
* ಒಂದು ಪ್ರಸಂಗದಲ್ಲಿ ಓರ್ವ ಸಾಧಕಿಯು ತಾನು ಕಂಡ ಒಂದು ಕನಸಿನ ಬಗ್ಗೆ ಪರಾತ್ಪರ ಗುರು ಡಾಕ್ಟರರಿಗೆ ಹೇಳುತ್ತಿದ್ದಳು. ಆ ಕನಸಿನಲ್ಲಿ ಅವಳಿಗೆ ಪರಾತ್ಪರ ಗುರು ಡಾಕ್ಟರರು ಅವಳನ್ನು ಬಿಟ್ಟು ಹೋಗಿದ್ದು ಕಾಣಿಸಿತು. ಅವಳು ಆ ವಾಕ್ಯವನ್ನು ಪೂರ್ಣ ಹೇಳುವ ಮೊದಲೇ ಪರಾತ್ಪರ ಗುರು ಡಾಕ್ಟರರು, “ನಾನು ನನ್ನ ಸಾಧಕರನ್ನು ಎಂದಿಗೂ ಎಲ್ಲಿಯೂ ಬಿಟ್ಟು ಹೋಗುವುದಿಲ್ಲ, ಎಂದು ಹೇಳಿದರು. ನಂತರ ಸಂವಾದವು ಪೂರ್ಣಗೊಳ್ಳುವವರೆಗೆ ಅವರು ಇದೇ ವಾಕ್ಯವನ್ನು ೨-೩ ಬಾರಿ ಹೇಳಿದರು.
* ಒಂದು ಸಲ ಆಶ್ರಮಕ್ಕೆ ಬಂದ ಓರ್ವ ಸಂತರನ್ನು ಬೀಳ್ಕೊಟ್ಟು ಪರಾತ್ಪರ ಗುರು ಡಾಕ್ಟರರು ತಮ್ಮ ನಿವಾಸಕಕ್ಷೆಯ ಕಡೆಗೆ ಹೋಗುತ್ತಿದ್ದರು. ಆಗ ಮಾರ್ಗದಲ್ಲಿನ ಕೆಲವು ಸಾಧಕರು ಅವರಿಗೆ ಕೈ ಅಲುಗಾಡಿಸಿ ‘ಟಾಟಾ ಮಾಡಿದರು. ಆಗ ಪರಾತ್ಪರ ಗುರು ಡಾಕ್ಟರರು, “ನನ್ನನ್ನೇನು ಬೀಳ್ಕೊಡುತ್ತೀರಿ | ಎಲ್ಲಿ ಸಾಧಕರೋ ಅಲ್ಲಿ ನಾನು || ಎಂದರು.
* ಪರಾತ್ಪರ ಗುರುದೇವರಿಗಾಗಿ ಸಾಧಕರೇ ಎಲ್ಲವೂ ಆಗಿದ್ದಾರೆ. ‘ನನಗೆ ಎಲ್ಲ ಹೂವುಗಳಲ್ಲಿ ‘ಸಾಧಕ ಹೂವುಗಳು ಅತ್ಯಂತ ಪ್ರಿಯವಾಗಿವೆ, ಎಂದು ಅವರು ಒಂದು ಬಾರಿ ಹೇಳಿದ್ದರು.
* ನಿಮ್ಮೆಲ್ಲ ಸಾಧಕರ ಹಾಗೂ ನಿಮ್ಮ ಕುಟುಂಬದವರ ಜವಾಬ್ದಾರಿಯೂ ನನ್ನ ಮೇಲೆಯೇ ಇದೆ. – ಪರಾತ್ಪರ ಗುರು ಡಾ. ಆಠವಲೆ (ಮಹಾರಾಷ್ಟ್ರದ ಸಾವಂತವಾಡಿಯ ದೇವಸ್ಥಾನದಲ್ಲಿ ಸಾಧಕರಿಗೆ ಮಾಡಿದ ಮಾರ್ಗದರ್ಶನ)
ನಿಜವಾಗಿಯೂ ಅವರಿಗೆ, ‘ಸಾಧಕರಿಗಾಗಿ ಏನು ಮಾಡಲಿ, ಎಷ್ಟು ಮಾಡಲಿ, ಎಂದು ಅನಿಸುತ್ತಿರುತ್ತದೆ. ಅವರು ಸಾಧಕರ ಕೈಯನ್ನು ಬಿಡಲಿಕ್ಕಲ್ಲ, ಜನ್ಮಜನ್ಮಾಂತರಗಳಲ್ಲಿ ಜೊತೆ ನೀಡಲು, ಮೋಕ್ಷಪ್ರಾಪ್ತಿಯವರೆಗೆ ಅವರೊಂದಿಗೆ ಮಾರ್ಗಕ್ರಮಣ ಮಾಡಲೆಂದೇ ಹಿಡಿದಿದ್ದಾರೆ !
ಧರ್ಮದ ಪುನರ್ಸ್ಥಾಪನೆಗಾಗಿ ಜನ್ಮಕ್ಕೆ ಬಂದಿರುವ ಮೂವರು ಗುರುಗಳು – ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ !
ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ ಅಂಜಲಿ ಗಾಡಗೀಳ ಇವರಿಂದ ಸತ್ತ್ವಗುಣಿ ಸನಾತನ ಧರ್ಮರಾಜ್ಯದ ಸ್ಥಾಪನೆಯಾಗುವುದು !
ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೆಂದರೆ ಸತ್ಯ ಸನಾತನ ಧರ್ಮದ ಉತ್ಸವ !
ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ತಮ್ಮ ಜನ್ಮೋತ್ಸವದ ದಿನ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡುವುದು, ಇದರ ಬಗ್ಗೆ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮ ಚಿತ್ರ ಮತ್ತು ಅದರ ವಿಶ್ಲೇಷಣೆ !