ಭಾರತದಲ್ಲಿನ ಮತಾಂಧರು ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಾರೆ ಎಂಬುದನ್ನು ಗಮನದಲ್ಲಿಡಿ !

ಗುಲಾಮ ನಬಿ ಆಝಾದ್

೧. ಮತಾಂಧರ ಮೂಢನಂಬಿಕೆಗಳನ್ನು ತಿಳಿಯಿರಿ !

ಪಲಕ್ಕಡ (ಕೇರಳ)ದಲ್ಲಿ ಮದರಸಾದಲ್ಲಿ ೩೦ ವರ್ಷದ ಶಿಕ್ಷಕಿಯು ಅಲ್ಲಾನನ್ನು ಸಂತೋಷಪಡಿಸಲು ತನ್ನ ೬ ವರ್ಷದ ಬಾಲಕನ ಕುತ್ತಿಗೆ ಸೀಳಿ ಹತ್ಯೆ ಮಾಡಿದಳು. ಅವಳ ೩ ಮಕ್ಕಳಲ್ಲಿ ಇವನು ಎಲ್ಲಕ್ಕಿಂತ ಚಿಕ್ಕವನಾಗಿದ್ದನು. ಈ ಮಹಿಳೆಯು ಈಗ ಗರ್ಭವತಿಯಾಗಿರುವುದಾಗಿಯೂ ಬೆಳಕಿಗೆ ಬಂದಿದೆ.

೨. ಭಾರತದಲ್ಲಿನ ಮತಾಂಧರು ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಾರೆ ಎಂಬುದನ್ನು ಗಮನದಲ್ಲಿಡಿ !

ಜಗತ್ತಿನಲ್ಲಿ ಮುಸಲ್ಮಾನರು ಪರಸ್ಪರರಲ್ಲಿ ಹೋರಾಡಿ ಕೊನೆಗೊಳ್ಳುತ್ತ ಹೊರಟಿದ್ದಾರೆ. ಅಲ್ಲಿಯಂತೂ ಹಿಂದೂ ಮತ್ತು ಕ್ರೈಸ್ತರು ಇರುವುದಿಲ್ಲ. ನಾನು ಭಾರತೀಯ ಮುಸಲ್ಮಾನನಾಗಿದ್ದೇನೆ, ಎಂಬುದು ನನಗೆ ಹೆಮ್ಮೆ ಅನಿಸುತ್ತದೆ, ಎಂದು ಕಾಂಗ್ರೆಸ್ ನಾಯಕ ಗುಲಾಮ ನಬಿ ಆಝಾದ್ ಇವರು ರಾಜ್ಯಸಭೆಯಲ್ಲಿ ಪ್ರತಿಪಾದನೆ ಮಾಡಿದರು.

೩. ಸಮಾನ ನಾಗರಿಕ ಕಾನೂನಿನ ಅವಶ್ಯಕತೆಯನ್ನು ತಿಳಿಯಿರಿ !

ಮುಸ್ಲಿಮ್ ಹುಡುಗಿಯು ಅಪ್ರಾಪ್ತಳಾಗಿದ್ದಳೂ, ಅವಳ ವಿವಾಹ ಕಾನೂನು ಬದ್ಧವಾಗಿದೆ, ಎಂದು ಪಂಜಾಬ-ಹರಿಯಾಣಾ ಉಚ್ಚನ್ಯಾಯಾಲಯವು ಒಂದು ಪ್ರಕರಣದಲ್ಲಿ ಮುಸ್ಲಿಮ್ ಪರ್ಸನಲ್ ಲಾ ದ ಆಧಾರದಲ್ಲಿ ತೀರ್ಪು ನೀಡಿತು.

೪. ಮತಾಂಧರ ಎಂದಿನ ಕೂಗಾಟವನ್ನು ತಿಳಿಯಿರಿ !

ದೇಶದಲ್ಲಿ ಕೆಲವು ಜನರಿಂದ ಮುಸಲ್ಮಾನರು ‘ಪರಕೀಯರು ಎಂದು ಹೇಳಲು ಸಂಘಟಿತರಾಗಿ ಪ್ರಯತ್ನಿಸಲಾಗುತ್ತಿದೆ, ಎಂಬ ನಿರಾಧಾರ ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಒಂದು ಕಾರ್ಯಕ್ರಮದಲ್ಲಿ ಆರೋಪಿಸಿದರು.

೫. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

ಮತಾಂಧರ ಸಮೂಹವು ದೆಹಲಿಯಲ್ಲಿನ ಮಂಗೋಲಪುರಿ ಪ್ರದೇಶದಲ್ಲಿನ ರಿಂಕೂ ಶರ್ಮಾ ಎಂಬ ಬಜರಂಗ ದಳದ ಕಾರ್ಯಕರ್ತರ ಮನೆಯಲ್ಲಿ ನುಗ್ಗಿ ಬೆನ್ನಲ್ಲಿ ಚೂರಿ ಇರಿದು ಅವನ ಹತ್ಯೆ ಮಾಡಲಾಯಿತು. ಶ್ರೀರಾಮಮಂದಿರದ ಕುರಿತು ಹೊರಡಿಸಲಾಗಿದ್ದ ಮೆರವಣಿಗೆಯ ಸಮಯಕ್ಕೆ ನಿರ್ಮಾಣವಾದ ಜಗಳದಲ್ಲಿ ಈ ಹತ್ಯೆ ಮಾಡಲಾಯಿತು ಎಂದು ಹೇಳಲಾಗುತ್ತಿದೆ.

೬. ಕಾಂಗ್ರೆಸ್‌ನ ಮಂತ್ರಿಗಳು ಮೌಲ್ವಿ ಮತ್ತು ಪಾದ್ರಿ ಇವರ ಕುರಿತು ಹೀಗೆ ಮಾತನಾಡುವರೇನು ?

ಮಹಾರಾಷ್ಟ್ರದ ಸಹಾಯ ಮತ್ತು ಪುನರ್ವಸನ ಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ವಿಜಯ ವಡೆಟ್ಟಿವಾರ ಇವರು ‘ಸಾಧುಗಳಂತಹ ನಾಲಾಯಕ ಜನರು ಜಗತ್ತಿನಲ್ಲಿ ಸಿಗಲಾರರು’ ಎಂದು ಒಂದು ಕಾರ್ಯಕ್ರಮದಲ್ಲಿ ನುಡಿದರು.

೭. ಕಾಂಗ್ರೆಸ್ಸಿಗರ ಮತಾಂಧರ ಮೇಲಿನ ಪ್ರೀತಿಯನ್ನು ತಿಳಿಯಿರಿ !

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನಾನು ಶ್ರೀರಾಮಮಂದಿರಕ್ಕಾಗಿ ಹಣ ನೀಡಿರುವುದಾಗಿ ವಾರ್ತೆಯನ್ನು ಹಬ್ಬಿಸಿದೆ. ಈ ವಾರ್ತೆಯಿಂದ ಮುಸಲ್ಮಾನರ ಭಾವನೆಗಳಿಗೆ ನೋವಾಗಿದ್ದಲ್ಲಿ ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ, ಎಂಬ ಹೇಳಿಕೆಯನ್ನು ಕೇರಳದಲ್ಲಿನ ಕಾಂಗ್ರೆಸ್ ಶಾಸಕ ಎಲ್ಧೋಸ ಕುನ್ನಾಪ್ಲೀ ಇವರು ನೀಡಿದ್ದಾರೆ.