ದೇವಸ್ಥಾನ ಸರಕಾರೀಕರಣ : ದೇವನಿಧಿಯನ್ನು ಕೊಳ್ಳೆ ಹೊಡೆಯುವ ಹಿಂದೂದ್ವೇಷಿ ವ್ಯವಸ್ಥೆ!

ಕೊರೋನಾ ಹಿನ್ನೆಲೆಯಲ್ಲಿ ಸಂಚಾರನಿಷೇಧದಿಂದಾಗಿ ದೇಶ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಇದರ ಪರಿಹಾರಕ್ಕಾಗಿ ಅನೇಕ ಜನಪ್ರತಿನಿಧಿಗಳು, ಪ್ರಗತಿ(ಅಧೋಗತಿ)ಪರರು ಮುಂತಾದವರು ಹಿಂದೂಗಳ ದೇವಸ್ಥಾನಗಳ ನಿಧಿ ಮತ್ತು ಸಂಪತ್ತನ್ನು ಉಪಯೋಗಿಸಬೇಕೆನ್ನುವ ಹಿಂದೂ ದ್ವೇಷಿ ಸಲಹೆಗಳನ್ನು ನೀಡಲಾಗಿತ್ತು. ಸ್ವಾತಂತ್ರ್ಯದ ನಂತರದ ೭೨ ವರ್ಷಗಳಲ್ಲಿ ಸರಕಾರಗಳು ಕೇವಲ ಹಿಂದೂಗಳ ಅನೇಕ ದೇವಸ್ಥಾನಗಳ ಸರಕಾರಿಕರಣ ಮಾಡಿ ದೇವಸ್ಥಾನಗಳ ಸಂಪತ್ತನ್ನು ತನ್ನ ಪಿತ್ರಾರ್ಜಿತ ಸಂಪತ್ತೆಂಬಂತೆ ಅದನ್ನು ಕಥಿತ ಅಭಿವೃದ್ಧಿಕಾರ್ಯಗಳು, ದೇಣಿಗೆ, ಇತರ ಪಂಥೀಯರಿಗೆ ಸಹಾಯ ಇತ್ಯಾದಿ ಅಧಾರ್ಮಿಕ ವಿಷಯಗಳಿಗಾಗಿ ಖರ್ಚು ಮಾಡಿವೆ. ವಾಸ್ತವದಲ್ಲಿ ಹಿಂದೂ ದೇವಸ್ಥಾನಗಳ ನಿಧಿಯನ್ನು ಕೇವಲ ಹಿಂದೂ ಧರ್ಮಕಾರ್ಯಕ್ಕಾಗಿಯೇ ಖರ್ಚು ಮಾಡಬೇಕು. ಜಾತ್ಯತೀತ ದೇಶದಲ್ಲಿ ಕೇವಲ ಹಿಂದೂಗಳ ದೇವಸ್ಥಾನಗಳನ್ನೇ ಏಕೆ ಸರಕಾರಿರಣ ಮಾಡಲಾಗುತ್ತದೆ ? ಇತರ ಪಂಥೀಯರ ಶ್ರದ್ಧಾಸ್ಥಾನಗಳ ಸರಕಾರಿಕರಣ ಏಕೆ ಮಾಡಲ್ಲ ?, ಎನ್ನುವ ಪ್ರಶ್ನೆಗೆ ಇದುವರೆಗಿನ ಎಲ್ಲ ಸರಕಾರಗಳು ಮೌನ ವಹಿಸಿವೆ. ‘ಎಲ್ಲ ಕ್ಷೇತ್ರಗಳ ಖಾಸಗೀಕರಣವಾಗುತ್ತಿರುವಾಗ ಕೇವಲ ದೇವಸ್ಥಾನಗಳನ್ನೇ ಏಕೆ ಸರಕಾರಿಕರಣ ಮಾಡಲಾಗುತ್ತದೆ ?, ಈ ಪ್ರಶ್ನೆ ಸಹ ಅವರಿಗೆ ಅಡಚಣೆಯನ್ನುಂಟು ಮಾಡುತ್ತದೆ. ಇದು ಧಾರ್ಮಿಕ ತಾರತಮ್ಯ ಅಲ್ಲವೇ ?, ಯಾವುದೋ ಕಾರಣವನ್ನು ಮುಂದೆ ಮಾಡಿ ದೇವಸ್ಥಾನಗಳ ಸಂಪತ್ತನ್ನು ಉಪಯೋಗಿಸುವ ಹಿಂದೂದ್ವೇಷಿ ಸಲಹೆಯನ್ನು ನೀಡುವ ಜನಪ್ರತಿನಿಧಿಗಳು, ಪ್ರಗತಿ(ಪ್ರಗತಿ)ಪರರು ಮುಂತಾದವರು ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದು ಅದನ್ನು ಉಪಯೋಗಿಸಬೇಕೆಂದು ಏಕೆ ಹೇಳುವುದಿಲ್ಲ ? ವಾಸ್ತವದಲ್ಲಿ ಭ್ರಷ್ಟಾಚಾರವಿಲ್ಲದ ಸರಕಾರದ ಒಂದೂ ಇಲಾಖೆಯೇ ಇಲ್ಲ. ಆದ್ದರಿಂದ ಸರಕಾರಿಕರಣವಾಗಿರುವ ದೇವಸ್ಥಾನಗಳು ಅದರಿಂದ ಹೇಗೆ ಪ್ರತ್ಯೇಕವಾಗಿರಬಲ್ಲವು ? ಇದೆಲ್ಲವೂ ಧರ್ಮಹಾನಿಯೇ ಆಗಿದೆ. ದೇವಸ್ಥಾನಗಳು ಚೈತನ್ಯದ ಸ್ರೋತವಾಗಿವೆ, ಆದ್ದರಿಂದ ಅವುಗಳು ಭಕ್ತರ ವಶದಲ್ಲಿರಬೇಕು. ಅದಕ್ಕಾಗಿ ಹಿಂದೂಗಳು ಕಾನೂನುಮಾರ್ಗದಲ್ಲಿ ಪ್ರಯತ್ನಿಸಬೇಕು. ದೇಶವು ಸ್ವತಂತ್ರವಾಗುವ ಮೊದಲು ಆಂಗ್ಲರು ಮತ್ತು ಸ್ವಾತಂತ್ರ್ಯದ ನಂತರ ೧೯೫೧ ರಿಂದ ದೇವಸ್ಥಾನ ಸರಕಾರಿಕರಣ ಕಾನೂನು ಆದ ನಂತರ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ದೇವನಿಧಿಯನ್ನು ಹೇಗೆ ಕೊಳ್ಳೆಹೊಡೆಯಲಾಯಿತು, ಎಂಬುದರ ವಾಸ್ತವಿಕತೆಯನ್ನು ಮಂಡಿಸುವ ಈ ಲೇಖನವನ್ನು ನಮ್ಮ ವಾಚಕರಿಗಾಗಿ ೨ ಭಾಗಗಳಲ್ಲಿ ಪ್ರಕಟಿಸುತ್ತಿದ್ದೇವೆ.

(ಭಾಗ ೧)

೧. ದೇವಸ್ಥಾನ ಸರಕಾರೀಕರಣ ಕಾನೂನಿನ ಮೂಲಕ ನಡೆಯುತ್ತಿರುವ ವಿಶ್ವದ ಸ್ವತ್ತಾಗಿರುವ ದೇವಸ್ಥಾನಗಳ ಸಾಮೂಹಿಕ ಹತ್ಯಾಕಾಂಡ

ತಂಜಾವೂರು (ತಮಿಳುನಾಡು) ಎಂಬಲ್ಲಿ ಚೋಳ ರಾಜ ರಾಜೇಂದ್ರ ಇವರು ೧ ಸಾವಿರ ವರ್ಷಗಳಷ್ಟು ಹಿಂದೆ ನಿರ್ಮಿಸಿದ ಒಂದು ಪ್ರಾಚೀನ ದೇವಸ್ಥಾನವನ್ನು ರಾಜ್ಯ ಸರಕಾರವು ಏಪ್ರಿಲ್ ೨೦೧೬ ರಲ್ಲಿ ಕೆಡವಿತು. ‘ದೇವಸ್ಥಾನವನ್ನು ನವೀಕರಣ ಮತ್ತು ವಿಸ್ತಾರ ಮಾಡಿ ಪುನಃ ನಿರ್ಮಿಸಲಾಗುವುದು, ಎಂದು ರಾಜ್ಯ ಸರಕಾರ ಆಶ್ವಾಸನೆಯನ್ನು ನೀಡಿತ್ತು. ಇಂತಹ ದೇವಸ್ಥಾನವನ್ನು ಪುನಃ ನಿರ್ಮಿಸಲು ಸಾಧ್ಯವೇ ಇಲ್ಲ, ಎಂಬುದು ಎಲ್ಲರಿಗೂ ತಿಳಿದಿತ್ತು. ಆಂಧ್ರಪ್ರದೇಶದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯರು ನಿರ್ಮಿಸಿದ ೫೦೦ ವರ್ಷಗಳಷ್ಟು ಪುರಾತನ ಶ್ರೀ ಕಾಳಹಸ್ತಿ ದೇವಸ್ಥಾನವನ್ನು ಮೇ ೨೦೧೦ ರಲ್ಲಿ ಸದ್ದಿಲ್ಲದೆ ಧ್ವಂಸ ಮಾಡಿದರು; ಏಕೆಂದರೆ ಅನೇಕ ವರ್ಷಗಳಿಂದ ಈ ದೇವಸ್ಥಾನದ ನಿರ್ವಹಣೆಯಲ್ಲಿ ನಿಷ್ಕಾಳಜಿ ವಹಿಸಲಾಗುತ್ತಿತ್ತು. ಆಗಸ್ಟ್ ೨೦೧೭ ರಲ್ಲಿ ‘ಯುನೆಸ್ಕೋ (ಸಂಯುಕ್ತ ರಾಷ್ಟ್ರ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ‘ರಾಜ್ಯದಲ್ಲಿನ ಸುಮಾರು ೩೬ ಸಾವಿರ ದೇವಸ್ಥಾನಗಳಿಗೆ ಪುರಾತತ್ವ ವಿಶೇಷಜ್ಞರ ಮತ್ತು ಕುಶಲ ಅಭಿಯಂತರ ನಿರ್ವಹಣೆಯ ಅವಶ್ಯಕತೆಯಿದೆ, ಎಂದು ಎಚ್ಚರಿಕೆ ನೀಡುವ ವರದಿಯನ್ನು ತಮಿಳುನಾಡು ಸರಕಾರಕ್ಕೆ ನೀಡಿತ್ತು. ಇದರಲ್ಲಿ ‘ಯುನೆಸ್ಕೊ ಹೇಳಿತ್ತೇನೆಂದರೆ, ‘ಇಂತಹ ದುರ್ಲಭ ದೇವಸ್ಥಾನಗಳಲ್ಲಿನ ಕಲಾಕೃತಿ ಮತ್ತು ವಾಸ್ತುರಚನೆಯನ್ನು ನೋಡುವಾಗ ಈ ರೀತಿ ಮಾಡುವ ಮೂಲಕ ಪ್ರಾಚೀನ ದೇವಸ್ಥಾನಗಳ ಸಾಮೂಹಿಕ ಹತ್ಯಾಕಾಂಡವೆ ಆಗುತ್ತಿದೆ; ಆದರೆ ತಮಿಳುನಾಡು ಸರಕಾರ ‘ಯುನೆಸ್ಕೋದ ಈ ವರದಿಯನ್ನು ಸಂಪೂರ್ಣ ನಿರ್ಲಕ್ಷಿಸಿತು.

ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಅನೇಕ ವಿಶಾಲವಾದ ದೇವಸ್ಥಾನಗಳು ವಿಶ್ವದ ಸ್ವತ್ತು ಎಂಬ ಸ್ಥಾನದಲ್ಲಿದ್ದು ಅವುಗಳು ಸಂಸ್ಕೃತಿಯ ವಾಹಕದ ಸಾಧನವಾಗಿವೆ. ತಮಿಳುನಾಡಿನಲ್ಲಿ ಕನಿಷ್ಠ ೨ ಡಜನ್ ದೇವಸ್ಥಾನಗಳು ೧ ಸಾವಿರ ವರ್ಷಗಳಷ್ಟು ಹಳೆಯದಾಗಿದ್ದರೂ ಈಗಲೂ ಅವುಗಳು ಒಳ್ಳೆಯ ಸ್ಥಿತಿಯಲ್ಲಿವೆ. ಈ ದೇವಸ್ಥಾನಗಳ ರಕ್ಷಣೆ ಮತ್ತು ನಿರ್ವಹಣೆ ಮಾಡುವ ಅವಶ್ಯಕತೆಯಿದೆ; ಆದರೆ ಸರಕಾರ ಇದನ್ನು ನಿರ್ಲಕ್ಷ ಮಾಡುತ್ತಿದೆ. ಅದರ ಮೂಲ ಕಾರಣವೆಂದರೆ, ‘ಹಿಂದೂ ಧಾರ್ಮಿಕ ದೇವಸ್ಥಾನಗಳು ಮತ್ತು ಹಿಂದೂ ಧಾರ್ಮಿಕ ದತ್ತಿ ಸಂಸ್ಥೆ ಸರಕಾರೀಕರಣ ಕಾನೂನು ೧೯೫೧ ! (ಹಿಂದೂ ರಿಲಿಜಿಯನ್ ಎಂಡ್ ಚಾರಿಟೇಬಲ್ ಎಂಡೋಮೆಂಟ್ ಆಕ್ಟ್ ೧೯೫೧ (ಎಚ್.ಆರ್.ಸಿ.ಇ.)

 ೨. ದೇವಸ್ಥಾನಗಳ  ನಿರ್ವಹಣೆಗೆ ಅನಿಯಂತ್ರಿತ ಅಧಿಕಾರವನ್ನು ನೀಡಿರುವ ದೇವಸ್ಥಾನ ಸರಕಾರೀಕರಣ ಕಾನೂನು

ಈ ಕಾನೂನಿನಿಂದಾಗಿ ರಾಜ್ಯ ಸರಕಾರಗಳಿಗೆ ಕೇವಲ ದೇವಸ್ಥಾನಗಳನ್ನು ನಿಯಂತ್ರಿಸಲು ಅಧಿಕಾರ ಸಿಕ್ಕಿದೆ. ಸರಕಾರಕ್ಕೆ ದೇವಸ್ಥಾನಗಳ ಮೇಲೆ ಸಂಪೂರ್ಣ ನಿಯಂತ್ರಣವಿರುವುದರಿಂದ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹಣ, ಅವುಗಳ ಭೂಮಿ ಮತ್ತು ಇತರ ಸಾಮಾಗ್ರಿಗಳ ವಿಷಯದಲ್ಲಿ ಕೇವಲ ಸರಕಾರ ಮಾತ್ರ ನಿರ್ಣಯ ತೆಗೆದುಕೊಳ್ಳಲು ಸಾಧ್ಯ. ಆ ವಿಷಯದಲ್ಲಿ ಶಂಕರಾಚಾರ್ಯರು ಅಥವಾ ಹಿಂದೂ ಸಂಘಟನೆಗಳು ಯಾವುದೇ ನಿರ್ಣಯ ತೆಗೆದುಕೊಳ್ಳುವ ಹಾಗಿಲ್ಲ ! ಆದ್ದರಿಂದ ಸ್ವಾಭಾವಿಕವಾಗಿಯೇ ದೇವಸ್ಥಾನಗಳಿಗೆ ಬರುವ ದೊಡ್ಡ ಪ್ರಮಾಣದ ಆದಾಯದಲ್ಲಿ ರಾಜಕೀಯ ನೇತಾರರು, ಜಾತ್ಯತೀತರು, ಸರಕಾರೇತರ ಸಂಸ್ಥೆಗಳು ಮತ್ತು ಹಿಂದೂವಿರೋಧಿ ಸ್ವಾರ್ಥಿಗಳ ದೊಡ್ಡ ಪಾಲುದಾರಿಕೆ ಇರುತ್ತದೆ. ದೇವಸ್ಥಾನಗಳನ್ನು ಸರಕಾರ ನಿಯಂತ್ರಣ ಮಾಡುವುದೆಂದರೆ, ಇದು ಕೋಳಿಯ ಗೂಡನ್ನು ರಕ್ಷಿಸಲು ನರಿಯನ್ನು ನೇಮಕ ಮಾಡಿದಂತೆ ಆಗಿದೆ. ಈ ‘ಎಚ್.ಆರ್.ಸಿ.ಇ. ಕಾನೂನಿನ ಮೂಲಕ ರಾಜ್ಯ ಸರಕಾರಕ್ಕೆ ದೇವಸ್ಥಾನಗಳಲ್ಲಿನ ವ್ಯವಹಾರವನ್ನು ನಿಯಂತ್ರಿಸಲು ನ್ಯಾಸ ಅಥವಾ ಸ್ವತಂತ್ರ ಸಮಿತಿಗಳನ್ನು ಮಾಡುವ ಅಧಿಕಾರವಿದೆ. ಆದ್ದರಿಂದ ಸ್ವಾಭಾವಿಕವಾಗಿ ಈ ನ್ಯಾಸಗಳ ನಿರ್ದಿಷ್ಟ ಹುದ್ದೆಗಳಲ್ಲಿ ಸರಕಾರದ ಮಂತ್ರಿಗಳು, ಐಎಎಸ್ ಅಧಿಕಾರಿ ಅಥವಾ ರಾಜಕೀಯ ನೇತಾರರ ಚಮಚಾಗಳೆ ತುಂಬಿಕೊಂಡಿರುತ್ತಾರೆ. ಅವರಿಗೆ ಧರ್ಮ, ಧಾರ್ಮಿಕ ಪದ್ಧತಿ, ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡುವುದು ಇತ್ಯಾದಿಗಳ ಬಗ್ಗೆ ಏನೂ ಸಂಬಂಧವಿರುವುದಿಲ್ಲ. ಅವರಿಗೆ ಕೇವಲ ನ್ಯಾಸದ ಮೂಲಕ ಸಿಗುವ ಸನ್ಮಾನ ಮತ್ತು ಸೌಲಭ್ಯಗಳೊಂದಿಗೆ ಮಾತ್ರ ಸಂಬಂಧವಿರುತ್ತದೆ. ಸರ್ವೋಚ್ಚ ನ್ಯಾಯಾಲಯದ ಒಂದು ನಿರ್ಣಯಕ್ಕನುಸಾರ ರಾಜ್ಯ ಸರಕಾರವು ನ್ಯಾಸ ಅಥವಾ ಸರಕಾರ ಸ್ಥಾಪಿಸಿದ ಸಮಿತಿಗಳಿಗೆ ಯಾರನ್ನು ಬೇಕಾದರೂ ನೇಮಕ ಮಾಡಬಹುದು ಅಂದರೆ ದೇವಸ್ಥಾನ ವ್ಯವಸ್ಥಾಪನೆಯ ಇಂತಹ ನ್ಯಾಸಕ್ಕೆ ಎಡಪಂಥೀಯ, ಕಾಲ್ಪನಿಕ ಜಾತ್ಯತೀತವಾದಿಗಳು, ನಾಸ್ತಿಕರು ಮುಂತಾದವರ ನೇಮಕ ಮಾಡ ಬಹುದು. ಯಾವುದೇ ಹಿಂದೂ ಸಂಘಟನೆ ಅಥವಾ ಧಾರ್ಮಿಕ ಗುರುಗಳಿಗೆ ಈ ವಿಷಯದಲ್ಲಿ ಮಾತನಾಡುವ ಅಧಿಕಾರವಿಲ್ಲ.

೪. ತಮಿಳುನಾಡು ವಿಧಾನಸಭೆಯಲ್ಲಿ ದೇವಸ್ಥಾನ ಸರಕಾರೀಕರಣ ಕಾನೂನನ್ನು ಮಂಡಿಸುವಾಗ ಹಿಂದೂಗಳು ಅದನ್ನು ವಿರೋಧಿಸಲಿಲ್ಲ

೧೯೫೧ ರಲ್ಲಿ ತಮಿಳುನಾಡಿನಲ್ಲಿ ಈ ಕಾನೂನನ್ನು ಜಾರಿಗೊಳಿಸುವಾಗ ವಿಧಾನಸಭೆಯಲ್ಲಿ ಅಂದಿನ ಮಂತ್ರಿ ಓ.ಪಿ. ರಾಮಸ್ವಾಮಿ ರೆಡ್ಡಿಯಾರ ಇವರು ಒಂದು ಆದರ್ಶವಾಕ್ಯವನ್ನು ಹೇಳಿದ್ದರು, “ಈ ಕಾನೂನನ್ನು ಮಂಡಿಸುವಾಗ ನಾನು ಇದನ್ನು ಸ್ಪಷ್ಟಪಡಿಸುತ್ತೇನೆ, ಏನೆಂದರೆ, ನನ್ನ ಮನಸ್ಸಿನಲ್ಲಿ ಧಾರ್ಮಿಕ ಶ್ರದ್ಧೆಯ ಬಗ್ಗೆ ಮನಃಪೂರ್ವ ಗೌರವವಿದೆ. ಹಿಂದೂ ದೇವಸ್ಥಾನ ಮತ್ತು ಮಠಗಳ ವ್ಯವಸ್ಥಾಪನೆ ಮಾಡುವುದು ಆವಶ್ಯಕವಾಗಿದೆ. ಅದರಿಂದ ಅವುಗಳನ್ನು ಒಳ್ಳೆಯ ರೀತಿಯಲ್ಲಿ ಪುನರ್ಸ್ಥಾಪನೆ ಮಾಡಬಹುದು. ಸಮಾಜ, ಹಿಂದೂ ಮತ್ತು ಧಾರ್ಮಿಕ ಪುನರುತ್ಥಾನಕ್ಕಾಗಿ ಇದರ ಅವಶ್ಯಕತೆಯಿದೆ. ಆಗ ಹಿಂದೂಗಳು ಸಂಘಟಿತರಾಗಿ ಈ ವಿಷಯವನ್ನು ವಿರೋಧಿಸಲಿಲ್ಲ, ಅಂದರೆ ಕೇವಲ ದೇವಸ್ಥಾನ ಮತ್ತು ಮಠಗಳನ್ನೆ ಸರಕಾರವು ಏಕೆ ವಶಪಡಿಸಿಕೊಳ್ಳುತ್ತಿದೆ ? ಮಸೀದಿ, ಮದರಸಾ, ವಕ್ಫ್ ಬೋರ್ಡ್, ಚರ್ಚ್, ಮಿಶನರಿ ನ್ಯಾಸ, ಸ್ಮಶಾನ (ಕಬ್ರಸ್ತಾನ), ಆರೋಗ್ಯಕೇಂದ್ರಗಳು ಇತ್ಯಾದಿಗಳನ್ನು ಮೇಲೆ ಕೂಡ ಸರಕಾರವು ಯಾಕೆ ತನ್ನ ನಿಯಂತ್ರಣಕ್ಕೊಳಪಡಿಸುವುದಿಲ್ಲ ? ಕೇರಳದಲ್ಲಿ ಹಿಂದೂ ಧರ್ಮವಿರೋಧಿ ಎಡಪಂಥೀಯರು, ತಮಿಳುನಾಡಿನಲ್ಲಿ ರಾಮನ ಅಸ್ತಿತ್ವವನ್ನು ನಿರಾಕರಿಸುವ ಹಾಗೂ ತಮ್ಮನ್ನು ನಾಸ್ತಿಕ ರೆಂದು ಹೇಳಿಕೊಳ್ಳುವ ದ್ರಾವಿಡ ಪಕ್ಷ ಮತ್ತು ಆಂಧ್ರಪ್ರದೇಶದ ರಾಜಶೇಖರ ರೆಡ್ಡಿಯವರಂತಹ ‘ಕ್ರಿಪ್ಟೋ ಕ್ರೈಸ್ತ (ಅವರು ತಿರುಪತಿ ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಾಣ ಮಾಡಬೇಕೆಂದು ಒತ್ತಡ ಹೇರಿದ್ದರು) ಇವರ ವಶದಲ್ಲಿ ಸಾವಿರಾರು ದೇವಸ್ಥಾನಗಳ ಆರ್ಥಿಕ ವ್ಯವಹಾರದ ಹೊಣೆಯಿದೆ. ಈಗ ನೀವೇ ವಿಚಾರ ಮಾಡಬಹುದು, ಈ ರಾಜ್ಯಗಳಲ್ಲಿ ಈ ಜನರು ಕಳೆದ ೬೦ ವರ್ಷಗಳಲ್ಲಿ ದೇವಸ್ಥಾನಗಳ ಎಷ್ಟು ಸಂಪತ್ತನ್ನು ಕಬಳಿಸಿ ಹಂಚಿಕೊಂಡಿರಬಹುದು.

೫. ಜನರನ್ನು ಉದ್ಧಾರ ಮಾಡುವ ನೆಪದಲ್ಲಿ ಶ್ರೀಮಂತ ದೇವಸ್ಥಾನಗಳ ಸಂಪತ್ತನ್ನು ವರ್ಷಾನುವರ್ಷ ‘ಹೋಲ್‌ಸೇಲ್ ಆಗಿ ಲೂಟಿ ಮಾಡುವ ರಾಜ್ಯ ಸರಕಾರಗಳು

೧೯೫೧ ರಲ್ಲಿ ತಮಿಳುನಾಡು ಸರಕಾರದ ಈ ಕರಾಳ ಕಾನೂನಿನ ಮಸೂದೆ ಅಂಗೀಕಾರವಾದ ನಂತರ ಅನೇಕ ರಾಜ್ಯಗಳು ತಕ್ಷಣ ತಮ್ಮ ತಮ್ಮ ವಿಧಾನಸಭೆಯಲ್ಲಿ ಈ ಕಾನೂನಿನ ತತ್ಸಮಾನವಾದ ಕಾನೂನನ್ನು ಮಾಡಿದವು ಹಾಗೂ ದೇವಸ್ಥಾನಗಳ ಸಂಪತ್ತು, ದಾನದಲ್ಲಿ ಬರುವ ಕೋಟಿಗಟ್ಟಲೆ ರೂಪಾಯಿಗಳನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಆರಂಭಿಸಿದವು. ಪ್ರಖ್ಯಾತ ಹಾಗೂ ಶ್ರೀಮಂತ ದೇವಸ್ಥಾನಗಳಿಂದ (ಆಂಧ್ರಪ್ರದೇಶದಲ್ಲಿ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನ, ಶ್ರೀ ಗುರುವಾಯೂರು ದೇವಸ್ಥಾನ, ಮುಂಬಯಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನ) ಸಂಬಂಧಪಟ್ಟ ರಾಜ್ಯ ಸರಕಾರಗಳು ‘ಜನರ ಉದ್ಧಾರ ಮತ್ತು ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಹಣವನ್ನು ಕಸಿದುಕೊಳ್ಳುತ್ತಿವೆ. ಅದು ಕೊನೆಗೆ ನೇತಾರರು ಮತ್ತು ಐಎಎಸ್ ಅಧಿಕಾರಿಗಳ ಜೇಬಿಗೆ ಹೋಗುತ್ತದೆ. ಇಂತಹ ‘ಹೋಲ್‌ಸೇಲ್ ಲೂಟಿ (ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡುವುದು) ಹಲವಾರು ವರ್ಷಗಳಿಂದ ನಡೆಯುತ್ತಿದೆ. ಧರ್ಮಾಚಾರ್ಯರು, ಹಿಂದೂ ಸಂಘಟನೆ ಗಳು ಅಥವಾ ಪ್ರವಚನಕಾರರು ಇದರ ವಿರುದ್ಧ ಧ್ವನಿ ಎತ್ತುವುದಿಲ್ಲ. ತಮಿಳುನಾಡಿನ ಎಚ್.ಆರ್.ಸಿ.ಇ. ವಿಭಾಗವು ಸದ್ಯ ಹಿಂದೂಗಳ ದೇವಸ್ಥಾನಗಳ ೪ ಲಕ್ಷ ಎಕರೆ ಕೃಷಿ ಭೂಮಿ, ೨ ಕೋಟಿ ಚದರಡಿಗಳಷ್ಟು ನಿವಾಸಿ-ವ್ಯವಸಾಯಿಕ ಕಟ್ಟಡಗಳು ಮತ್ತು ೨೯ ಕೋಟಿ ಚದರಡಿಗಳಷ್ಟು ನಗರಗಳಲ್ಲಿ ಭೂಮಿಯನ್ನು ನಿಯಂತ್ರಿಸುತ್ತಿದೆ. ಇದರಿಂದ ಸರಕಾರಕ್ಕೆ ಪ್ರತಿವರ್ಷ ೩೬ ಕೋಟಿ ರೂಪಾಯಿಗಳಷ್ಟು ಉತ್ಪನ್ನ ಬರುತ್ತದೆ, ಎಂದು ಹೇಳಲಾಗುತ್ತದೆ. ಇಷ್ಟು ದೊಡ್ಡ ಭೂಮಿಯಿಂದ ಅದಕ್ಕೂ ಹೆಚ್ಚು ಉತ್ಪನ್ನ ಬರುತ್ತದೆ, ಎನ್ನುವುದು ಒಬ್ಬ ಸಾಮಾನ್ಯ ವ್ಯಕ್ತಿಗೂ ತಿಳಿಯಬಹುದು; ಆದರೆ ತಥಾಕಥಿತ ವ್ಯವಸ್ಥಾಪನೆಯ ಹೆಸರಿನಲ್ಲಿ ಹಿಂದೂ ವಿರೋಧಿ ತಂಡಗಳು ಲಾಭ ಪಡೆಯುತ್ತಿರುವುದರಿಂದ ೧ ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯ ಪಡೆಯಲು ಸಾಧ್ಯವಿರುವಾಗ ಕೂಡ ಅದು ಕೇವಲ ೩೬ ಕೋಟಿ ರೂಪಾಯಿಗಳಷ್ಟೆ ಕಾಣಿಸುತ್ತದೆ. ಈ ೩೬ ಕೋಟಿ ರೂಪಾಯಿಗಳಿಂದ ಎಷ್ಟು ಮೊತ್ತವನ್ನು ದೇವಸ್ಥಾನಗಳ ನಿರ್ವಹಣೆಗಾಗಿ ಮತ್ತು ಹೊಸ ನಿರ್ಮಾಣ ಕಾರ್ಯಕ್ಕಾಗಿ ಖರ್ಚಾಗುತ್ತದೆ ಹಾಗೂ ಎಷ್ಟು ಮೊತ್ತ ಅನಾವಶ್ಯಕ ಖರ್ಚಾಗುತ್ತದೆ, ಎನ್ನುವ ವಿಷಯದಲ್ಲಿ ಮಾಹಿತಿ ಹಕ್ಕು ಆಧಾರದಿಂದ ಪಡೆದಿರುವ ಮಾಹಿತಿಯಿಂದ ತಿಳಿದುಕೊಳ್ಳಬಹುದು.

೫. ಸರಕಾರೀಕರಣ ಆಗಿರುವ ದೇವಸ್ಥಾನಗಳ ನ್ಯಾಸದಲ್ಲಿ ಹಿಂದೂ ಪ್ರತಿನಿಧಿಗಳು ಇಲ್ಲದ ಕಾರಣ ದೊಡ್ಡ ಪ್ರಮಾಣದಲ್ಲಿ ಆಗುವ ಹಾನಿ

ದೇವಸ್ಥಾನಗಳ ಸಂಪತ್ತಿನ ಮೇಲೆ ಉದ್ದೇಶಪೂರ್ವಕವಾಗಿ ಆರ್ಥಿಕ ನಿಯಂತ್ರಣವನ್ನು ಹೇರಲಾಗಿದೆ, ಅದರಿಂದ ದೇವಸ್ಥಾನಗಳ ವ್ಯವಸ್ಥಾಪನೆಗೆ ಅತೀ ಕಡಿಮೆ ಖರ್ಚು ಮಾಡಿ ದಾನಪೆಟ್ಟಿಗೆ ಯಲ್ಲಿ ಬರುವ ಹಿಂದೂಗಳ ಹಣವನ್ನು ಇನ್ನಿತರ ಖರ್ಚುಗಳ ಹೆಸರಿನಲ್ಲಿ ತಮ್ಮ ಕಿಸೆಗೆ ಹಾಕಿಕೊಳ್ಳಬಹುದು. ಹಿಂದೆ ಹೇಳಿದಂತೆಯೆ ದೇವಸ್ಥಾನದ ನ್ಯಾಸದಲ್ಲಿ ಅಥವಾ ಬೋರ್ಡ್‌ನಲ್ಲಿ ಹಿಂದೂಗಳ ಪ್ರತಿನಿಧಿ ಅಥವಾ ತಿಳುವಳಿಕೆಯುಳ್ಳವರು ಇರುವುದಿಲ್ಲ. ಇದರಿಂದಾಗಿ ಅಲ್ಲಿ ದೇವಸ್ಥಾನದ ದುರಸ್ತಿ ಹಾಗೂ ನಿರ್ಮಾಣಕಾರ್ಯದ ಯೋಜನೆಯ ಅವಧಿಯಲ್ಲಿ ಸ್ವೇಚ್ಛೆಯಿಂದ ವರ್ತಿಸಿ ಅಡ್ಡಾದಿಡ್ಡಿ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತದೆ. ಈ ಕಾಲ್ಪನಿಕ ದುರಸ್ತಿ ಕಾರ್ಯದ ಸಮಯದಲ್ಲಿ ಆ ದೇವಸ್ಥಾನದ ಸಂಸ್ಕೃತಿ, ಇತಿಹಾಸ ಅಥವಾ ಪುರಾತನ ವಾಸ್ತುಗಳನ್ನು ಜೋಪಾನ ಅಥವಾ ದೇವಸ್ಥಾನ ಪುನರುತ್ಥಾನದ ಕೃತಿಯನ್ನು ಮಾಡಲು ಈ ವಿಶ್ವಸ್ಥರಲ್ಲಿ ಯಾವುದೇ ಯೋಜನೆ ಅಥವಾ ಇಚ್ಛಾಶಕ್ತಿ ಇರುವುದಿಲ್ಲ. ಅದರ ಪರಿಣಾಮವೆಂದು ತಮಿಳುನಾಡಿದ ಅನೇಕ ದೇವಸ್ಥಾನಗಳಲ್ಲಿನ ಅಮೂಲ್ಯವಾದ ಭಿತ್ತಿಚಿತ್ರಗಳು (ವಾಲ್‌ಪೈಂಟಿಂಗ್ಸ್) ಹಾಳಾಗಿವೆ.

ಅನೇಕ ಪ್ರಾಚೀನ, ಮಹತ್ವದ ಮತ್ತು ಉಚ್ಚಮಟ್ಟದ ಮೂರ್ತಿಕಲೆ ಇರುವ ಮಂಟಪಗಳು ಧ್ವಂಸವಾಗಿವೆ ಅಥವಾ ಆ ಕಲ್ಲುಗಳ ಮೇಲೆ ಬಿಳಿ ‘ಆಯಿಲ್‌ಪೈಂಟ್ ಚೆಲ್ಲಲಾಗಿದೆ. ನಿರ್ಮಾಣ ಕಾರ್ಯದ ಸಮಯದಲ್ಲಿ ಅನೇಕ ಮಹತ್ವದ ಮೂರ್ತಿಗಳು ರಾತ್ರಿ ಬೆಳಗಾಗುವುದರೊಳಗೆ ಅದೃಶ್ಯವಾದವು. ಮೂರ್ತಿ ಕಳ್ಳಸಾಗಾಣಿಕೆ ದಾರರ ಮೂಲಕ ಅವುಗಳನ್ನು ವಿದೇಶಕ್ಕೆ ಕಳುಹಿಸಿ ಕೋಟಿಗಟ್ಟಲೆ ರೂಪಾಯಿಗಳನ್ನು ಲೂಟಿ ಮಾಡಲಾಗಿದೆಯೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ವಿಷಯವು ಜನರಿಗೆ ಅರಿವಾದಾಗ ಅದರ ವಿರುದ್ಧ ಧ್ವನಿ ಎತ್ತಲು ಆರಂಭವಾಯಿತು; ಆದರೆ ದಿನಪತ್ರಿಕೆಗಳಿಗೆ ಇದರ ಮಾಹಿತಿ ಸಿಗುವಷ್ಟರಲ್ಲಿ ಹಿಂದೂಗಳ ಈ ದೇವಸ್ಥಾನಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಏಕೆಂದರೆ, ದೇವಸ್ಥಾನದ ವ್ಯವಸ್ಥಾಪನೆಯಲ್ಲಿರುವ ನೇತಾರರು ಅಥವಾ ಅಧಿಕಾರಿಗಳಿಗೆ ಭಾರತೀಯ ಹಾಗೂ ಹಿಂದೂ ಸಂಸ್ಕೃತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ವಾಸ್ತುಕಲೆ ಅಥವಾ  ಪುರಾತನ ವಸ್ತುಗಳ ರಕ್ಷಣೆಯ ಮಹತ್ವವೂ ಇಲ್ಲ !

೬. ಆಂಗ್ಲರು ಆರಂಭಿಸಿದ ದೇವಸ್ಥಾನಗಳ ಸಂಪತ್ತಿನ ‘ಹೋಲ್‌ಸೇಲ್ ಲೂಟಿ ಭಾರತೀಯ ಜನಪ್ರತಿನಿಧಿಗಳಿಂದಲೂ ಮುಂದುವರಿದಿದೆ !

ಭಾರತದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದೇವಸ್ಥಾನಗಳ ಸಂಪತ್ತನ್ನು ಸಂಘಟಿತರಾಗಿ ಮತ್ತು ‘ಹೋಲ್‌ಸೇಲ್ ಲೂಟಿ ಮಾಡಲು ಆಂಗ್ಲರಿಂದ ಕಲಿತಿದ್ದಾರೆ. ತಮಿಳುನಾಡಿನಲ್ಲಿರುವ ಚೆಂಗಲ ಪಟ್ಟೂನಲ್ಲಿ ಮೊದಲ ಜಿಲ್ಲಾಧಿಕಾರಿ ೧೭೯೯ ರಲ್ಲಿ ಮಂಡಿಸಿದ ಸಂಪತ್ತಿನ ವರದಿಯಲ್ಲಿ ಅವರು ಹೇಗೆ ದೇವಸ್ಥಾನಗಳ ಆದಾಯ ಮತ್ತು ವ್ಯವಸ್ಥಾಪನೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು ಎಂಬುದರ ಉಲ್ಲೇಖವಿದೆ. ಅನಂತರ ಎರಡೇ ವರ್ಷಗಳಲ್ಲಿ ಅಂದರೆ ೧೮೦೧ ರಲ್ಲಿ ಇದು ಆಂಗ್ಲ ಸರಕಾರದ ಪರಂಪರೆಯೆ ಆಯಿತು ಹಾಗೂ ಅದು ವಿವಿಧ ದೇವಸ್ಥಾನಗಳೊಂದಿಗೆ ಶಾಶ್ವತವಾದ ಒಂದು ಒಪ್ಪಂದವನ್ನು ಮಾಡಿಕೊಂಡು ‘ಫಿಕ್ಸ್‌ಡ್ ಮನಿ ಅಲಾಯೆನ್ಸ್ (ಒಂದು ನಿರ್ದಿಷ್ಟ ಮೊತ್ತದ ಭತ್ತೆ) ಯೋಜನೆಯನ್ನು ಮಾಡಿತು. ತಮಿಳುನಾಡಿನಲ್ಲಿ ಉತ್ತರ ಆರ್ಕೋಟ್ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿಗಳು ೧೮೩೧ ರಲ್ಲಿ ‘ಏಶಿಯಾಟಿಕ್ ಸೊಸೈಟಿ ಜನರಲ್ನಲ್ಲಿ ತಿರುಪತಿ ದೇವಸ್ಥಾನದ ಆದಾಯವನ್ನು ಹೇಗೆ ವಶಪಡಿಸಿಕೊಳ್ಳಬಹುದು, ಎಂಬುದನ್ನು ಬರೆದಿದ್ದಾರೆ.

ಅಧಾರ www.desicnn.com ಜಾಲತಾಣ (ಸರಕಾರೀಕರಣ ಮಾಡಿದ ದೇವಸ್ಥಾನಗಳ ಲೂಟಿಯನ್ನು ತಡೆಗಟ್ಟಲು ದೇವಸ್ಥಾನಗಳನ್ನು ಭಕ್ತರ ವಶಕ್ಕೆ ಒಪ್ಪಿಸುವುದು ಎಷ್ಟು ಆವಶ್ಯಕವಾಗಿದೆಯೆಂಬುದು ಇದರಿಂದ ಅರಿವಾಗುತ್ತದೆ. ‘ಹಿಂದೂ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಹಿಂದೂ ಜನಜಾಗೃತಿ ಸಮಿತಿ ಸಹಿತ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ದೇವಸ್ಥಾನಗಳ ಸರಕಾರೀಕರಣದ ವಿರುದ್ಧ ವಿವಿಧ ಸ್ತರದಲ್ಲಿ ಅಭಿಯಾನವನ್ನು ಕೂಡ ಹಮ್ಮಿಕೊಳ್ಳುತ್ತಿವೆ. ಹಿಂದೂ ರಾಷ್ಟ್ರದಲ್ಲಿ ಎಲ್ಲ ದೇವಸ್ಥಾನಗಳ ವ್ಯವಸ್ಥಾಪನೆಯು ಭಕ್ತರಲ್ಲಿರುವುದು ! – ಸಂಪಾದಕರು)