
ಸನಾತನದ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಾಧಕಿ ಕು. ದೀಪಾಲಿ ಮತಕರ ಇವರ ಆರೋಗ್ಯವು ಅಕ್ಟೋಬರ್ ೨೦೧೬ ರಲ್ಲಿ ಬಹಳ ಗಂಭೀರವಾಗಿತ್ತು. ಅವರ ಮೇಲಿನ ಈ ಮಾರಣಾಂತಿಕ ಸಂಕಟ ದೂರವಾಗಬೇಕೆಂದು ಪರಾತ್ಪರ ಗುರು ಡಾಕ್ಟರರು ಸಂತರಿಗೆ ನಾಮಜಪ ಮಾಡಲು ಹೇಳಿದ್ದರು. ಮಹರ್ಷಿಗಳಲ್ಲಿಯೂ ಕು. ದೀಪಾಲಿಯವರ ಆರೋಗ್ಯಕ್ಕಾಗಿ ಪರಿಹಾರವನ್ನು ಕೇಳಿ ಯಜ್ಞವನ್ನು ಮಾಡಲಾಯಿತು. ಕು. ದೀಪಾಲಿ ಮತಕರ ಇವರ ಆರೋಗ್ಯ ಸುಧಾರಿಸಿದ ನಂತರ ಯಾವಾಗ ಅವರು ಪರಾತ್ಪರ ಗುರು ಡಾಕ್ಟರರನ್ನು ಭೇಟಿಯಾಗಲು ಬಂದರೋ, ಆಗ ನಡೆದ ಅತ್ಯಂತ ಹೃದಯಸ್ಪರ್ಶಿ ಸಂಭಾಷಣೆಯನ್ನು ಇಲ್ಲಿ ನೀಡುತ್ತಿದ್ದೇವೆ –
ಪರಾತ್ಪರ ಗುರು ಡಾಕ್ಟರ್ : ನನಗೆ ನನ್ನ ಒಂದು ತಪ್ಪು ಗಮನಕ್ಕೆ ಬಂದಿತು. ನಿನ್ನ ಸ್ಥಿತಿ ಗಂಭೀರವಾಗಿರುವುದು ತಿಳಿದಾಗ ನನಗೆ, ‘ನನ್ನ ಆಯುಷ್ಯವನ್ನು ನಿನಗೆ ಕೊಡಬೇಕು, ಎಂದೆನಿಸಿತು. ಆದರೆ ನಂತರ, ‘ಸಂತರ ಹೇಳಿಕೆಯಂತೆ ಈಗ ನನ್ನ ಆಯುಷ್ಯವು ಹೆಚ್ಚೆಂದರೆ ೨ – ೩ ವರ್ಷಗಳಷ್ಟೇ ಇದೆ. ಅಷ್ಟೇ ಆಯುಷ್ಯವನ್ನು ನಿನಗೆ ಕೊಟ್ಟು ಏನು ಉಪಯೋಗ ? ನಿನಗೆ ಇನ್ನೂ ೫೦-೬೦ ವರ್ಷಗಳ ಕಾಲ ಕಾರ್ಯ ಮಾಡಲಿಕ್ಕಿದೆ, ಎಂಬುದು ಗಮನಕ್ಕೆ ಬಂದಿತು.
ಕು. ದೀಪಾಲಿ ಮತಕರ : ನಿಮ್ಮಿಂದಾಗಿಯೇ ನಾನು ಜೀವಂತವಾಗಿದ್ದೇನೆ. ನಿಮ್ಮ ಕೃಪೆಯಿಂದಾಗಿಯೇ ಮಹರ್ಷಿಗಳು, ಸಂತರು ಹಾಗೂ ಸಾಧಕರು ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದರು. ‘ಪರಮ ಪೂಜ್ಯ ಗುರುಗಳೇ (ಪ.ಪೂ. ಡಾಕ್ಟರರೇ) ರಕ್ಷಣೆ ಮಾಡಬಹುದು, ಎಂದು ಮಹರ್ಷಿಗಳು ಹೇಳಿದ ಬಗ್ಗೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಕಾಕೂರವರು ನನಗೆ ಹೇಳಿದರು, ಅಂದರೆ ನಿಮ್ಮಿಂದಲೇ ನಾನು ಇಂದಿಗೂ ಜೀವಂತ ಇದ್ದೇನೆ. (‘ಆಗ ನನಗೆ ಬಹಳ ಕೃತಜ್ಞತೆ ಅನಿಸುತ್ತಿತ್ತು. ನಾನೇ ಅಲ್ಲ, ಈ ಘೋರ ಕಲಿಯುಗದಲ್ಲಿ ಎಲ್ಲ ಸಾಧಕರು ಗುರುದೇವರಿಂದಲೇ ಸುರಕ್ಷಿತರಾಗಿದ್ದಾರೆ. ಅವರ ಕೃಪೆಯಿಂದಲೇ ಉಸಿರಾಡುತ್ತಿದ್ದಾರೆ. ಸಾಧಕರ ಎಲ್ಲ ತೊಂದರೆಗಳನ್ನು ಅವರು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ. – ಕು. ದೀಪಾಲಿ ಮತಕರ)
ಧರ್ಮದ ಪುನರ್ಸ್ಥಾಪನೆಗಾಗಿ ಜನ್ಮಕ್ಕೆ ಬಂದಿರುವ ಮೂವರು ಗುರುಗಳು – ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ !
ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ ಅಂಜಲಿ ಗಾಡಗೀಳ ಇವರಿಂದ ಸತ್ತ್ವಗುಣಿ ಸನಾತನ ಧರ್ಮರಾಜ್ಯದ ಸ್ಥಾಪನೆಯಾಗುವುದು !
ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೆಂದರೆ ಸತ್ಯ ಸನಾತನ ಧರ್ಮದ ಉತ್ಸವ !
ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ತಮ್ಮ ಜನ್ಮೋತ್ಸವದ ದಿನ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡುವುದು, ಇದರ ಬಗ್ಗೆ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮ ಚಿತ್ರ ಮತ್ತು ಅದರ ವಿಶ್ಲೇಷಣೆ !