ಆಯುರ್ವೇದವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆಯುರ್ವೇದವು ಮಾನವನ ಆಯುಷ್ಯವನ್ನು ಹೆಚ್ಚಿಸುವ ಮೂಲಮಂತ್ರ. ಆಯುರ್ವೇದದಲ್ಲಿ ರೋಗನಿವಾರಣೆ ಮಾತ್ರವಲ್ಲ ರೋಗನಿರೋಧಕ ಉಪಾಯಗಳನ್ನೂ ಹೇಳಲಾಗಿದೆ. ಆಯುರ್ವೇದದಲ್ಲಿ ವ್ಯಕ್ತಿಯ ಸರ್ವಾಂಗೀಣ, ಅಂದರೆ ಅವನ ಪ್ರಕೃತಿಯ ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಇವೆಲ್ಲ ಸ್ತರಗಳಲ್ಲಿ ವಿಚಾರವನ್ನು ಮಾಡಲಾಗುತ್ತದೆ. ಜೀವನವನ್ನು ಆರೋಗ್ಯವಂತವನ್ನಾಗಿಡಲು ಸದಾಚಾರದ ಪಾಲನೆಯೊಂದಿಗೆ ದಿನಚರ್ಯೆ, ಋತುಚರ್ಯೆ, ತಕ್ಷಣ ಗುಣಪಡಿಸುವ ಅಗ್ನಿಕರ್ಮ ಮತ್ತು ವೇಧನಚಿಕಿತ್ಸೆ, ಶರೀರ ಮತ್ತು ಮನಸ್ಸಿನ ಸಮತೋಲನಕ್ಕಾಗಿ ಯೋಗಾಸನಗಳು, ಆಹಾರ-ವಿಹಾರ, ಆಧ್ಯಾತ್ಮಿಕ ಉಪಾಯಗಳು (ಜಪ, ಹೋಮ, ನಾಮಸ್ಮರಣೆ, ಮಂತ್ರೋಚ್ಚಾರಣೆ), ಸ್ವದೇಶಿ ವಸ್ತುಗಳ ಬಳಕೆ, ಸಂಸ್ಕೃತಿ ಮತ್ತು ಪರಿಸರದ ರಕ್ಷಣೆ ಇತ್ಯಾದಿ ವಿಷಯಗಳನ್ನು ಸಮಾವೇಶಗೊಳಿಸಲಾಗಿದೆ. ಇಷ್ಟು ವ್ಯಾಪಕ ದೃಷ್ಟಿಯಿರುವ ಚಿಕಿತ್ಸೆಯು ಕೇವಲ ಮತ್ತು ಕೇವಲ ಆಯುರ್ವೇದದಲ್ಲಿದೆ. – ವೈದ್ಯ ಸುವಿನಯ ದಾಮಲೆ, ಸಿಂಧುದುರ್ಗ

ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?
ಆಯುರ್ವೇದವನ್ನು ಮರೆತು ತಮಗೂ ಮತ್ತು ದೇಶಕ್ಕೂ ಹಾನಿ ಮಾಡುತ್ತಿರುವ ಭಾರತೀಯರು !
ಆಯುರ್ವೇದದ ಮಹತ್ವ
ರೋಗಗಳು ಬರಬಾರದೆಂದು ಆಯುರ್ವೇದವು ಹೇಳಿದ ಕೆಲವು ಉಪಾಯಗಳು
ಆಯುರ್ವೇದವು ತಡವಾಗಿ ಅಲ್ಲ, ಆದರೆ ತಕ್ಷಣ ಗುಣಪಡಿಸುವ ಶಾಸ್ತ್ರವಾಗಿದೆ !
ಆಯುರ್ವೇದಕ್ಕನುಸಾರ ವ್ಯಾಯಾಮವನ್ನು ಮಾಡುವುದರಿಂದ ಆಗುವ ಲಾಭಗಳು !