
‘ಆಶ್ರಮದಲ್ಲಿ ಆಯುರ್ವೇದೀಯ ಉಪಚಾರಕ್ಕಾಗಿ ಒಂದು ಜಿಗಣೆಯಿತ್ತು. ಜಿಗಣೆಯು ತ್ವಚೆಗೆ ಅಂಟಿಕೊಳ್ಳುತ್ತದೆ ಮತ್ತು ಶರೀರದಲ್ಲಿರುವ ಅಶುದ್ಧ ರಕ್ತವನ್ನು ಹೀರಿಕೊಳ್ಳುತ್ತದೆ. ಇದರಿಂದ ಮನುಷ್ಯನ ಮೇಲೆ ಉಪಚಾರವಾಗುತ್ತದೆ. ಆರೋಗ್ಯವನ್ನು ನೀಡುವ ಧನ್ವಂತರಿ ದೇವರ ಕೈಯಲ್ಲಿ ಜಿಗಣೆಯಿರುತ್ತದೆ. ಇದರಿಂದ ‘ಜಿಗಣೆಯು ದೈವೀ ಜೀವವಾಗಿದೆ, ಎನ್ನುವುದು ಗಮನಕ್ಕೆ ಬರುತ್ತದೆ.
ಆಶ್ರಮದಲ್ಲಿದ್ದ ಜಿಗಣೆಯ ‘ಯೂನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಪರೀಕ್ಷಣೆ ಮಾಡಿದಾಗ, ಅದರಲ್ಲಿ ನಕಾರಾತ್ಮಕ ಶಕ್ತಿ ಇರಲಿಲ್ಲ. ಅದರಲ್ಲಿ ಸಕಾರಾತ್ಮಕ ಶಕ್ತಿಯಿರುವುದು ಕಂಡು ಬಂದಿತು. ‘ಅದರಲ್ಲಿ ಸಾತ್ತ್ವಿಕತೆಯ ಅರಿವು ಹೇಗಿದೆ ?, ಎನ್ನುವ ಬಗ್ಗೆ ಒಂದು ಪ್ರಯೋಗವನ್ನು ಮಾಡಲಾಯಿತು, ಪರೀಕ್ಷಣೆಯ ಸಮಯದಲ್ಲಿ ಅದು ಸಾತ್ತ್ವಿಕ ಆಯುರ್ವೇದೀಯ ಔಷದಿಯ ಹತ್ತಿರವೇ ಹೋಯಿತು. ಅದರ ಎದುರಿಗೆ ಧನ್ವಂತರಿ ದೇವರ ಚಿತ್ರವನ್ನು ಇಟ್ಟಾಗ, ಅದು ಆ ಚಿತ್ರದ ಬಳಿಗೆ ಹೋಗಿ ಧನ್ವಂತರಿ ದೇವರ ಚರಣಗಳನ್ನು ಸ್ಪರ್ಶಿಸಿತು. ಹೀಗೆ ಈ ದೈವೀ ಜೀವವು ೨ ದಿನ ಪ್ರಯೋಗದಲ್ಲಿ ಭಾಗವಹಿಸಿ ಇಂದು (೨.೮.೨೦೨೦ ರಂದು) ಪ್ರಾಣ ಬಿಟ್ಟಿತು.
ಈ ಜಿಗಣೆಯ ಬಗ್ಗೆ ತಮಿಳುನಾಡಿನ ಚೆನ್ನೈಯಲ್ಲಿರುವ ಸಪ್ತರ್ಷಿ ಜೀವನಾಡಿಪಟ್ಟಿ ವಾಚಕರಾದ ಪೂ. ಡಾ. ಓಂ ಉಲಗನಾಥನ್ ಇವರಿಗೆ ಹೇಳಿದಾಗ, ಅವರ ಮಾಧ್ಯಮದಿಂದ ಸಪ್ತರ್ಷಿಗಳು ಆಶ್ರಮದಲ್ಲಿ ಈ ಜಿಗಣೆಯ ವಾಸ್ತವ್ಯವಿರುವುದು ಶುಭಶಕುನವಾಗಿದೆ. ಮೃತ ಜಿಗಣೆಯನ್ನು ಆಶ್ರಮದ ಪರಿಸರದಲ್ಲಿರುವ ಒಂದು ಒಳ್ಳೆಯ ವೃಕ್ಷದ ಕೆಳಗೆ ಮಣ್ಣಿನಲ್ಲಿ ಹೂಳಿರಿ. ಅದನ್ನು ಅಲ್ಲಿಡುವಾಗ ಧನ್ವಂತರಿ ದೇವತೆಯ ಶ್ಲೋಕವನ್ನು ಪಠಿಸಿರಿ ಎಂದು ಹೇಳಿದ್ದರು. ಸಪ್ತರ್ಷಿಗಳು ಹೇಳಿದಂತೆ ೨.೮.೨೦೨೦ರಂದು ಮೃತ ಜಿಗಣೆಯನ್ನು ಆಶ್ರಮದ ಕೈತೋಟದ ಅಶ್ವತ್ಥ (ಆಲದ) ವೃಕ್ಷದ ಕೆಳಗೆ ಮಣ್ಣಿನಲ್ಲಿ ಹೂಳಲಾಯಿತು.
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.(೨.೮.೨೦೨೦)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !