ಬಾಂಗ್ಲಾದೇಶದಲ್ಲಿ ಹೊಸ ಸರಕಾರ ಬಂದು 100 ದಿನಗಳಾದರೂ ಹಿಂದೂಗಳು ಅಸುರಕ್ಷಿತರೇ!

ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಸುಮನ ಕುಮಾರ ರಾಯ ಅವರ ಹೇಳಿಕೆ

ಬಾಂಗ್ಲಾದೇಶದ ಪ್ರಧಾನಿ ತಾರಿಖ್ ರೆಹಮಾನ್

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ತಾರಿಕ್ ರೆಹಮಾನ್ ಅವರ ಸರಕಾರ ರಚನೆಯಾಗಿ 100 ದಿನಗಳು ಪೂರೈಸಿವೆ. ಈ ಸಂದರ್ಭದಲ್ಲಿ ಅವರ ಕಾರ್ಯವೈಖರಿಯು ಅಲ್ಲಿನ ಹಿಂದೂಗಳ ಜೀವನದ ಮೇಲೆ ಬೀರಿದ ಪರಿಣಾಮಗಳ ಕುರಿತು ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಮತ್ತು ‘ಬಾಂಗ್ಲಾದೇಶ ಸನಾತನ ಪಾರ್ಟಿ’ಯ ಪ್ರಧಾನ ಕಾರ್ಯದರ್ಶಿ ಶ್ರೀ. ಸುಮನ ಕುಮಾರ ರಾಯ ಅವರು ಮಾತನಾಡುತ್ತಾ, ಹೊಸ ಸರಕಾರವು ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯು ತೀವ್ರ ಕಳವಳದ ವಿಷಯವಾಗಿದೆ ಎಂದು ತಿಳಿಸಿದರು. ದೇಶದ ವಿವಿಧ ಭಾಗಗಳಲ್ಲಿ ಕೊಲೆ, ನಾಪತ್ತೆ, ಅತ್ಯಾಚಾರ, ದರೋಡೆ ಮತ್ತು ದೌರ್ಜನ್ಯದ ಘಟನೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಅಲ್ಪಸಂಖ್ಯಾತ ಹಿಂದೂಗಳು ಹೆಚ್ಚುತ್ತಿರುವ ಅಸುರಕ್ಷಿತತೆಯನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಧಾರ್ಮಿಕ ಭಾವನೆಗಳ ಹೆಸರಿನಲ್ಲಿ ನಡೆಯುವ ದಾಳಿಗಳು, ಧ್ವಂಸ, ಅವಮಾನ, ಭೂಮಿ ಒತ್ತುವರಿ, ದೇವಸ್ಥಾನಗಳ ವಶಪಡಿಸಿಕೊಳ್ಳುವಿಕೆ ಮತ್ತು ಸುಲಿಗೆಯಂತಹ ಕೃತ್ಯಗಳು ಸೇರಿವೆ.