
ಅಧಿಕ ಆಶ್ವಯುಜ ಮಾಸವು ‘೧೮.೯.೨೦೨೦ ರಿಂದ ಆರಂಭವಾಗಿದೆ. ಅಧಿಕ ಮಾಸದಿಂದ ಎಲ್ಲರಿಗೂ ಹಿಂದೂ ಧರ್ಮದ ತಿಥಿ, ನಕ್ಷತ್ರ, ಶುಭ-ಅಶುಭ ಮತ್ತು ಮಾಸಕ್ಕನುಸಾರ ಪ್ರತಿಯೊಂದು ದಿನದ ಶಾಸ್ತ್ರಾರ್ಥದ ಜ್ಞಾನವಾಗಲು ‘ಸಾಪ್ತಾಹಿಕ ಶಾಸ್ತ್ರಾರ್ಥ’ (ಸಾಪ್ತಾಹಿಕ ದಿನವಿಶೇಷ) ಈ ಲೇಖನಮಾಲೆಯನ್ನು ಪ್ರಕಟಿಸುತ್ತಿದ್ದೇವೆ.

೨. ಶಾಸ್ತ್ರಾರ್ಥ
೨ ಅ. ಅಧಿಕ ಮಾಸ : ಅಧಿಕ ಮಾಸದ ಬಗ್ಗೆ ಸವಿಸ್ತಾರ ಮಾಹಿತಿ
https://www.sanatan.org/kannada/92226.html ಈ ಲಿಂಕ್ನಲ್ಲಿ ಲಭ್ಯವಿದೆ. ಅಧಿಕ ಮಾಸವನ್ನು ‘ಪುರುಷೋತ್ತಮ ಮಾಸ’ವೆಂದು ಕರೆಯುತ್ತಾರೆ. ಈ ಮಾಸದಲ್ಲಿ ಹೆಚ್ಚೆಚ್ಚು ನಾಮಜಪ, ದಾನ ಮತ್ತು ಪುಣ್ಯಕರ್ಮಗಳನ್ನು ಮಾಡಬೇಕು. ಇದರ ಫಲವು ಮುಂದಿನ ಅಧಿಕ ಮಾಸದವರೆಗೆ ಪ್ರಾಪ್ತವಾಗುತ್ತದೆ.
೨. ಆ. ಕ್ಷಯ ದಿನ : ೧೯.೯.೨೦೨೦ ಈ ದಿನವು ‘ಕ್ಷಯ ದಿನ’ವಾಗಿದೆ. ಯಾವ ತಿಥಿಯ ಸಮಯದಲ್ಲಿ ಸೂರ್ಯೋದಯದ ಸಮಯ ವಿರುವುದಿಲ್ಲವೋ, ಅದು ‘ಕ್ಷಯ ತಿಥಿ’ ಆಗಿರುತ್ತದೆ. ಕ್ಷಯ ತಿಥಿಯು ಶುಭ ಕಾರ್ಯಕ್ಕಾಗಿ ವರ್ಜ್ಯವಿರುತ್ತದೆ.
೨ ಇ. ವಿನಾಯಕ ಚತುರ್ಥಿ : ಪ್ರತಿಯೊಂದು ಮಾಸದ ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದಲ್ಲಿನ ಚತುರ್ಥಿ ತಿಥಿಗೆ ‘ವಿನಾಯಕ ಚತುರ್ಥಿ’ ಎನ್ನುತ್ತಾರೆ. ಈ ದಿನ ಶ್ರೀ ವಿನಾಯಕ (ಗಣೇಶ) ವ್ರತವನ್ನು ಮಾಡುತ್ತಾರೆ. ಈ ದಿನ ಶ್ರೀ ವಿನಾಯಕಿ ಚತುರ್ಥಿ ಮಹಾತ್ಮೆ, ವ್ರತಕಥೆ ಮತ್ತು ಶ್ರೀ ವಿನಾಯಕ ಅಷ್ಟೋತ್ತರಶತ ನಾಮಸ್ತೋತ್ರವನ್ನು ಓದುತ್ತಾರೆ. ಈ ಉಪಾಸನೆಯಿಂದ ಎಲ್ಲ ಕಾರ್ಯಗಳು ಸಿದ್ಧವಾಗುತ್ತವೆ.
೨ ಈ. ದುರ್ಗಾಷ್ಟಮಿ : ಪ್ರತಿಯೊಂದು ಮಾಸದ ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದಲ್ಲಿನ ಅಷ್ಟಮಿ ತಿಥಿಗೆ ‘ದುರ್ಗಾಷ್ಟಮಿ’ ಎನ್ನುತ್ತಾರೆ. ಈ ದಿನ ಶ್ರೀ ದುರ್ಗಾದೇವಿಯ ವ್ರತವನ್ನು ಮಾಡುತ್ತಾರೆ. ಅಸುರ ಶಕ್ತಿಗಳ ನಾಶವಾಗಿ ಭಯಮುಕ್ತವಾಗಲು ಈ ವ್ರತವನ್ನು ಮಾಡುತ್ತಾರೆ. ಈ ದಿನ ದುರ್ಗಾಸಪ್ತಶತಿ ಸ್ತೋತ್ರ, ಕವಚ, ಅರ್ಗಲಾ ಸ್ತೋತ್ರ ಮುಂತಾದ ದೇವಿ ಸ್ತೋತ್ರಗಳನ್ನು ಪಠಿಸುತ್ತಾರೆ.
೨ ಉ. ಯಮಘಂಟ ಯೋಗ : ರವಿವಾರ ಮಾಘಾ, ಸೋಮವಾರ ವಿಶಾಖಾ, ಮಂಗಳವಾರ ಆರ್ದ್ರಾ, ಬುಧವಾರ ಮೂಲಾ, ಗುರುವಾರ ಕೃತ್ತಿಕಾ, ಶುಕ್ರವಾರ ರೋಹಿಣಿ ಮತ್ತು ಶನಿವಾರ ಹಸ್ತಾ ನಕ್ಷತ್ರಗಳು ಒಟ್ಟಾಗಿ ಬಂದರೆ ‘ಯಮಘಂಟ ಯೋಗ’ವಾಗುತ್ತದೆ. ಇದು ಅನಿಷ್ಟ ಯೋಗವಾಗಿದೆ. ಈ ಯೋಗದ ಸಮಯದಲ್ಲಿ ಎಂದಿಗೂ ಪ್ರವಾಸ ಮಾಡಬಾರದು.
೩. ಅಧಿಕ ಮಾಸದಲ್ಲಿ ಮಾಡಬೇಕಾದ ಉಪಾಸನೆಯೊಂದಿಗೆ ಈ ವಾರದ ಕೆಲವು ತಿಥಿಗಳ ಮಹತ್ವವನ್ನು ಅರಿತು ಉಪಾಸನೆ ಮಾಡುವುದು ಲಾಭದಾಯಕವಾಗಿದೆ. ಸತ್ಸೇವೆಗೆ ಪ್ರಾಧಾನ್ಯತೆ ನೀಡಿ ಸತತ ಈಶ್ವರೀ ಅನುಸಂಧಾನದಲ್ಲಿದ್ದರೆ ಮನುಷ್ಯ ಜನ್ಮವು ಸಾರ್ಥಕವಾಗುತ್ತದೆ.’ – ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ವಾಸ್ತು ವಿಶಾರದ, ಅಂಕ ಜ್ಯೋತಿಷ್ಯ ವಿಶಾರದ, ರತ್ನಶಾಸ್ತ್ರ ವಿಶಾರದ, ಅಷ್ಟಕವರ್ಗ ವಿಶಾರದ, Certified Dowser, ರಮಲ ಪಂಡಿತ, ಹಸ್ತಾಕ್ಷರ ಮನೋವಿಶ್ಲೇಷಣೆ ಶಾಸ್ತ್ರ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೧೫.೯.೨೦೨೦)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !