ಭೂ ಹಗರಣ ಪ್ರಕರಣ; ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು !

ಕಾಂಗ್ರೆಸ್ ಅಂದರೆ ಹಗರಣ ಮತ್ತು ಹಗರಣ ಅಂದರೆ ಕಾಂಗ್ರೆಸ್ ಈ ರೀತಿಯ ಸಮೀಕರಣ ತಯಾರಾಗಿದೆ ಮತ್ತು ಅಂತಹುದೇ ಯಾವಾಗಲೂ ಬೆಳಕಿಗೆ ಬರುತ್ತದೆ !

ಬೆಂಗಳೂರು – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಈಡಿ ಆರ್ಥಿಕ ಭ್ರಷ್ಟಾಚಾರದ ದೂರು ದಾಖಲಾಗಿದೆ. ಮೈಸೂರ್ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿಯ (ಮೂಡಾದ) ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಈಡಿಯು ಸಿದ್ದರಾಮಯ್ಯ ಅವರ ಪತ್ನಿ, ಭಾವ ಮೈದುನ ಮತ್ತು ಇತರ ಕೆಲವರ ಹೆಸರನ್ನು ಕೂಡ ಈ ದೂರಿನಲ್ಲಿ ದಾಖಲಿಸಲಾಗಿವೆ.

ಮುಖ್ಯಮಂತ್ರಿಗಳು ಮೂಡಾ ಅಧಿಕಾರಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ವಂಚಿಸಿ ಬೆಲೆ ಬಾಳುವ ೧೪ ಸೈಟ್ ಗಳನ್ನು ಪಡೆದಿದ್ದರು ಎಂದು ಟಿ .ಜೆ. ಅಬ್ರಾಹಂ, ಪ್ರದೀಪ್ ಮತ್ತು ಸ್ನೇಹಮೋಯಿ ಕೃಷ್ಣ ಎಂಬ ಕಾರ್ಯಕರ್ತರು ಆರೋಪಿಸಿದ್ದಾರೆ.