ಹಿಂದೂ ಜನಜಾಗೃತಿ ಸಮಿತಿಯ ಪ್ರಬೋಧನೆ, ಶ್ರೀ ಹನುಮಂತನ ವಿಡಂಬನೆಗೆ ತಡೆ

ಪ್ರಭೋಧನೆಯ ನಂತರ ಶ್ರೀ ಹನುಮಂತನ ಚಿತ್ರಗಳನ್ನು ಉಪ್ಪಿನ ಪ್ಯಾಕೆಟ್‌ಗಳಲ್ಲಿ ಮುದ್ರಿಸುವುದನ್ನು ಸಂಸ್ಥೆಯು ನಿಲ್ಲಿಸಿತು

ಇಂದೂರ್ (ತೆಲಂಗಾಣಾ) – ಸ್ಥಳೀಯ ಎಸ್.ಆರ್.ಜೆ. ಎಂಬ ಹೆಸರಿನ ಖಾಸಗಿ ಸಂಸ್ಥೆಯು ಉಪ್ಪಿನ ಪೊಟ್ಟಣದ ಮೇಲೆ ಶ್ರೀ ಹನುಮಂತನ ಚಿತ್ರವನ್ನು ಮುದ್ರಿಸುತ್ತಿತ್ತು. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿದಾಗ, ಶ್ರೀ. ನೇಲಾ ತುಕಾರಮ್, ಶ್ರೀ. ಯಾದಗಿರಿ ಮತ್ತು ನ್ಯಾಯವಾದಿ ಶರತ ಚಂದ್ರ ಇವರು ‘ಇದರಿಂದ ದೇವತೆಗಳ ಅವಮಾನ ಹೇಗಾಗುತ್ತಿದೆ?’, ಎಂಬುವುದರ ಬಗ್ಗೆ ಪ್ರಬೋಧನೆ ಮಾಡಿದ ನಂತರ ಅವರು ಶ್ರೀ ಹನುಮಂತನ ಚಿತ್ರವನ್ನು ಮುದ್ರಿಸುವುದನ್ನು ನಿಲ್ಲಿಸಲು ಒಪ್ಪಿದರು.