ಚಾತುರ್ಮಾಸ

ಪ್ರಸ್ತುತ ಚಾತುರ್ಮಾಸ ನಡೆಯುತ್ತಿದೆ, ಚಾತುರ್ಮಾಸದ ಮಹತ್ವ, ವೈಶಿಷ್ಟ್ಯಗಳೇನು ? ಈ ಅವಧಿಯಲ್ಲಿ ಯಾವೆಲ್ಲ ವ್ರತಗಳನ್ನು ಮಾಡಬೇಕು ? ಮುಂತಾದ ಮಾಹಿತಿ ಗಳನ್ನು ವಾಚಕರಿಗಾಗಿ ನೀಡುತ್ತಿದ್ದೇವೆ.

ಋಷಿಪಂಚಮಿ

ತಿಥಿ : ಭಾದ್ರಪದ ಶುಕ್ಲ ಪಂಚಮಿ

ಋಷಿ : ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ ಇವರು ಸಪ್ತರ್ಷಿಗಳಾಗಿದ್ದಾರೆ.

ಉದ್ದೇಶ

ಅ. ‘ತಮ್ಮ ತಪೋಬಲದಿಂದ ಜಗತ್ತಿನಲ್ಲಿನ ಮಾನವರಿಗೆ ಅನಂತ ಉಪಕಾರವನ್ನು ಮಾಡಿದ ಮತ್ತು ಮಾನವನ ಜೀವನಕ್ಕೆ ಯೋಗ್ಯ ದಿಶೆಯನ್ನು ತೋರಿಸಿದ ಋಷಿಗಳನ್ನು ಈ ದಿನ ಸ್ಮರಿಸಲಾಗುತ್ತದೆ. – (ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

ಆ. ಮಾಸಿಕ ಸರದಿ, ಅಶೌಚ ಮತ್ತು ಸ್ಪರ್ಶಾಸ್ಪರ್ಶಗಳಿಂದ ಸ್ತ್ರೀಯರ ಮೇಲಾಗುವ ಪರಿಣಾಮಗಳು ಈ ವ್ರತದಿಂದ ಹಾಗೂ ಗೋಕುಲಾಷ್ಟಮಿಯ ದಿನ ಮಾಡಿದ ಉಪವಾಸದಿಂದ ಕಡಿಮೆಯಾಗುತ್ತದೆ. (ಪುರುಷರ ಮೇಲಾಗುವ ಪರಿಣಾಮಗಳು ಕ್ಷೌರ ಮುಂತಾದ ಪ್ರಾಯಶ್ಚಿತ್ತ ಕರ್ಮದಿಂದ ಮತ್ತು ವಾಸ್ತುವಿನ ಮೇಲಾಗುವ ಪರಿಣಾಮವು ಉದಕಶಾಂತಿಯಿಂದ ಕಡಿಮೆಯಾಗುತ್ತದೆ.)

ವ್ರತವನ್ನು ಆಚರಿಸುವ ಪದ್ಧತಿ

ಅ. ಈ ದಿನ ಸ್ತ್ರೀಯರು ವನಸ್ಪತಿಯ (ಆಘಾಡಾ) ಕಡ್ಡಿಯಿಂದ ಹಲ್ಲುಜ್ಜಬೇಕು.

ಆ. ಸ್ನಾನವಾದ ನಂತರ ‘ಮಾಸಿಕ ಸರದಿಯ ಸಮಯದಲ್ಲಿ ತಿಳಿದೋ ಅಥವಾ ತಿಳಿಯದೆಯೋ ಆಗಿರುವ ಸ್ಪರ್ಶದಿಂದ ಉಂಟಾದ ದೋಷಗಳ ನಿವಾರಣೆಗಾಗಿ, ಅರುಂಧತಿ ಸಮೇತ ಸಪ್ತರ್ಷಿಗಳನ್ನು ಪ್ರಸನ್ನಗೊಳಿಸಲು ನಾನು ಈ ವ್ರತವನ್ನು ಮಾಡುತ್ತಿದ್ದೇನೆ ಎಂದು ಪೂಜೆಗೆ ಮುಂಚೆ ಸಂಕಲ್ಪ ಮಾಡಬೇಕು.

ಇ. ಮಣೆಯ ಮೇಲೆ ಅಕ್ಕಿಯ ಎಂಟು ರಾಶಿಗಳನ್ನು ಹಾಕಿ ಅವುಗಳ ಮೇಲೆ ಎಂಟು ಅಡಕೆಗಳನ್ನಿಟ್ಟು ಕಶ್ಯಪಾದಿ ಸಪ್ತರ್ಷಿ ಮತ್ತು ಅರುಂಧತಿಯ ಅವಾಹನೆಯನ್ನು ಮಾಡಿ ಶೋಡಷೋಪಚಾರ ಪೂಜೆಯನ್ನು ಮಾಡಬೇಕು.

ಈ. ಈ ದಿನ ಕೇವಲ ಗೆಡ್ಡೆಗೆಣಸುಗಳ ಆಹಾರವನ್ನು ಸೇವಿಸಬೇಕು. ಎತ್ತುಗಳ ಶ್ರಮದ ಏನನ್ನೂ ತಿನ್ನಬಾರದು ಎಂದು ಹೇಳಲಾಗಿದೆ.

ಉ. ಮರುದಿನ ಕಶ್ಯಪಾದಿ ಸಪ್ತರ್ಷಿ ಮತ್ತು ಅರುಂಧತಿ ಇವರ ವಿಸರ್ಜನೆಯನ್ನು ಮಾಡಬೇಕು.

ಹನ್ನೆರಡು ವರ್ಷಗಳ ನಂತರ ಅಥವಾ ವಯಸ್ಸಿನ ಐವತ್ತನೆಯ ವರ್ಷದ ನಂತರ ಈ ವ್ರತದ ಸಮಾಪ್ತಿಯನ್ನು (ಉದ್ಯಾಪನೆ) ಮಾಡಬಹುದು. ಬೇಕಿದ್ದಲ್ಲಿ ಉದ್ಯಾಪನೆಯ ನಂತರವೂ ವ್ರತವನ್ನು ಮುಂದುವರಿಸಬಹುದು. (ಮುಂದುವರಿಯುವುದು)

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)