

‘ಕಳೆದ ಕೆಲವು ತಿಂಗಳುಗಳಿಂದ ಪರಾತ್ಪರ ಗುರು ಡಾಕ್ಟರರ ದಿವ್ಯ ಸತ್ಸಂಗದಲ್ಲಿ ಈಶ್ವರನ ಕೃಪೆಯಿಂದ ನನಗೆ ಈ ಮುಂದಿನ ಅನುಭೂತಿ ಬರುತ್ತಿದೆ. ನನಗೆ ಗುರುದೇವರ ಸ್ಥೂಲರೂಪದಲ್ಲಿ ದರ್ಶನವಾಗದೇ, ಅದೇ ರೀತಿ ಅವರ ಅಸ್ತಿತ್ವವು ಅರಿವಾಗದೇ ಅವರು ಪ್ರಕಾಶದ ರೂಪದಲ್ಲಿ ಕಾಣಿಸುತ್ತಾರೆ. ಅವರ ಸ್ಥಾನದಲ್ಲಿ ನನಗೆ ಒಮ್ಮೆ ಹಳದಿ, ಮತ್ತೊಮ್ಮೆ ಬಿಳಿ ಬಣ್ಣದ ಪ್ರಕಾಶಮಾನ ಗೋಲಾಕಾರ ಕಾಣಿಸುತ್ತದೆ. ಆ ಪ್ರಕಾಶ ಸೂರ್ಯನಂತಹ ತೇಜಃಪುಂಜ ಹಾಗೂ ಕಣ್ಣುಗಳು ಬೆಳಗುತ್ತದೆ, ಹೀಗೆ ದಿವ್ಯವಾಗಿರುವುದರಿಂದ ನಾನು ಸ್ಥೂಲದ ಕಣ್ಣುಗಳಿಂದ ಆ ಪ್ರಕಾಶದತ್ತ ನೋಡಲು ಸಾಧ್ಯವಿಲ್ಲ. ಹೀಗಿದ್ದರೂ ‘ಆ ಪ್ರಕಾಶದತ್ತ ಪುನಃ ಪುನಃ ನೋಡಬೇಕು, ಎಂದು ನನಗೆ ಅನಿಸುತ್ತದೆ.
ಪರಾತ್ಪರ ಗುರುದೇವರ ಅಖಂಡ ನಿರ್ಗುಣ ಸ್ಥಿತಿಯ, ಅದೇರೀತಿ ಅವರ ಸರ್ವೋಚ್ಚ ಆಧ್ಯಾತ್ಮಿಕ ಸ್ಥಿತಿಯ ಸಾಕ್ಷಿ ಸಿಗುತ್ತಿದೆ, ಅಂತಹ ಮಹಾನ ಮತ್ತು ಏಕಮೇವಾದ್ವೀತಿಯ ಗುರುದೇವರ ದಿವ್ಯ ಸತ್ಸಂಗ ಅನುಭವಿಸಲು ಆಗುತ್ತಿದೆ. ಅದಕ್ಕಾಗಿ ಕೃಪಾವಾತ್ಸಲ್ಯ ಭಗವಂತನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
ಇದನ್ನು ಅನುಭವಿಸಿದ ನಂತರ ನನ್ನ ಮನಸ್ಸು ನಿರ್ವಿಚಾರವಾಗಿ ‘ನಾನೂ ಪ್ರಕಾಶದ ರೂಪದಲ್ಲಿಯೇ ಇದ್ದೇನೆ, ಎಂದೆನಿಸುತ್ತದೆ ಹಾಗೂ ನನಗೆ ನನ್ನತನದ ಬೇರೆಯೇ ಅಸ್ತಿತ್ವದ ಅರಿವಾಗುವುದಿಲ್ಲ.
– ಸದ್ಗುರು (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೯.೨.೨೦೨೦)
ವೈಶಾಖ ಕೃಷ್ಣ ಪಕ್ಷ ಸಪ್ತಮಿ (೧೩.೫.೨೦೨೦)ಯಂದು ಪರಾತ್ಪರ ಗುರು ಡಾ. ಆಠವಲೆಯವರ ಹುಟ್ಟು ಹಬ್ಬದ ದಿನದಂದು ಪೂ.ಡಾ. ಓಂ ಉಲಗನಾಥನ್ ಇವರು ವಾಚನ ಮಾಡಿದ ಜೀವನಾಡಿಪಟ್ಟಿಯಲ್ಲಿ ಮಹರ್ಷಿಗಳು ನೀಡಿದ ಸಂದೇಶ
ಪರಾತ್ಪರ ಗುರುದೇವರ ೭೮ ನೇ ಜನ್ಮದಿನದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರಿಗೆ ಬಂದ ಅನುಭೂತಿಗಳು
ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೭೮ ನೇ ಜನ್ಮದಿನ ನಿಮಿತ್ತ ‘ಆನ್ಲೈನ್ ಭಾವಸತ್ಸಂಗದ ಮೂಲಕ ಸಾಧಕರು ವ್ಯಕ್ತಪಡಿಸಿದ ಕೃತಜ್ಞತೆ !
ಸಾಧನೆಯ ಬಗ್ಗೆ ಮಾರ್ಗದರ್ಶನ ಮತ್ತು ಪ್ರತ್ಯಕ್ಷ ತಮ್ಮ ಆಚರಣೆಯಿಂದ ಸಾಧಕರನ್ನು ತಯಾರಿಸುವ ಪರಾತ್ಪರ ಗುರು ಡಾ. ಆಠವಲೆ !