ಮೂಲತಃ ಈ ಅಕ್ರಮ ಕಾಮಗಾರಿಯು ಆಗಿದ್ದಾದರೂ ಹೇಗೆ ? ರಾಜ್ಯದಲ್ಲಿ ಭಾಜಪದ ಸರಕಾರವಿರುವಾಗ ಹೀಗೆ ಆಗಬಾರದು ಮತ್ತು ಆದರೆ, ಆಡಳಿತವು ತಕ್ಷಣವೇ ಅದನ್ನು ಕೆಡವಬೇಕು, ಅದಕ್ಕಾಗಿ ಶಾಸಕರು ಏಕೆ ಕೃತಿ ಮಾಡಬೇಕಾಗುತ್ತದೆ ?

ನವದೆಹಲಿ – ದೆಹಲಿಯ ಪೀತಮಪುರಾ ಪರಿಸರದಲ್ಲಿ ರಾಮಲೀಲಾ ಮೈದಾನದ ಹತ್ತಿರವಿರುವ ಅನಧಿಕೃತ ನೂರೆ ಇಲಾಹಿ ಮಸೀದಿಯ ಹೊರಗೆ ಹಿಂದೂ ಸಂಘಟನೆಗಳು ಆಂದೋಲನ ಮಾಡುತ್ತಾ ಇಲ್ಲಿ ಕಟ್ಟುತ್ತಿದ್ದ ಅನಧಿಕೃತ ಮದರಸಾದ ಗೋಡೆಗಳನ್ನು ಕೆಡವಿದೆ. ಭಾಜಪದ ಶಾಸಕ ಕರನೈಲ ಸಿಂಗ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಭೂಮಿಯ ಮೇಲೆ ಈ ಮಸೀದಿಯನ್ನು ಕಟ್ಟಿದ್ದು ಅದನ್ನು ಕೆಡವಲು ನ್ಯಾಯಾಲಯವು ಆದೇಶ ನೀಡಿದೆ ಎಂದು ಶಾಸಕ ಸಿಂಗ್ ಈ ಸಮಯದಲ್ಲಿ ದಾವೆ ಮಾಡಿದರು. ಇದೇ ಭೂಮಿಯ ಮೇಲೆ ಮಸೀದಿಯ ಹತ್ತಿರ ಮದರಸಾವನ್ನು ಕಟ್ಟುತ್ತಿದ್ದರು. ಇದಕ್ಕೆ ಸಿಂಗ್ ಇದಕ್ಕೂ ಮುನ್ನವೇ ವಿರೋಧ ಮಾಡಿದ್ದರು. ಈಗ ಅದರ ಕಾಮಗಾರಿ ಮಾಡುತ್ತಿರುವುದರಿಂದ ಅವರು ತಮ್ಮ ಬೆಂಬಲಿಗರೊಂದಿಗೆ ಅಲ್ಲಿಗೆ ಹೋಗಿ ಅದನ್ನು ಕೆಡವಿದರು. ಸಿಂಗ್ ಸ್ವತಃ ಕೈಯಲ್ಲಿ ಸುತ್ತಿಗೆ ಹಿಡಿದಿದ್ದರು.
‘ಸರಕಾರಿ ಭೂಮಿಯ ಮೇಲೆ ಯಾವುದೇ ಒತ್ತುವರಿಯನ್ನು ಸಹಿಸುವುದಿಲ್ಲ. ಈ ಕಾಮಗಾರಿಯು ಅಕ್ರಮವಾಗಿದೆ ಮತ್ತು ಪ್ರಾಧಿಕಾರದ ಭೂಮಿಯ ಮೇಲೆ ಯಾವುದೇ ರೀತಿಯ ಅಕ್ರಮ ಕೃತ್ಯಗಳನ್ನು ಮುಂದುವರಿಯಲು ಬಿಡುವುದಿಲ್ಲ’, ಎಂದು ಅವರು ಈ ಸಮಯದಲ್ಲಿ ಹೇಳಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ