

೧. ಪರಾತ್ಪರ ಗುರುದೇವರಲ್ಲಿ ವಿಷ್ಣುತತ್ತ್ವವಿದ್ದು ಭಕ್ತರ ಕಲ್ಯಾಣಕ್ಕಾಗಿ ಅವರ ಅವತಾರವಾಗಿದೆ !
ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ಪರಮಾತ್ಮನಾಗಿದ್ದಾರೆ, ಹಾಗೆಯೇ ಅವರ ಬೋಧನೆಯು ಮೌನ, ಮಹಾಮೌನ ಮತ್ತು ಧ್ಯಾನ ಈ ರೀತಿಯಾಗಿದೆ. ಪರಾತ್ಪರ ಗುರುದೇವರಲ್ಲಿ ವಿಷ್ಣುತತ್ತ್ವವಿದ್ದು ಅವರಲ್ಲಿ ವಿಷ್ಣುವಿನ ಶಕ್ತಿಯು ಕಾರ್ಯನಿರತವಾಗಿದೆ. ಅವರ ಕಾರಣದೇಹವು ವೈಕುಂಠದಲ್ಲಿದ್ದು ಅವರಲ್ಲಿ ವೈಷ್ಣವೀ ಶಕ್ತಿಯು ಸತತವಾಗಿ ಕಾರ್ಯನಿರತವಾಗಿರುತ್ತದೆ. ಪರಾತ್ಪರ ಗುರುದೇವರಿಗೆ ತಮ್ಮದೆಂಬ ಪ್ರಾರಬ್ಧವಿಲ್ಲ. ಭಕ್ತರ (ಸಾಧಕರ) ಕಲ್ಯಾಣಕ್ಕಾಗಿ ಅವರ ಅವತಾರವಾಗಿದೆ. ಯಾವ ರೀತಿ ಪ್ರಭು ಶ್ರೀರಾಮನಿಗೆ ಪ್ರಾರಬ್ಧವಿದ್ದರೂ ಅದನ್ನು ಲೋಕಲ್ಯಾಣಕ್ಕಾಗಿ ತಂದಿದ್ದರೋ ಅದೇ ರೀತಿ ಪರಾತ್ಪರ ಗುರು ಡಾ. ಆಠವಲೆಯವರದ್ದಾಗಿದೆ.
೨. ಪರಾತ್ಪರ ಗುರು ಡಾ. ಆಠವಲೆಯವರು ಅನಂತರಾಗಿದ್ದಾರೆ !
ರಾಮ-ಕೃಷ್ಣರು ಅವತಾರ ತಾಳಿದಂತೆ ಗುರುದೇವರು ಸಹ ಅವತಾರ ತಾಳಿ ಬಂದಿದ್ದು ಸಂಪೂರ್ಣ ವಿಶ್ವಕ್ಕೆ ಜ್ಞಾನದ ಶಿಕ್ಷಣವನ್ನು ನೀಡಲು ಅವರ ಜನ್ಮವಾಗಿದೆ. ಅವರ ಪ್ರತಿಯೊಂದು ಕರ್ಮವು ನಿಷ್ಕಾಮವಾಗಿದೆ. ಇದರೊಂದಿಗೆ ವಿಶ್ವದಲ್ಲಿ ಹಿಂದೂ ಧರ್ಮದ ಪ್ರತಿಷ್ಠಾಪನೆ ಮತ್ತು ಎಲ್ಲರಲ್ಲಿ ಧರ್ಮದ ಸ್ಥಾಪನೆ ಮಾಡಲು ಅವರ ಜನ್ಮವಾಗಿದೆ. ಅವರು ಕರುಣೆಯ ಸಾಗರವಾಗಿದ್ದು ಅವರಲ್ಲಿ ಮೇಲುಕೀಳೆಂಬ ಭೇದಭಾವವಿಲ್ಲ. ಅವರಲ್ಲಿ ತಂದೆ-ತಾಯಿ ಹೀಗೆ ಇಬ್ಬರ ಪ್ರೇಮವಿದ್ದು ಅದರಂತೆ ಅವರ ಶಕ್ತಿಯು ಕಾರ್ಯವನ್ನು ಮಾಡುತ್ತಿರುತ್ತದೆ. ಅವರಲ್ಲಿ ಶಿವ ಮತ್ತು ಶಕ್ತಿ ಇವರಿಬ್ಬರ ಸಂಗಮವಿದೆ. ಪರಾತ್ಪರ ಗುರುದೇವರ ಸ್ಥಿತಿಯು ಪರಮಹಂಸ ಯೋಗಾನಂದ ಇವರಂತಿದೆ. ಮಾಯೆಯು ಪರಾತ್ಪರ ಗುರುದೇವರ ಅಧೀನವಾಗಿರುವುದರಿಂದ ಅವರ ಮೇಲೆ ಮಾಯೆಯ ತಂತ್ರವು ನಡೆಯುವುದಿಲ್ಲ. ಪರಾತ್ಪರ ಗುರುದೇವರಲ್ಲಿ ಶಾಶ್ವತ ಆನಂದವಿದೆ. ಅವರನ್ನು ಕಣ್ಣುಗಳನ್ನು ಮುಚ್ಚಿ ನೋಡಿದರೆ ಈಶ್ವರನ ನಿರ್ಗುಣ ರೂಪದ ಪ್ರಕಾಶದ ಅರಿವಾಗುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಅನಂತ (Infinite)ರಾಗಿದ್ದಾರೆ.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !