
ನಗರ – ವಡಾಳಾ ಮಹಾದೇವ ಇಲ್ಲಿನ ಮಹಾಯೋಗಿ ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿಯವರ ಶಿಷ್ಯ ಹಾಗೂ ಉತ್ತರಾಧಿಕಾರಿ ಪ.ಪೂ. ಭಾಸ್ಕರ ಕಾಕಾ ಇವರು ಮೇ ೧೪ ರಂದು ಬೆಳಗ್ಗೆ ೬.೩೦ ಕ್ಕೆ ಶ್ರೀರಾಮಪುರದಲ್ಲಿನ ಗುರುದೇವ ಡಾ. ಕಾಟೆಸ್ವಾಮಿ ಆಶ್ರಮದಲ್ಲಿ ದೇಹತ್ಯಾಗ ಮಾಡಿದರು. ಅವರಿಗೆ ೬೧ ವರ್ಷ ವಯಸ್ಸಾಗಿತ್ತು. ಮೇ ೧೫ ರಂದು ಬೆಳಿಗ್ಗೆ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಅವರು ೨೭ ವರ್ಷಗಳ ಕಾಲ ಅಖಂಡವಾಗಿ ಹಾಗೂ ತಳಮಳದಿಂದ ಪ.ಪೂ. ಗುರುದೇವ ಕಾಟೆಸ್ವಾಮಿಯವರ ಸೇವೆಯನ್ನು ಮಾಡಿದರು. ಪ.ಪೂ. ಗುರುದೇವ ಡಾ. ಕಾಟೆಸ್ವಾಮಿಯವರು ದೇಹತ್ಯಾಗ ಮಾಡಿದ ನಂತರ ಆಶ್ರಮದ ಎಲ್ಲ ಜವಾಬ್ದಾರಿ ಅವರ ಮೇಲೆ ಇತ್ತು. ಇತ್ತೀಚಿನ ಕೆಲವು ದಿನಗಳಲ್ಲಿ ಅವರು ಶಿರ್ಡಿಯಲ್ಲಿನ ಆಸ್ಪತ್ರೆಯಲ್ಲಿ ಇದ್ದರು. ಇವರಿಗೆ ತಾಯಿ ಪ.ಪೂ. ಜಾನಕಿದೇವಿ ಮತ್ತು ಕಿರಿಯ ಸಹೋದರ ಇದ್ದಾರೆ. ಪ.ಪೂ. ಜಾನಕಿದೇವಿ ಇವರು ಉಚ್ಚ ಮಟ್ಟದ ಸಂತರಾಗಿದ್ದಾರೆ.

ಪ.ಪೂ. ಭಾಸ್ಕರಕಾಕಾ ಹಾಗೂ ಸನಾತನ ಸಂಸ್ಥೆ
ವಡಾಳಾ ಮಹಾದೇವದಲ್ಲಿನ ಜ್ಞಾನಯೋಗಿ ಪ.ಪೂ. ಡಾ. ಗುರುದೇವ ಕಾಟೆಸ್ವಾಮಿಯವರ ಶಿಷ್ಯ ಹಾಗೂ ಉತ್ತರಾಧಿಕಾರಿ ಪ.ಪೂ. ಭಾಸ್ಕರ ಕಾಕಾ ಇವರು ಕೆಲವು ದಿನ ಸನಾತನದ ರಾಮನಾಥಿ ಹಾಗೂ ದೇವದನ ಆಶ್ರಮದಲ್ಲಿ ವಾಸಿಸಿದ್ದರು. ಅವರು ಸಾಪ್ತಾಹಿಕ ‘ಸನಾತನ ಚಿಂತನ ಹಾಗೂ ಮಾಸಿಕ ‘ಘನಗರ್ಜಿತನಲ್ಲಿ ಪ್ರಕಟಿಸಿದ ಗುರುದೇವ ಡಾ. ಕಾಟೆಸ್ವಾಮೀಜಿ ಯವರ ಲೇಖನಗಳನ್ನು ‘ಸನಾತನ ಪ್ರಭಾತ ನಿಯತಕಾಲಿಕೆಯಲ್ಲಿ ಪ್ರಕಟಿಸಲು ಅನುವು ಮಾಡಿ ಕೊಟ್ಟಿದ್ದರು. ಸನಾತನದ ಆಶ್ರಮದಲ್ಲಿ ಅವರು ವಾಸವಿರುವಾಗ ಸಾಧಕರ ತೊಂದರೆಗಳು ದೂರವಾಗಲು ಅನೇಕ ಸಲ ಹವನಗಳನ್ನು ಮಾಡಿದ್ದರು. ಸನಾತನದ ಸಾಧಕರು ಅವರ ಆಶ್ರಮದಲ್ಲಿ ಜಪ ಇತ್ಯಾದಿ ಉಪಾಯಕ್ಕಾಗಿ ಹೋದಾಗ ಅವರು ತಮ್ಮ ಅಮೂಲ್ಯ ಜ್ಞಾನವನ್ನು ಸಾಧಕರಿಗೆ ನೀಡಿದ್ದರು.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !