ರಾಮಪುರ (ಬಾಗಲಕೋಟೆ)ದ ಕೀರ್ತನಕಾರರಾದ ಶ್ರೀ. ಸದಾನಂದ ಭಸ್ಮೆ ಮಹಾರಾಜರು  ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ತೆಗೆದ ಗೌರವೋದ್ಗಾರ ಮತ್ತು ಅವರ ಬಗೆಗಿನ ಭಾವ

ಪೂ. ಸದಾನಂದ ಭಸ್ಮೆ ಮಹಾರಾಜರು

‘ರಾಮಪುರ (ಬಾಗಲಕೋಟೆ)ದಲ್ಲಿನ ಕೀರ್ತನಕಾರರಾದ ಶ್ರೀ. ಸದಾನಂದ ಭಸ್ಮೆ ಮಹಾರಾಜರು ಸಂತ ತುಕಾರಾಮ ಮಹಾರಾಜರ ಅಂತರಂಗದ ಭಕ್ತರಾಗಿದ್ದಾರೆ. ಸಂತ ತುಕಾರಾಮ ಮಹಾರಾಜರು ಸೂಕ್ಷ್ಮದಿಂದ ನೀಡಿದ ಜ್ಞಾನದ ಮೂಲಕ ಭಸ್ಮೆ ಮಹಾರಾಜರು ೬ ವರ್ಷಗಳಲ್ಲಿ ‘ತುಕಾರಾಮ ಚೈತನ್ಯ’ ಎಂಬ ಹೆಸರಿನ ಕನ್ನಡ ಭಾಷೆಯಲ್ಲಿನ ಗ್ರಂಥವನ್ನು ಬರೆದರು. ಭಸ್ಮೆ ಮಹಾರಾಜರು ನಿರಂತರ ರಾಮನಾಮದ ಜಪವನ್ನು ಮಾಡುತ್ತಾರೆ. ಅವರು ತಮ್ಮ ಶಿಷ್ಯರೊಂದಿಗೆ ಇದುವರೆಗೆ ೨ ಸಾವಿರ ಕೋಟಿ ರಾಮನಾಮದ ಜಪವನ್ನು ಮಾಡಿದ್ದಾರೆ.

ಶ್ರೀ. ಭಸ್ಮೆ ಮಹಾರಾಜರು ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ತೆಗೆದ ಗೌರವೋದ್ಗಾರ !

ಪರಾತ್ಪರ ಗುರು ಡಾ. ಆಠವಲೆಯವರು ಸ್ವಯಂ ಶ್ರೀರಾಮನೇ ಆಗಿದ್ದಾರೆ ಮತ್ತು ಎಲ್ಲ ಸಮಸ್ಯೆಗಳನ್ನು ಅವರು ಮಾತ್ರ ನಿವಾರಿಸ ಬಲ್ಲರು. ಅವರ ಚರಣಗಳಲ್ಲಿ ಕೋಟಿ ಕೋಟಿ ವಂದನೆಗಳು !

ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಶ್ರೀ. ಭಸ್ಮೆ ಮಹಾರಾಜರಲ್ಲಿರುವ ಭಾವ

ಒಮ್ಮೆ ಭಸ್ಮೆ ಮಹಾರಾಜರು ಉಡುಪಿಯಲ್ಲಿನ ಅವರ ಪರಿಚಯದ ಸಾಧಕ ಶ್ರೀ. ಸೋಮನಾಥ ಮಲ್ಯ ಇವರನ್ನು ‘ಸೋಮನಾಥಾನಂದ’ ಎಂದು ಕರೆಯತೊಡಗಿದರು. ಆಗ ಶ್ರೀ. ಸೋಮನಾಥ ಇವರು ಭಸ್ಮೆ ಮಹಾರಾಜರಿಗೆ, “ನನ್ನನ್ನು ಈ ರೀತಿ ಕರೆಯುವುದರ ಕಾರಣವೇನು ?” ಎಂದು ಕೇಳಿದರು. ಆಗ ಭಸ್ಮೆ ಮಹಾರಾಜರು, “ನಿಮ್ಮ ಹೃದಯದಲ್ಲಿ ಆನಂದಸ್ವರೂಪರಾದ ಪರಾತ್ಪರ ಗುರು ಡಾಕ್ಟರರ ವಾಸವಿದೆ; ಆದುದರಿಂದ ನಾನು ನಿಮ್ಮನ್ನು ‘ಸೋಮನಾಥಾನಂದ’ ಎಂದು ಕರೆಯುತ್ತೇನೆ,” ಎಂದು ಹೇಳಿದರು. – ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೭.೨೦೨೦)

ಈ ಲೇಖನವನ್ನು ಪೂ. ಸದಾನಂದ ಭಸ್ಮೆ ಮಹಾರಾಜರು  ಸಂತರೆಂದು ಘೋಷಿಸುವ ಮೊದಲು ಬರೆದಿದ್ದರಿಂದ ಶ್ರೀ. ಸದಾನಂದ ಭಸ್ಮೆ ಮಹಾರಾಜರು ಎಂದು ಉಲ್ಲೇಖಿಸಲಾಗಿದೆ.