|
ಬಾಗಲಕೋಟೆ – ಗ್ರಾಮಪಂಚಾಯತಿಯ ನೂತನ ಸದಸ್ಯನು ರಾಜ್ಯದ ವಿಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ‘ಸಿದ್ಧರಾಮಯ್ಯರವರು ನಮ್ಮೂರಿಗೆ ಬಂದುಹೋದರೂ ನಮ್ಮ ಊರಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದೊಡನೆ ಸಿಟ್ಟುಗೊಂಡ ಸಿದ್ಧರಾಮಯ್ಯರವರು ಆತನನ್ನು ವೇದಿಕೆಯಿಂದ ಕೆಳಗೆ ದೂಡಿದರು. ರಾಜ್ಯದ ಬಾದಾಮಿಯಲ್ಲಿ ಈ ಘಟನೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
'ಸಿದ್ದರಾಮಯ್ಯನವರು ನಮ್ಮೂರಿಗೆ ಏನೂ ಮಾಡಿಲ್ಲ' ಸಿದ್ದರಾಮಯ್ಯ ಎದುರೇ ಅಸಮಾಧಾನ ತೋಡಿಕೊಂಡ ಗ್ರಾ.ಪಂ ಸದಸ್ಯ! ವೇದಿಕೆಯಿಂದ ಕೆಳಕ್ಕೆ ನೂಕಿದ ಸಿದ್ದರಾಮಯ್ಯ!
ಎಲ್ಲಿ, ಹೇಗೆ ಎಂದು ತಿಳಿಯಲು ಈ ಲಿಂಕ್ ತೆರೆಯಿರಿ: https://t.co/blB8PLQeZa pic.twitter.com/GRTveBl3AB— Vijayavani (@VVani4U) January 4, 2021
ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸನ್ಮಾನ ಕಾರ್ಯಕ್ರಮವು ನಡೆಯುತ್ತಿತ್ತು. ಈ ಸಮಯದಲ್ಲಿ ಮಾತನಾಡಲು ವೇದಿಕೆಗೆ ಬಂದ ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮದಿಂದ ಆಯ್ಕೆಯಾದ ಸಂಗಣ್ಣ ಬಾಬಣ್ಣಾವರ ಇವರು ‘ಗ್ರಾಮದಲ್ಲಿ ಅನೇಕ ಸಮಸ್ಯೆಗಳಿವೆ, ಯಾರೂ ಸಹ ಹಳ್ಳಿ ಕಡೆ ಬಂದಿಲ್ಲ. ನಮ್ಮ ಗ್ರಾಮದ ಆಶ್ರಯ ಮನೆಗಳು ಹಾಳಾಗಿ ಹೋಗಿವೆ. ಸಿದ್ಧರಾಮಯ್ಯ ಬಂದೂ ಹೋದರು; ಆದರೆ ಕಾಮಗಾರಿ ಸರಿಯಾಗಿಲ್ಲ”, ಎಂದು ಹೇಳಿದರು ಸಂಗಣ್ಣ ಬಾಬಣ್ಣವರ ಇವರ ಮಾತುಗಳನ್ನು ಕೇಳಿದ ಸಿದ್ಧರಾಮಯ್ಯನವರಿಗೆ ಸಿಟ್ಟು ಬಂದಿತು. ಅವರು ಕುಳಿತಿದ್ದ ಆಸನದಿಂದ ಎದ್ದು ಬಂದು ಆತನ ಮಾತುಗಳನ್ನು ತಡೆದು ವೇದಿಕೆಯಿಂದ ಕೆಳಗೆ ದೂಡಿದರು.

ರಾಜ್ಯದಲ್ಲಿ ಮುಸ್ಲಿಂ ಸಮುದಾಯವೇ ಎಲ್ಲಕ್ಕಿಂತ ದೊಡ್ಡದು!
ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ
ಆದೇಶವನ್ನು ತಕ್ಷಣವೇ ರದ್ದುಗೊಳಿಸಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ !
ರಾಜ್ಯದ ಕಾಂಗ್ರೆಸ್ ಸರಕಾರದಿಂದ ಆಳಂದ ಲಾಡಲೆ ಮಶಾಕ್ ದರ್ಗಾ ಗಲಭೆಯಲ್ಲಿದ್ದ ಎಲ್ಲ ಮುಸಲ್ಮಾನ ಆರೋಪಿಗಳ ಮೇಲಿನ ಮೊಕದ್ದಮೆಗಳನ್ನು ಹಿಂಪಡೆ : Aland Dargah Conflict
ರಾಜ್ಯದ ಕಾಂಗ್ರೆಸ್ ಸರಕಾರದಿಂದ ಶಾಲೆಗಳಲ್ಲಿ ಹಿಜಾಬ್ ನಿಷೇಧದ ಆದೇಶವನ್ನು ಹಿಂಪಡೆ : Karnataka Hijab Row
ದೇವರು ಕೂಡ ಮದ್ಯಪಾನ ಮಾಡುತ್ತಿದ್ದರು ! – ಮುಖ್ಯಮಂತ್ರಿ ಸಿದ್ದರಾಮಯ್ಯ