ವರ್ಷಾರಂಭದಲ್ಲಿ ಶುದ್ಧ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿ ಸ್ವಭಾಷಾಭಿಮಾನವನ್ನು ಕಾಪಾಡಿರಿ !

ಚೈತ್ರ ಶುಕ್ಲ ಪಕ್ಷ ಪಾಡ್ಯದಂದು ಅಂದರೆ ಯುಗಾದಿಗೆ ಹಿಂದೂಗಳ ಹೊಸವರ್ಷ ಪ್ರಾರಂಭವಾಗುತ್ತದೆ. ತನ್ನಿಮಿತ್ತ ಈ ವರ್ಷ ಕನ್ನಡಿಗರು ಶುದ್ಧ ಕನ್ನಡ ಭಾಷೆಯಲ್ಲಿ ಮಾತನಾಡುವ ಸಂಕಲ್ಪ ಮಾಡಿ ಅದನ್ನು ಪೂರ್ಣತ್ವಕ್ಕೆ ಒಯ್ಯಬೇಕು. ಭಾಷೆ, ಮಾತು ಮತ್ತು ಲೇಖನ ಇವುಗಳ ಸಂದರ್ಭದಲ್ಲಿ ಕನ್ನಡ ಭಾಷೆಯ ಸದ್ಯದ ಸ್ಥಿತಿ ಎಷ್ಟು ದಯನೀಯವಾಗಿದೆಯೆನ್ನುವುದು, ಮನೆಮನೆಗಳಲ್ಲಿ ಮಾತನಾಡುವ ಕನ್ನಡದ ಉಚ್ಚಾರದಿಂದಲೇ ಅರಿವಾಗುತ್ತದೆ. ಭಾಷಾಶುದ್ಧಿಯು ರಾಷ್ಟ್ರಹಿತದ ಮತ್ತು ಸ್ವ-ರಕ್ಷಣೆಯ ವಿಷಯವಾಗಿದೆ. ಇದನ್ನು ಕಾರ್ಯಗತಗೊಳಿಸಲು ರಕ್ತ ಹರಿಸುವ ಅವಶ್ಯಕತೆಯಿಲ್ಲ ಅಥವಾ ಹಣಕಾಸಿನ ವೆಚ್ಚವೂ ಆಗುವುದಿಲ್ಲ.ಇದಕ್ಕೆ ಕೇವಲ ಮನಸ್ಸಿನ ಸಂಕಲ್ಪಶಕ್ತಿಯ ಅವಶ್ಯಕತೆಯಿದೆ. ಭಾಷಾಶುದ್ಧಿಯಿಂದ ಸಮಾಜದ ರಚನೆಯಾಗುತ್ತದೆ. ಸಮಾಜದಲ್ಲಿ ಅಭಿವೃದ್ಧಿಶೀಲ ಮನಸ್ಸು ಮತ್ತು ಬುದ್ಧಿಯ ಸಂಯೋಗವಿದ್ದರೆ. ಸುದೃಢ ರಾಷ್ಟ್ರ ನಿರ್ಮಾಣವಾಗುತ್ತದೆ. ಭಾಷಾಶುದ್ಧಿಯ ವ್ರತ ವನ್ನು ಅಂಗೀಕರಿಸುವುದು ಎಂದರೆ ಪ್ರತಿಯೊಂದು ಜೀವವು ಯೋಗ್ಯ ಅಂದರೆ ಶುದ್ಧ ಭಾಷೆಯನ್ನು ಉಚ್ಚರಿಸುವುದಾಗಿದೆ. ಅದರೊಂದಿಗೆ ಭಾಷೆಯಲ್ಲಿರುವ ದೇವರೂಪಿ ಚೈತನ್ಯವನ್ನು ಸ್ವತಃ ಗ್ರಹಿಸಲು ಪ್ರಯತ್ನಿಸಿದರೆ ವಾಯುಮಂಡಲ ಹಾಗೂ ಸಮಾಜ ಶುದ್ಧಗೊಳ್ಳುತ್ತದೆ. ಶುದ್ಧ ಭಾಷೆಯ ಉಚ್ಚಾರಣೆಯಿಂದ ಜೀವದಲ್ಲಿ ನಿಧಾನವಾಗಿ ಚೈತನ್ಯದ ಬೀಜವು ಮೊಳಕೆಯೊಡೆದು ಈಶ್ವರೀ ಗುಣಗಳ ಸಂವರ್ಧನೆಯು ಪ್ರಾರಂಭವಾಗುತ್ತದೆ. ಇದಕ್ಕಾಗಿ ಆಂಗ್ಲ, ಫಾರಸಿ, ಅರಬ್ಬಿ, ಉರ್ದು ಇತ್ಯಾದಿ ಪರಕೀಯ ಭಾಷೆಗಳ ಗುಲಾಮಗಿರಿಯನ್ನು ನಷ್ಟಗೊಳಿಸಲು ಕ್ರಿಯಾಶೀಲರಾಗಿರಿ.