ಹಿಂದುತ್ವನಿಷ್ಠ ಸಂಸದ ರಘುರಾಮ ಕೃಷ್ಣಮ್ ರಾಜು ಅವರ ತಥಾಕಥಿತ ಆಕ್ಷೇಪಾರ್ಹ ಭಾಷಣವನ್ನು ಪ್ರಸಾರ ಮಾಡಿದ್ದಕ್ಕಾಗಿ ೨ ಸುದ್ದಿ ಚಾನೆಲ್ಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲು !ದೇಶದ್ರೋಹದ ವ್ಯಾಖ್ಯಾನವನ್ನು ನಿರ್ಧರಿಸುವ ಸಮಯ ಬಂದಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ ! |
ವೈ.ಎಸ್.ಆರ್. ಕಾಂಗ್ರೆಸ್ ಸರಕಾರದ ಕ್ರೈಸ್ತಪ್ರೇಮವನ್ನು ಬಹಿರಂಗಪಡಿಸಿದ ತನ್ನದೇ ಪಕ್ಷದ ಸಂಸದನನ್ನು ಅಧಿಕಾರವನ್ನು ದುರುಪಯೋಗಿಸಿ ಬಂಧಿಸಿತು. ಇದು ಸರಕಾರದ ಮೊಗಲ್ಶಾಹಿ ಆಗಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವೇ ಆಗಿದೆ. ಇದಕ್ಕಾಗಿ ನ್ಯಾಯಾಲಯವು ಸಂಬಂಧಪಟ್ಟವರನ್ನು ಶಿಕ್ಷಿಸಬೇಕು !

ನವ ದೆಹಲಿ – ಸರಕಾರವನ್ನು ಟೀಕಿಸುವುದು ದೇಶದ್ರೋಹವಲ್ಲ. ಸರಕಾರದ ಟೀಕೆಗಳನ್ನು ದೇಶದ್ರೋಹದ ಕೃತ್ಯವೆಂದು ಪರಿಗಣಿಸಲಾಗುವುದಿಲ್ಲ. ದೇಶದ್ರೋಹದ ವ್ಯಾಖ್ಯಾನವನ್ನು ನಿರ್ಧರಿಸುವ ಸಮಯ ಬಂದಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಆಂಧ್ರಪ್ರದೇಶ ಸರಕಾರ ಮತ್ತು ಪೊಲೀಸರ ವಿರುದ್ಧ ಚಾಟಿ ಬೀಸಿದೆ. ಆಂಧ್ರಪ್ರದೇಶದಲ್ಲಿ ಎರಡು ಸ್ಥಳೀಯ ತೆಲುಗು ಸುದ್ದಿ ವಾಹಿನಿಗಳಾದ `ಟಿವಿ ೫’ ಮತ್ತು ‘ಎಬಿಎನ್ ಆಂಧ್ರ ಜ್ಯೋತಿ’ಯ ವಿರುದ್ಧ ದೇಶದ್ರೋಹದ ಕಲಂನ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಈ ಆರೋಪಿಗಳನ್ನು ಖುಲಾಸೆಗೊಳಿಸುವಂತೆ ಕೋರಿ ಸುದ್ದಿ ಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದವು. ನ್ಯಾಯಾಲಯವು ಮೇಲಿನ ಮಾತುಗಳಿಂದ ಚಾಟಿ ಬೀಸಿದೆ ಜೊತೆಗೆ ಎರಡೂ ಸುದ್ದಿ ವಾಹಿನಿಗಳ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ತೆಗೆದುಕೊಳ್ಳದಂತೆ ಆಂಧ್ರ ಸರಕಾರ ಮತ್ತು ಪೊಲೀಸರಿಗೆ ಆದೇಶ ನೀಡಿತು. ಈ ಎರಡೂ ಸುದ್ದಿ ವಾಹಿನಿಗಳು ವೈಎಸ್ಆರ್ ಕಾಂಗ್ರೆಸ್ನ ಹಿಂದುತ್ವನಿಷ್ಠ ಸಂಸದ ರಘುರಾಮ ಕೃಷ್ಣಮ್ ರಾಜು ಅವರ ತಥಾಕಥಿತ ಆಕ್ಷೇಪಾರ್ಹ ಭಾಷಣವನ್ನು ಪ್ರಸಾರ ಮಾಡಿದ್ದವು. ಈ ಪ್ರಕರಣದಲ್ಲಿ ರಾಜು ಅವರನ್ನು ಬಂಧಿಸಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
The Supreme Court observed that it was time to define sedition in terms of freedom of the press | @AneeshaMathur #SupremeCourt #Andhrapradesh #FreedomOfPress https://t.co/y52gkzZeoG
— IndiaToday (@IndiaToday) May 31, 2021
ನ್ಯಾಯಾಲಯವು, ಪ್ರಸಾರ ಮಾಧ್ಯಮಗಳು ಮತ್ತು ಭಾಷಣ ಸ್ವಾತಂತ್ರ್ಯದ ಬಗ್ಗೆ ಈಗ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೨೪ ಅ ಮತ್ತು ೧೫೩ ರ ನಿಯಮಗಳ ವ್ಯಾಖ್ಯೆಯನ್ನು ನಿರ್ಧರಿಸುವ ಅವಶ್ಯಕತೆ ಇದೆ, ಎಂದು ನಮಗೆ ಅನಿಸುತ್ತಿದೆ. ಸುದ್ದಿ ವಾಹಿನಿಗಳು ಏನನ್ನಾದರೂ ಹೇಳುತ್ತಿದ್ದರೆ ಅದನ್ನು ದೇಶದ್ರೋಹ ಎಂದು ಹೇಳಲಾಗುವುದಿಲ್ಲ. ದೇಶದ್ರೋಹದ ಕಲಂನ ವ್ಯಾಖ್ಯಾನಿಸುವ ಸಮಯ ಬಂದಿದೆ. ಸರಕಾರದ ಮೇಲಾಗುವ ಟೀಕೆಗಳನ್ನು ದೇಶದ್ರೋಹವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !