ಹೇ ಕರುಣಾಕರ, ಹೇ ಈಶ್ವರ | ನಮ್ಮಯ ಮೇಲೆ ಕೃಪೆಯನ್ನು ತೋರು ||

ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಜಯಂತ ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು !

ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಜಯಂತ ಆಠವಲೆಯವರ ಮನಮೋಹಕ ಭಾವಮುದ್ರೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ವಿವಿಧ ರೂಪಗಳು ಸಾಧಕರ ಹೃದಯಮಂದಿರದಲ್ಲಿ ನೆಲೆಸಿವೆ. ಕಳೆದ ವರ್ಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ೮೩ ನೇ ಜನ್ಮೋತ್ಸವದ ನಿಮಿತ್ತ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಅನೇಕ ಜಿಜ್ಞಾಸುಗಳು, ಸಾಧಕರು ಮತ್ತು ಹಿತಚಿಂತಕರಿಗೆ ಗುರುದೇವರ ದರ್ಶನ ಭಾಗ್ಯ ಸಿಕ್ಕಿತು. ಗುರುದೇವರನ್ನು ನೋಡಿ  ಎಲ್ಲರೂ ಭಾವಪರವಶರಾದರು, ಅದೇ ರೀತಿ ಎದುರಿಗಿದ್ದ ಎಲ್ಲರನ್ನು ನೋಡಿ ಗುರುದೇವರ ಮುಖದಲ್ಲೂ ಆನಂದ ಮತ್ತು ಕೃತಜ್ಞತಾಭಾವ ಎದ್ದು ಕಾಣುತ್ತಿತ್ತು. ಈ ಮಹೋತ್ಸವದಲ್ಲಿನ ಗುರುದೇವರ ಮನಮೋಹಕ ಭಾವಮುದ್ರೆ !

ತಲೆಗೆ ಪೇಟ ಧರಿಸಿದ ಅವರ ರೂಪವು ರಾಜರಂತೆ ವೈಭವಯುತವಾಗಿ  ಕಾಣುತ್ತಿದ್ದರೂ, ಎದುರಿಗಿದ್ದ ಸಾಧಕರ ರೂಪದಲ್ಲಿ ತಮ್ಮ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಸಮಷ್ಟಿ ರೂಪವನ್ನು ಕಂಡು ಅವರು ಮಾಡಿದ ನಮಸ್ಕಾರದ ಮುದ್ರೆ ಮತ್ತು ಅವರ ದೃಷ್ಟಿಯಿಂದ ಅವರ ಭಕ್ತಿಭಾವವು ವ್ಯಕ್ತವಾಗುತ್ತಿದೆ.