ವಿಚಾರಣೆ ನಡೆಯುತ್ತಿರುವಾಗ ವಾರದಲ್ಲಿ ಕೆಲವು ದಿನ ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆ
ಮಥುರಾ (ಉತ್ತರ ಪ್ರದೇಶ) – ಶ್ರೀಕೃಷ್ಣ ಜನ್ಮಭೂಮಿಯ ೧೩.೩೭ ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ವಕೀಲ ಮಹಕ ಮಾಹೇಶ್ವರಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಯಾವ ಸ್ಥಳದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆಯೋ, ಆ ಸ್ಥಳವನ್ನು ಹಿಂದೂಗಳಿಗೆ ನೀಡಬೇಕು, ಇದರಿಂದ ಅಲ್ಲಿ ಭವ್ಯ ದೇವಸ್ಥಾನವನ್ನು ನಿರ್ಮಿಸಬಹುದು, ಎಂದು ಒತ್ತಾಯಿಸಿದ್ದಾರೆ. ಅದೇರೀತಿ ಅರ್ಜಿಯ ಆಲಿಕೆ ನಡೆಯುವ ತನಕ ಈ ಮಸೀದಿಯಲ್ಲಿ ಜನ್ಮಾಷ್ಠಮಿ ವರೆಗೆ ಅಥವಾ ವಾರದಲ್ಲಿ ಕೆಲವು ದಿನಗಳು ಪೂಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.

Lawyer Moves Allahabad High Court Seeking Removal Of Idgah Mosque From Site Claimed As Krishna Janam Bhoomi https://t.co/1pJCE2Ku2J
— Live Law (@LiveLawIndia) November 12, 2020
ಇದಕ್ಕೂ ಮೊದಲು ಶ್ರೀಕೃಷ್ಣ ವಿರಾಜಮಾನ ಪರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್, ನ್ಯಾಯವಾದಿ ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಮಂದಿ ಮಥುರಾದ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ೩ ಸಂಸ್ಥೆಗಳು ತಮ್ಮನ್ನು ಪಕ್ಷವನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಅರ್ಜಿ ಸಲ್ಲಿಸಿವೆ. ಈ ಬಗ್ಗೆ ನವೆಂಬರ್ ೧೮ ರಂದು ವಿಚಾರಣೆ ನಡೆಯಲಿದೆ.

ಪಿ.ಎಫ್.ಐ.ನ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ
ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಗೋವಂಶಗಳ ಹತ್ಯೆಯ ಮೇಲಿನ ನಿಷೇಧ ಕಾಯಂ : Calcutta High Court
ಮಧ್ಯಪ್ರದೇಶ ಹೈಕೋರ್ಟ್ ವಿಚಾರಣೆ ಮುಂದೂಡಿಕೆಯ ಮುಸ್ಲಿಂ ಅರ್ಜಿದಾರರ ಮನವಿಗೆ ಸುಪ್ರೀಂ ಕೋರ್ಟ್ ನಕಾರ – Bhojshala Controversy
ಉಚ್ಚ ನ್ಯಾಯಾಲಯದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ! – ಸರ್ವೋಚ್ಚ ನ್ಯಾಯಾಲಯ Supreme Court Order
‘ಕೊಲಿಜಿಯಂ’ನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲ ! – Collegium
ಯಾವುದೇ ಸ್ಥಳದಲ್ಲಿ ನಮಾಜ್ ಮಾಡುವುದು ಧಾರ್ಮಿಕ ಹಕ್ಕಲ್ಲ ! – ಮುಂಬಯಿ ಉಚ್ಚ ನ್ಯಾಯಾಲಯ