‘ಕೊರೋನಾ ವಿಷಾಣುಗಳ ಹಾವಳಿಯಿಂದ ನಿರ್ಮಾಣವಾಗಿರುವ ಆಪತ್ಕಾಲದ ಸ್ಥಿತಿಯಲ್ಲಿ ‘ನಾಗಪಂಚಮಿ ಪೂಜೆಯನ್ನು ಹೇಗೆ ಮಾಡಬೇಕು ?

ಶ್ರೀ. ದಾಮೋದರ ವಝೆ

‘ನಮ್ಮ ಕುಟುಂಬವು ಸದಾಸರ್ವಕಾಲ ನಾಗಭಯದಿಂದ ಮುಕ್ತವಾಗಬೇಕು, ಹಾಗೆಯೇ ನಾಗದೇವತೆಯ ಕೃಪಾಶೀರ್ವಾದವು ಪ್ರಾಪ್ತವಾಗಬೇಕು’, ಎಂದು ಪ್ರತಿವರ್ಷ ಶ್ರಾವಣ ಶುಕ್ಲ ಪಕ್ಷ ಪಂಚಮಿಗೆ ನಾಗಪಂಚಮಿಗೆ ನಾಗಪೂಜೆಯನ್ನು ಮಾಡಲಾಗುತ್ತದೆ. ಈ ವರ್ಷ ೨೫.೭.೨೦೨೦ ರಂದು ನಾಗಪಂಚಮಿ ಇದೆ. ಈ ದಿನದಂದು ಕೆಲವು ಸ್ಥಳಗಳಲ್ಲಿ ಮಣ್ಣಿನ ನಾಗನನ್ನು ತಂದು ಅದರ ಪೂಜೆಯನ್ನು ಮಾಡುತ್ತಿದ್ದರೆ, ಕೆಲವು ಸ್ಥಳದಲ್ಲಿ ಹುತ್ತದ ಪೂಜೆಯನ್ನು ಮಾಡಲಾಗುತ್ತದೆ.

೧. ನಾಗದೇವತೆಯ ಪೂಜೆ

೧ ಅ. ನಾಗದೇವತೆಯ ಚಿತ್ರವನ್ನು ಬಿಡಿಸುವುದು : ಅರಿಶಿಣಮಿಶ್ರಿತ ಚಂದನದಿಂದ ಗೋಡೆಯ ಮೇಲೆ ಅಥವಾ ಮಣೆಯ ಮೇಲೆ ನಾಗನ ಚಿತ್ರವನ್ನು ಬಿಡಿಸಬೇಕು (ಅಥವಾ ಒಂಬತ್ತು ನಾಗಗಳ ಚಿತ್ರಗಳನ್ನು ಬಿಡಿಸಬೇಕು.) ಮತ್ತು ಆ ಸ್ಥಳದಲ್ಲಿ ನಾಗದೇವತೆಯ ಪೂಜೆಯನ್ನು ಮಾಡಬೇಕು. ‘ಸಪತ್ನೀಕನಾಗದೇವತಾಭ್ಯೋ ನಮಃ |’ ಈ ನಾಮಮಂತ್ರವನ್ನು ಹೇಳುತ್ತ ಪೂಜೆಯನ್ನು ಮಾಡಬೇಕು.

೧ ಆ. ಷೋಡಶೋಪಚಾರ ಪೂಜೆ : ಯಾರಿಗೆ ನಾಗದೇವತೆಯ ‘ಷೋಡಶೋಪಚಾರ ಪೂಜೆ’ಯನ್ನು ಮಾಡಲು ಸಾಧ್ಯವಿದೆಯೋ, ಅವರು ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

೧ ಇ. ಪಂಚೋಪಚಾರ ಪೂಜೆ : ಯಾರಿಗೆ ನಾಗದೇವತೆಯ ‘ಷೋಡಶೋಪಚಾರ ಪೂಜೆ’ಯನ್ನು ಮಾಡಲು ಸಾಧ್ಯವಿಲ್ಲ, ಅಂತಹವರು ‘ಪಂಚೋಪಚಾರ ಪೂಜೆ’ಯನ್ನು ಮಾಡಬೇಕು ಮತ್ತು ಹಾಲು, ಸಕ್ಕರೆ, ಅರಳು ಇವುಗಳ, ಹಾಗೆಯೇ ಕುಲದ ಪರಂಪರೆಗನುಸಾರ ಪಾಯಸ ಇತ್ಯಾದಿ ಪದಾರ್ಥಗಳ ನೈವೇದ್ಯವನ್ನು ತೋರಿಸಬೇಕು. (ಪಂಚೋಪಚಾರ ಪೂಜೆ : ಗಂಧ, ಅರಿಶಿಣ-ಕುಂಕುಮ, ಪುಷ್ಪ, ಧೂಪ, ದೀಪ ಮತ್ತು ನೈವೇದ್ಯ ಈ ಕ್ರಮದಿಂದ ಪೂಜೆಯನ್ನು ಮಾಡಬೇಕು.)

೨. ಪೂಜೆಯ ನಂತರ ನಾಗದೇವತೆಗೆ ಮಾಡುವ ಪ್ರಾರ್ಥನೆ !

‘ಹೇ ನಾಗದೇವತೆಗಳೇ, ಶ್ರಾವಣ ಶುಕ್ಲ ಪಕ್ಷ ಪಂಚಮಿಯಂದು ನಾನು ಮಾಡಿದ ಈ ನಾಗಪೂಜೆಯಿಂದ ನಾಗದೇವತೆಯು ಪ್ರಸನ್ನವಾಗಿ ನನಗೆ ಯಾವಾಗಲೂ ಸುಖವನ್ನು ನೀಡಬೇಕು. ಹೇ ನಾಗದೇವತೆಗಳೇ, ನಾನು ಮಾಡಿದ ಪೂಜೆಯಲ್ಲಿ ಅಜ್ಞಾನದಿಂದ ಮತ್ತು ತಿಳಿಯದೇ ಏನಾದರೂ ಹೆಚ್ಚು-ಕಡಿಮೆಯಾಗಿದ್ದರೆ ನನ್ನನ್ನು ಕ್ಷಮಿಸಿ. ನಿಮ್ಮ ಕೃಪೆಯಿಂದಾಗಿ ನನ್ನ ಎಲ್ಲ ಮನೋಕಾಮನೆಗಳು ಪೂರ್ತಿಯಾಗಲಿ. ನನ್ನ ಕುಲದಲ್ಲಿ ನಾಗವಿಷದ ಭಯ ಎಂದಿಗೂ ಉತ್ಪನ್ನವಾಗದಿರಲಿ’, ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ.’

‘ನಾಗಪಂಚಮಿಯ ಪೂಜೆಯನ್ನು ಹೇಗೆ ಮಾಡಬೇಕು ?’ ಎಂಬುದರ ಬಗ್ಗೆ ಸವಿಸ್ತಾರ ಮಾಹಿತಿ ಬೇಕಿದ್ದರೆ ‘ಸನಾತನ ಸಂಸ್ಥೆ’ಯ ಜಾಲತಾಣದ ಮುಂದೆ ಕೊಟ್ಟಿರುವ ‘ಲಿಂಕ್’ಗೆ ತಪ್ಪದೇ ಭೇಟಿ ನೀಡಿ.

https://www.sanatan.org/kannada/199.html

– ಶ್ರೀ. ದಾಮೋದರ ವಝೆಗುರುಜಿ, ಸಂಚಾಲಕರು, ಸನಾತನ ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೭.೨೦೨೦)