ಹಿಂದೂ ದೇವಸ್ಥಾನಗಳ ಅಸ್ತಿತ್ವಕ್ಕೆ ಧಕ್ಕೆ ತರುವ ‘ಇನಾಂ ನಿರ್ಮೂಲನೆ ಕಾಯ್ದೆ’ಯನ್ನು ಕೂಡಲೇ ಹಿಂಪಡೆಯಿರಿ, ಇಲ್ಲದಿದ್ದರೆ ಜನಾಂದೋಲನ ಮಾಡಲಾಗುವುದು!

ರಾಯಗಢ ಜಿಲ್ಲೆಯ ಮಂದಿರ ಟ್ರಸ್ಟಿಗಳ ಎಚ್ಚರಿಕೆ

ತಹಶೀಲ್ದಾರ್ ಶ್ರೀ ಉತ್ತಮ ಕುಂಭಾರ್ ಅವರಿಗೆ ಮನವಿ ಸಲ್ಲಿಸುತ್ತಿರುವ ರಾಯಗಢ ಮಂದಿರ ಟ್ರಸ್ಟಿಗಳು, ಉಪಸ್ಥಿತ ಭಕ್ತರು ಹಾಗೂ ಧರ್ಮಪ್ರೇಮಿಗಳು.

ರಾಯಗಢ, ಮೇ 21 (ವಾರ್ತೆ ) – ಮಹಾರಾಷ್ಟ್ರ ಸರಕಾರದ ಕಂದಾಯ ಮತ್ತು ಅರಣ್ಯ ಇಲಾಖೆಯು ಪ್ರಸ್ತಾಪಿಸಿರುವ ‘ಮಹಾರಾಷ್ಟ್ರ ದೇವಸ್ಥಾನ ಇನಾಂ ನಿರ್ಮೂಲನೆ ಕರಡು ಕಾಯ್ದೆ, 2026’ ರಾಜ್ಯದ ಸಾವಿರಾರು ಹಿಂದೂ ದೇವಸ್ಥಾನಗಳ ಸ್ವಾಯತ್ತ ಅಸ್ತಿತ್ವ ಮತ್ತು ಅವುಗಳ ಆದಾಯದ ಮೂಲಗಳನ್ನು ಬುಡಸಮೇತ ಕಿತ್ತೊಗೆಯುವಂತಿದೆ. ಈ ಕಾಯ್ದೆಯ ಕರಡಿನಲ್ಲಿ ಅತ್ಯಂತ ಗಂಭೀರ ಕಾನೂನು ದೋಷಗಳಿದ್ದು, ಹಿಂದೂ ಧರ್ಮದ ಧಾರ್ಮಿಕ ಮತ್ತು ಆಸ್ತಿ ಹಕ್ಕುಗಳ ಮೇಲೆ ನೇರ ಪ್ರಹಾರ ಮಾಡುತ್ತದೆ.

ಮನವಿ ಸಲ್ಲಿಸಲು ಆಗಮಿಸಿದ ರಾಯಗಢ ಮಂದಿರ ಟ್ರಸ್ಟಿಗಳು, ಉಪಸ್ಥಿತರಿದ್ದ ಭಕ್ತರು ಮತ್ತು ಧರ್ಮಪ್ರೇಮಿಗಳು.

ಈ ಪ್ರಜಾಪ್ರಭುತ್ವ ವಿರೋಧಿ ಕರಡನ್ನು ರಾಯಗಢ ಜಿಲ್ಲೆಯ ಹಲವು ಮಂದಿರಗಳ ಟ್ರಸ್ಟಿಗಳು ತೀವ್ರವಾಗಿ ಖಂಡಿಸಿದ್ದು, ಸರಕಾರವು ಪ್ರಸ್ತಾಪಿತ ಕಾಯ್ದೆಯನ್ನು ಬೇಷರತ್ತಾಗಿ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತಾದ ಮನವಿ ಪತ್ರಗಳನ್ನು ಮೇ 20 ಮತ್ತು 21 ರಂದು ರಾಯಗಢ ಮಂದಿರಗಳ ಟ್ರಸ್ಟಿಗಳು ಸುಧಾಗಢ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಶ್ರೀ ಉತ್ತಮ ಕುಂಭಾರ್ ಅವರಿಗೆ ಸಲ್ಲಿಸಿದರು.

ಸಂಪಾದಕೀಯ ನಿಲುವು

ಯಾಕೆ ಇಂತಹ ಎಚ್ಚರಿಕೆ ನೀಡಬೇಕಾಗುತ್ತದೆ? ಆಡಳಿತ ಮಂಡಳಿ ಸ್ವತಃ ತಾನಾಗಿಯೇ ಕ್ರಮ ಕೈಗೊಳ್ಳುವುದಿಲ್ಲವೇಕೆ?