
ಕೊಲ್ಲಾಪುರ, 29 ಮೇ (ವಾರ್ತಾ.) – ಮಹಾರಾಷ್ಟ್ರದ ಹೆಮ್ಮೆಯಾಗಿರುವ ‘ಗೋಕುಲ್’ (ಕೊಲ್ಲಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ) ಹಾಲು ಸಂಘವು ಹಲಾಲ್ ಪ್ರಮಾಣಪತ್ರವನ್ನು ಪಡೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಹಲಾಲ್ ಪ್ರಮಾಣಪತ್ರವನ್ನು ತಕ್ಷಣವೇ ರದ್ದುಗೊಳಿಸದಿದ್ದರೆ ಉತ್ಪನ್ನಗಳನ್ನು ಬಹಿಷ್ಕರಿಸುವುದರ ಜೊತೆಗೆ ತೀವ್ರ ಜನಾಂದೋಲನವನ್ನು ಮಾಡಲಾಗುವುದು, ಹಾಗೆಯೇ ಸಮಯ ಬಂದರೆ ನೇರವಾಗಿ ‘ಗೋಕುಲ್’ ಮೇಲೆ ಬೃಹತ್ ಮೆರವಣಿಗೆಯನ್ನು ತೆಗೆಯಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಬೇಡಿಕೆಯ ವಿವರವಾದ ಮನವಿಯನ್ನು ಸಂಘಟನೆಗಳ ಪ್ರತಿನಿಧಿಗಳು ಕೊಲ್ಲಾಪುರದ ‘ಗೋಕುಲ್’ ನ ಆಡಳಿತ ಮಂಡಳಿ, ಕೊಲ್ಲಾಪುರದ ಜಿಲ್ಲಾಧಿಕಾರಿ ಡಾ. ವಿಜಯ ರಾಠೋಡ್ ಮತ್ತು ಜನಸುರಾಜ್ಯ ಶಕ್ತಿ ಪಕ್ಷದ ಶಾಸಕ ಅಶೋಕ ಮಾನೆ ಅವರಿಗೆ ನೀಡಿದರು.

ಜಾತ್ಯತೀತ ದೇಶದಲ್ಲಿ ಸರಕಾರಿ ಪ್ರಮಾಣಪತ್ರಗಳನ್ನು ಬದಿಗೊತ್ತಿ ತೆಗೆದುಕೊಂಡ ಈ ನಿರ್ಧಾರದಿಂದ ಬಹುಸಂಖ್ಯಾತ ಹಿಂದೂ ಗ್ರಾಹಕರ ಭಾವನೆಗಳಿಗೆ ಧಕ್ಕೆಯಾಗಿದೆ ಮತ್ತು ಆಡಳಿತವು ತಕ್ಷಣ ಇದನ್ನು ಗಮನಿಸಿ ಈ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕು ಎಂದು ಈ ಸಮಯದಲ್ಲಿ ಬಲವಾಗಿ ಒತ್ತಾಯಿಸಲಾಯಿತು. ಈ ವೇಳೆ ಕಾರ್ಯಕರ್ತರು ‘ಗೋಕುಲ್’ ನ ಹಲಾಲ್ ಪ್ರಮಾಣಪತ್ರದ ಪ್ರತಿಯನ್ನು ಸುಟ್ಟುಹಾಕಿದರು.
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !