
ಚಾತುರ್ಮಾಸದ ಮಹತ್ವ, ವೈಶಿಷ್ಟ್ಯಗಳೇನು ? ಈ ಅವಧಿಯಲ್ಲಿ ಯಾವೆಲ್ಲ ವ್ರತಗಳನ್ನು ಮಾಡಬೇಕು ? ಮುಂತಾದ ಮಾಹಿತಿ ಗಳನ್ನು ವಾಚಕರಿಗಾಗಿ ನೀಡುತ್ತಿದ್ದೇವೆ.
ಮಂಗಳಗೌರಿ
‘ಮಂಗಳಗೌರಿಯು ಸೌಭಾಗ್ಯ ದಾಯಕ ದೇವತೆಯಾಗಿದ್ದಾಳೆ. ಇದು ನವವಿವಾಹಿತ ಹುಡುಗಿಯರು ಮಾಡಬೇಕಾದ ವ್ರತವಾಗಿದೆ. ವಿವಾಹವಾದ ನಂತರ ಐದರಿಂದ ಏಳು ವರ್ಷಗಳ ಕಾಲ ಶ್ರಾವಣ ಮಾಸದಲ್ಲಿನ ಪ್ರತಿ ಮಂಗಳವಾರ ಈ ವ್ರತವನ್ನು ಮಾಡುವುದಿರುತ್ತದೆ. ಇದರಲ್ಲಿ ಶಿವ ಮತ್ತು ಗಣಪತಿಯೊಂದಿಗೆ ಗೌರಿಪೂಜೆಯನ್ನು ಮಾಡುತ್ತಾರೆ.
ಜೀವಂತಿಕಾಪೂಜೆ
ಈ ವ್ರತವನ್ನು ಶ್ರಾವಣ ಮಾಸದಲ್ಲಿ ಪ್ರತಿ ಶುಕ್ರವಾರ ಮಾಡುತ್ತಾರೆ. ‘ಜೀವಂತಿಕಾ ಅಥವಾ ‘ಜೀವತಿಯು ಈ ವ್ರತದ ಅಧಿದೇವತೆಯಾಗಿದ್ದಾಳೆ. ಇವಳು ಸಣ್ಣ ಮಕ್ಕಳನ್ನು ರಕ್ಷಿಸುತ್ತಾಳೆ. ಮೊದಲನೆಯ ಶುಕ್ರವಾರದಂದು ಗೋಡೆಯ ಮೇಲೆ ಗಂಧದಿಂದ ಜೀವತಿಯ ಚಿತ್ರವನ್ನು ಬಿಡಿಸಿ ಸ್ತ್ರೀಯರು ಅದನ್ನು ಪೂಜಿಸುತ್ತಾರೆ. ಇತ್ತೀಚಿನ ಕಾಲದಲ್ಲಿ ಮುದ್ರಿಸಿದ ಭಾವಚಿತ್ರಗಳನ್ನು ಪೂಜಿಸುತ್ತಾರೆ.
ಪಿಠೋರಿ (ದರ್ಶ) ಅಮಾವಾಸ್ಯೆ
ಶ್ರಾವಣ ಮಾಸದಲ್ಲಿನ ಅಮಾವಾಸ್ಯೆ ಯೆಂದರೆ ಪಿಠೋರಿ ಅಮಾವಾಸ್ಯೆ. ಸಂತಾನಪ್ರಾಪ್ತಿಗಾಗಿ ಸ್ತ್ರೀಯರು ಈ ವ್ರತವನ್ನು ಮಾಡುತ್ತಾರೆ.
(ಮುಂದುವರಿಯುವುದು)
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !