾಂತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಜನರನ್ನು ಮತಾಂತರ ವಿರೋಧಿ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ. ಈ ಮಹಿಳೆ ಉತ್ತರಾಖಂಡ ಮೂಲದವಳಾಗಿದ್ದು ಪತಿಯ ನಿಧನದ ನಂತರ ಆರೋಪಿಯು ಆಮಿಷವೊಡ್ಡಿ ಅವಳನ್ನು ಉತ್ತರ ಪ್ರದೇಶದ ಶಹಾಬಾದ್ ಗ್ರಾಮಕ್ಕೆ ಕರೆತಂದು ಮತಾಂತರಗೊಳಿಸಿದನು. ಆರೋಪಿಯು ರಿಕ್ಷಾ ಚಾಲಕನಾಗಿದ್ದು ಆತ ಮಹಿಳೆಯ ಗಂಡನ ಸ್ನೇಹಿತ ಎಂದು ಅವಳಿಗೆ ಹೇಳುತ್ತಿದ್ದನು. ಅವಳ ಮತಾಂತರವಾದುದರಿಂದ ಆಕೆಯ ಮಗನ ಆರೋಗ್ಯವು ಹದಗೆಟ್ಟಿತು. ಅವನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಈ ಪ್ರಕರಣವು ಬೆಳಕಿಗೆ ಬಂದಿದೆ. ಕಳೆದ ವರ್ಷ ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೆ ಬಂದಿದ್ದು ಈ ಕಾಯ್ದೆಯಲ್ಲಿ ಅಪರಾಧಿ ವ್ಯಕ್ತಿಗೆ ೧ ರಿಂದ ೫ ವರ್ಷ ಜೈಲು ಶಿಕ್ಷೆ ಮತ್ತು ೧೫ ಸಾವಿರ ರೂಪಾಯಿವರೆಗೆ ದಂಡದ ಏರ್ಪಾಡು ಮಾಡಲಾಗಿದೆ.
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case