
೧. ‘ಸನಾತನ ಪ್ರಭಾತ’ದ ಅಡಿಪಾಯವನ್ನು ಪ.ಪೂ. ಡಾ. ಆಠವಲೆಯವರು ರಚಿಸಿರುವುದರಿಂದ ಅದರ ಕಾರ್ಯವು ಚಿರಂತನವಾಗಿರುವ ಮೂಲ ಈಶ್ವರೀ ತತ್ತ್ವಕ್ಕೆ ಸಂಬಂಧಿಸಿದೆ ‘ಸನಾತನ ಪ್ರಭಾತ ದೈನಿಕದ ಕಾರ್ಯ ಮಾಡುವ ಉದ್ದೇಶವು ಕೇವಲ ಹಣ ಸಂಪಾದನೆಗಾಗಿ ಅಲ್ಲ, ಉದಾರತೆಯ ಧ್ಯೇಯಕ್ಕೆ ಸಂಬಂಧಿಸಿದ ‘ಈಶ್ವರೀ ರಾಜ್ಯ ಸ್ಥಾಪನೆಯೊಂದಿಗೆ ಇದೆ. ಈ ದೈನಿಕದ ಅಡಿಪಾಯವನ್ನು ಪ.ಪೂ.ಡಾ. ಆಠವಲೆಯವರೆ ರಚಿಸಿರುವುದರಿಂದ ದೈನಿಕದ ಕಾರ್ಯವು ಚಿರಂತನವಾಗಿರುವ ಮೂಲ ಈಶ್ವರೀ ತತ್ತ್ವದೊಂದಿಗೆ ಸಂಬಂಧಿಸಿದೆ. ಈ ದೈನಿಕವನ್ನು ಸಾಧಕರು ‘ಸಾಧನೆಯೆಂದು ನಡೆಸುತ್ತಿರುವುದರಿಂದ ಅದರಲ್ಲಿ ರಜ-ತಮಯುಕ್ತ ಸ್ಪಂದನಗಳಿಲ್ಲ. ಇದರಲ್ಲಿ ಮೂಲತಃ ಸಾತ್ತ್ವಿಕತೆ ಇರುವುದರಿಂದ ಕೇವಲ ಅದರ ಅಸ್ತಿತ್ವದಿಂದಲೆ ವಾತಾವರಣ ಶುದ್ಧವಾಗುತ್ತದೆ. ಇದರಿಂದ ಎಲ್ಲರಿಗೂ ತನ್ನಿಂತಾನೆ ಆಧ್ಯಾತ್ಮಿಕ ಸ್ತರದ ಲಾಭವಾಗುತ್ತದೆ.
೨. ಈಶ್ವರನ, ಪ.ಪೂ.ಡಾಕ್ಟರರ, ಹಾಗೂ ಅನೇಕ ಸಂತರ ಕೃಪಾಶೀರ್ವಾದದಿಂದ ಈ ದೈನಿಕ ನಡೆಯುತ್ತಿರುವುದರಿಂದ ಅದಕ್ಕೆ ಧರ್ಮದ್ರೋಹಿಗಳಿಂದ ‘ನಿರ್ಬಂಧ’ದಂತಹ ಸಂಕಟ ಬಂದರೂ ಅದರ ಈಶ್ವರೀ ಕಾರ್ಯದಲ್ಲಿ ಯಾವುದೇ ಅಡ್ಡಿಯಾಗಿಲ್ಲ ಈಶ್ವರನ, ಪ.ಪೂ. ಡಾಕ್ಟರರ ಹಾಗೂ ಅನೇಕ ಸಂತರ ಕೃಪಾಶೀರ್ವಾದದಿಂದ ಈ ದೈನಿಕ ನಡೆಯುತ್ತಿರುವುದರಿಂದ ಆರ್ಥಿಕ ಕೊರತೆಯನ್ನು ಸಹಿಸಿಕೊಂಡು ಹಾಗೂ ಅದಕ್ಕೆ ಧರ್ಮದ್ರೋಹಿಗಳಿಂದ ಬರುವ ‘ನಿರ್ಬಂಧದ ಸಂಕಟಗಳು ಬಂದರೂ ಅದರ ಈಶ್ವರೀ ಕಾರ್ಯದಲ್ಲಿ ಯಾವುದೇ ಪ್ರಕಾರದ ಅಡಚಣೆಯಾಗಿಲ್ಲ, ತದ್ವಿರುದ್ಧ ಇದರ ಕಾರ್ಯ ನಿರಂತರ ನಡೆಯುತ್ತಿದ್ದು ಅದು ವೃದ್ಧಿಯಾಗುತ್ತಾ ಇದೆ. – (ಸದ್ಗುರು) ಸೌ. ಅಂಜಲಿ ಗಾಡಗೀಳ, ಸನಾತನ ಆಶ್ರಮ ರಾಮನಾಥಿ ಗೋವಾ.
ಹಿಂದೂ ರಾಷ್ಟ್ರವು ಸ್ಥಾಪನೆಯಾಗುವ ವರೆಗೆ ಕ್ಷಾತ್ರತೇಜವನ್ನು ಜಾಗೃತಗೊಳಿಸುವ ಕರ್ತವ್ಯವನ್ನು ‘ಸನಾತನ ಪ್ರಭಾತ’ವು ಒಂದು ವ್ರತದಂತೆ ನಿಷ್ಠೆಯಿಂದ ಪೂರೈಸಲಿದೆ !
ಸನಾತನ ಪ್ರಭಾತ ನಿಯತಕಾಲಿಕೆಯ ಮಾಜಿ ಸಮೂಹ ಸಂಪಾದಕ ಡಾ. ದುರ್ಗೇಶ ಸಾಮಂತ ಇವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಂದ ಕಲಿಯಲು ಸಿಕ್ಕಿದ ಅಂಶಗಳು
ಧಾರವಾಡದಲ್ಲಿ ಭಾವಪೂರ್ಣ ವಾತಾವರಣದಲ್ಲಾದ ಸನಾತನ ಪ್ರಭಾತ’ ಪತ್ರಿಕೆಯ ೨೬ ನೇ ವರ್ಧಂತ್ಯುತ್ಸವ ಆಚರಣೆ
ನಾನು ‘ಸನಾತನ ಪ್ರಭಾತ’ : ಶ್ರೀವಿಷ್ಣು ಸ್ವರೂಪ ಗುರುದೇವರ ಲೇಖನಿಯ ಚೈತನ್ಯದ ಧಾರೆಯಾಗಿರುವ ಮತ್ತು ನಿರಂತರ ಕಾರ್ಯನಿರತ ಧರ್ಮಯೋಧ !
ರಾಷ್ಟ್ರ-ಧರ್ಮ ರಕ್ಷಣೆಯೊಂದಿಗೆ ಅನುಭೂತಿ ನೀಡುವ ಸನಾತನ ಪ್ರಭಾತದ ಅದ್ವಿತೀಯತೆ
ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೬ ನೇ ವರ್ಧಂತ್ಯುತ್ಸವ