
ಪ್ರಪ್ರಥಮವಾಗಿ ೨೩ ನೇ ವರ್ಷಕ್ಕೆ ಹೆಜ್ಜೆಯಿಡುತ್ತಿರುವ ಸನಾತನ ಪ್ರಭಾತ ಬಳಗಕ್ಕೆ ಅಭಿನಂದನೆಗಳು. ಇದರ ಯಶಸ್ಸಿಗೆ, ಅವಿರತ ಸೇವೆ ಸಲ್ಲಿಸುತ್ತಿರುವ ಎಲ್ಲಾ ಮಿತ್ರರ ಶ್ರಮ ಪ್ರಶಂಸನೀಯ. ಈ ಪತ್ರಿಕೆಯು ಎಲ್ಲ ಪತ್ರಿಕೆಗಳಂತೆ ಮಾಹಿತಿ, ಜ್ಞಾನ ಮಾತ್ರವಲ್ಲದೇ ಅನುಕರಣೀಯರಾಗಿರುವ ಮಹಾನ್ ವ್ಯಕ್ತಿಗಳ ಜೀವನ ದರ್ಶನ, ಪುರಾಣ ಪುರುಷರ ಪರಿಚಯವನ್ನೂ ಅತ್ಯುತ್ತಮ ಶೈಲಿಯಲ್ಲಿ ಎಲ್ಲ ವಯೋಮಾನದವರಿಗೂ ಪ್ರೇರೇಪಣೆಯಾಗುವಂತೆ ಮಾಡುತ್ತಿದೆ. ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಸನಾತನ ಪ್ರಭಾತವು ಇಷ್ಟು ವರ್ಷಗಳಾದರೂ ಜನಮನದಲ್ಲಿರಲು ಬಹಳ ಮುಖ್ಯ ಕಾರಣವೆಂದರೆ
ವೇದಗಳ ಸಾರಾಂಶವನ್ನು ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಕಾರ್ಯನಿರ್ವಹಿಸುತ್ತಿದೆ. ಮಾತ್ರವಲ್ಲದೇ ಸಾಧನೆಯ ರಹಸ್ಯವನ್ನು ಎಲ್ಲರಿಗೂ ತಿಳಿಸಿ ಉತ್ತೇಜಿಸುತ್ತಿದೆ. ಪರಾತ್ಪರ ಗುರುಗಳ ಕರುಣೆಯ ಅನುಗ್ರಹದಿಂದ ಆಧ್ಯಾತ್ಮ ಜಾಗೃತಿ ಮೂಡಿಸುತ್ತಿದೆ.
ಸನಾತನ ಪ್ರಭಾತವು ಇದೇ ರೀತಿಯಲ್ಲಿ ಸನಾತನ ಧರ್ಮದ ಸೇವೆಯನ್ನು ಹೆಚ್ಚು ಹೆಚ್ಚು ಮಾಡುವಂತಾಗಲಿ, ಹಲವಾರು ವಾರ್ಷಿಕೋತ್ಸವಗಳನ್ನಾಚರಿಸಿಕೊಳ್ಳುವಂತಾಗಲಿ ಎಂದು ಆಶಿಸುವೆ.
– ಬ್ರಹ್ಮಶ್ರೀ ಡಾ || ಉಮೇಶ ಶರ್ಮಾ ಗುರೂಜಿ, ವಿಜಯನಗರ, ಬೆಂಗಳೂರು
ಹಿಂದೂ ರಾಷ್ಟ್ರವು ಸ್ಥಾಪನೆಯಾಗುವ ವರೆಗೆ ಕ್ಷಾತ್ರತೇಜವನ್ನು ಜಾಗೃತಗೊಳಿಸುವ ಕರ್ತವ್ಯವನ್ನು ‘ಸನಾತನ ಪ್ರಭಾತ’ವು ಒಂದು ವ್ರತದಂತೆ ನಿಷ್ಠೆಯಿಂದ ಪೂರೈಸಲಿದೆ !
ಸನಾತನ ಪ್ರಭಾತ ನಿಯತಕಾಲಿಕೆಯ ಮಾಜಿ ಸಮೂಹ ಸಂಪಾದಕ ಡಾ. ದುರ್ಗೇಶ ಸಾಮಂತ ಇವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಂದ ಕಲಿಯಲು ಸಿಕ್ಕಿದ ಅಂಶಗಳು
ಧಾರವಾಡದಲ್ಲಿ ಭಾವಪೂರ್ಣ ವಾತಾವರಣದಲ್ಲಾದ ಸನಾತನ ಪ್ರಭಾತ’ ಪತ್ರಿಕೆಯ ೨೬ ನೇ ವರ್ಧಂತ್ಯುತ್ಸವ ಆಚರಣೆ
ನಾನು ‘ಸನಾತನ ಪ್ರಭಾತ’ : ಶ್ರೀವಿಷ್ಣು ಸ್ವರೂಪ ಗುರುದೇವರ ಲೇಖನಿಯ ಚೈತನ್ಯದ ಧಾರೆಯಾಗಿರುವ ಮತ್ತು ನಿರಂತರ ಕಾರ್ಯನಿರತ ಧರ್ಮಯೋಧ !
ರಾಷ್ಟ್ರ-ಧರ್ಮ ರಕ್ಷಣೆಯೊಂದಿಗೆ ಅನುಭೂತಿ ನೀಡುವ ಸನಾತನ ಪ್ರಭಾತದ ಅದ್ವಿತೀಯತೆ
ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೬ ನೇ ವರ್ಧಂತ್ಯುತ್ಸವ