ಹಿಂದೂಗಳ ದೇವಸ್ಥಾನದ ಪಾತ್ರೆ ಹಾಗೂ ದೀಪಗಳನ್ನು ಹರಾಜು ಮಾಡುವ ಕೇರಳ ಸರಕಾರದ ಆದೇಶವನ್ನು ರದ್ದು ಪಡಿಸಿದ ಉಚ್ಚ ನ್ಯಾಯಾಲಯ

‘ಹಿಂದೂ ಸೇವಾ ಕೇಂದ್ರ’ದ ಅರ್ಜಿಯ ಬಗ್ಗೆ ನಿರ್ಧಾರ

ನ್ಯಾಯಾಲಯವು ಇಂತಹ ಆದೇಶವನ್ನು ರದ್ದು ಪಡಿಸುವುದರ ಜೊತೆಗೆ ‘ಹಿಂದೂಗಳ ಭಾವನೆಗಳನ್ನು ನೋಯಿಸುವ ಆದೇಶವನ್ನು ನೀಡಿದವರಿಗೂ ಶಿಕ್ಷೆಯನ್ನು ನೀಡಬೇಕು’, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕೊಚಿ (ಕೇರಳ) – ‘ದೇವಸ್ಥಾನದ ದೀಪ ಹಾಗೂ ಪಾತ್ರೆಗಳನ್ನು ಹರಾಜು ಮಾಡಬಾರದೆಂದು ಆದೇಶವನ್ನು ಕೇರಳದ ಉಚ್ಚ ನ್ಯಾಯಾಲಯಯು ಸರಕಾರಕ್ಕೆ ನೀಡಿದೆ. ‘ಹಿಂದೂ ಸೇವಾ ಕೇಂದ್ರ’ವು ದಾಖಲಿಸಿದೆ ಅರ್ಜಿಯ ಮೇಲೆ ಈ ನಿರ್ಣಯವನ್ನು ನೀಡಿದೆ. (ಹಿಂದೂ ಧರ್ಮದ ಮೇಲಿನ ಆಘಾತಗಳ ವಿರುದ್ಧ ಧ್ವನಿ ಎತ್ತುವ ‘ಹಿಂದೂ ಸೇವಾ ಕೇಂದ್ರ’ದ ಅಭಿನಂದನೆಗಳು ! ಇತರ ಹಿಂದುತ್ವನಿಷ್ಠರೂ ಇದರಿಂದ ಪಾಠ ಕಲಿಯಬೇಕು ! – ಸಂಪಾದಕರು)
ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ನಮ್ಮ ದೇವಸ್ಥಾನವನ್ನು ಲೂಟಿ ಮಾಡುವ ಹೊಸ ಹೊಸ ಮಾರ್ಗವನ್ನು ಹುಡುಕುತ್ತಿದೆ. ಅದಕ್ಕೆ ನಾವು ದೇವಸ್ಥಾನವನ್ನು ಮುಟ್ಟಲೂ ಬಿಡುವುದಿಲ್ಲ’, ಎಂದು ‘ಹಿಂದೂ ಸೇವಾ ಕೇಂದ್ರ’ ಈ ಹಿಂದುತ್ವನಿಷ್ಠ ಸಂಘಟನೆಯ ನ್ಯಾಯವಾದಿ ಪ್ರಥಮೇಶ ವಿಶ್ವನಾಥ ಇವರು ಟ್ವೀಟ್ ಮಾಡಿ ಎಚ್ಚರಿಕೆಯನ್ನು ನೀಡಿದ್ದಾರೆ. ನ್ಯಾಯವಾದಿ ಪ್ರಥಮೇಶ ವಿಶ್ವನಾಥ ಇವರು ಕೇರಳದ ಖ್ಯಾತ ಹಿಂದುತ್ವನಿಷ್ಠ ನ್ಯಾಯವಾದಿಗಳಾಗಿದ್ದಾರೆ.

ಪ್ರತಿಯೊಂದು ದೇವಸ್ಥಾನದಿಂದ ೧ ಲಕ್ಷ ರೂಪಾಯಿ ‘ಮುಖ್ಯಮಂತ್ರಿ ಸಹಾಯ ನಿಧಿ’ಗೆ ನೀಡುವ ನಿರ್ಧಾರಕ್ಕೂ ತಡೆ

ಕೇರಳದ ಉಚ್ಚ ನ್ಯಾಯಾಲಯವು ‘ಮಲಬಾರ ದೇವಸ್ವಮ್ ಬೋರ್ಡ್’ನ ಪ್ರತಿಯೊಂದು ದೇವಸ್ಥಾನದ ನಿಧಿಯಿಂದ ೧ ಲಕ್ಷ ರೂಪಾಯಿ ಹಾಗೂ ಸಿಬ್ಬಂದಿಗಳ ಸಂಬಳದ ಸ್ವಲ್ಪ ಹಣವನ್ನು ‘ಮುಖ್ಯಮಂತ್ರಿ ಸಹಾಯ ನಿಧಿ’ಗೆ ನೀಡುವ ನಿರ್ಧಾರವನ್ನೂ ತಡೆಹಿಡಿಯಲಾಗಿದೆ. ಇದರ ಬಗೆಗಿನ ಅರ್ಜಿಯನ್ನು ‘ಹಿಂದೂ ಸೇವಾ ಕೇಂದ್ರ’ವು ದಾಖಲಿಸಿತ್ತು.