
ಭುಸಾವಳ (ಜಲಗಾಂವ ಜಿಲ್ಲೆ) – ನಂಬಿಕೆಯಿಂದ ಕೆಫೆಗೆ ಕರೆದೊಯ್ದು ತಿಳಿಯದಂತೆ ತೆಗೆದ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಮತ್ತು ಕುಟುಂಬದವರನ್ನು ಜೀವಂತವಾಗಿ ಕೊಲ್ಲುವುದಾಗಿ ಬೆದರಿಕೆ ಹಾಕಿ, ಹಿಂದೂ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿ ನಿಕಾಹ್ (ಇಸ್ಲಾಮಿಕ್ ಪದ್ಧತಿಯಂತೆ ವಿವಾಹ) ಮಾಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಬಿಲ್ ಕಾಸಮ್ ಶೇಖ್ ನನ್ನು ಪೊಲೀಸರು ಮೇ ೧೭ ರಂದು ಮುಂಜಾನೆ ಬಂಧಿಸಿದ್ದಾರೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
೧. ಸಂತ್ರಸ್ತೆ ಯುವತಿಯು ಭುಸಾವಳದಲ್ಲಿ ತನ್ನ ಅಜ್ಜ-ಅಜ್ಜಿಯ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಅವಳು ೧೦ ನೆಯ ತರಗತಿಯಲ್ಲಿದ್ದಾಗ ನಬಿಲ್ ಅವಳೊಂದಿಗೆ ಸ್ನೇಹ ಬೆಳೆಸಿದ್ದನು.
೨. ಒಮ್ಮೆ ನಬಿಲ್ ಅವಳನ್ನು ಒಂದು ಅಪರಿಚಿತ ಕೋಣೆಗೆ ಕರೆದೊಯ್ದಿದ್ದನು. ಅಲ್ಲಿ ಮೌಲಾನಾ (ಇಸ್ಲಾಂ ಧರ್ಮದ ವಿದ್ವಾಂಸ) ಉಪಸ್ಥಿತನಿದ್ದನು. ಯುವತಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಅವಳಿಗೆ ಮತ್ತು ಅವಳ ಕುಟುಂಬದವರಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಯಿತು.
೩. ಮೌಲಾನಾ ಅವಳಿಂದ ಬಲವಂತವಾಗಿ ‘ಕಲ್ಮಾ’ (ಅಲ್ಲಾನ ಮಹಿಮೆಯನ್ನು ವರ್ಣಿಸುವ ಸೂಕ್ತಿಗಳು) ಪಠಣ ಮಾಡಿಸಿ, ಅವಳ ನಿಕಾಹ್ ನೆರವೇರಿಸಿದನು. ನಿಕಾಹ್ ಆದ ನಂತರ ನಬಿಲ್ ಅವಳನ್ನು ೮ ದಿನಗಳ ಕಾಲ ಒಂದು ಕೋಣೆಯಲ್ಲಿ ಬಂದಿಸಿಟ್ಟಿದ್ದನು. ಈ ಅವಧಿಯಲ್ಲಿ ಅವಳಿಗೆ ಬುರ್ಖಾ ಧರಿಸಲು ಮತ್ತು ನಮಾಜ್ ಗಾಗಿ ತೀವ್ರ ಒತ್ತಡ ಹೇರಲಾಗಿತ್ತು. ನಿರಾಕರಿಸಿದಾಗ ಅವಳಿಗೆ ಅಮಾನುಷವಾಗಿ ಥಳಿಸಲಾಯಿತು. ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಬಂದ ಯುವತಿಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ