ಉತ್ತರಪ್ರದೇಶದಲ್ಲಿರುವ ಮತಾಂತರ ವಿರೋಧಿ ಕಾನೂನಿನಂತೆ ಇಡೀ ದೇಶಕ್ಕೂ ಕೇಂದ್ರ ಸರಕಾರ ಈ ಕಾನೂನನ್ನು ರೂಪಿಸಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ರಾಮಪುರ (ಉತ್ತರಪ್ರದೇಶ) – ಇಲ್ಲಿ ಓರ್ವ ಮಹಿಳೆಯನ್ನು ಮತಾಂತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಜನರನ್ನು ಮತಾಂತರ ವಿರೋಧಿ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ. ಈ ಮಹಿಳೆ ಉತ್ತರಾಖಂಡ ಮೂಲದವಳಾಗಿದ್ದು ಪತಿಯ ನಿಧನದ ನಂತರ ಆರೋಪಿಯು ಆಮಿಷವೊಡ್ಡಿ ಅವಳನ್ನು ಉತ್ತರ ಪ್ರದೇಶದ ಶಹಾಬಾದ್ ಗ್ರಾಮಕ್ಕೆ ಕರೆತಂದು ಮತಾಂತರಗೊಳಿಸಿದನು. ಆರೋಪಿಯು ರಿಕ್ಷಾ ಚಾಲಕನಾಗಿದ್ದು ಆತ ಮಹಿಳೆಯ ಗಂಡನ ಸ್ನೇಹಿತ ಎಂದು ಅವಳಿಗೆ ಹೇಳುತ್ತಿದ್ದನು. ಅವಳ ಮತಾಂತರವಾದುದರಿಂದ ಆಕೆಯ ಮಗನ ಆರೋಗ್ಯವು ಹದಗೆಟ್ಟಿತು. ಅವನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಈ ಪ್ರಕರಣವು ಬೆಳಕಿಗೆ ಬಂದಿದೆ. ಕಳೆದ ವರ್ಷ ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೆ ಬಂದಿದ್ದು ಈ ಕಾಯ್ದೆಯಲ್ಲಿ ಅಪರಾಧಿ ವ್ಯಕ್ತಿಗೆ ೧ ರಿಂದ ೫ ವರ್ಷ ಜೈಲು ಶಿಕ್ಷೆ ಮತ್ತು ೧೫ ಸಾವಿರ ರೂಪಾಯಿವರೆಗೆ ದಂಡದ ಏರ್ಪಾಡು ಮಾಡಲಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ