ದೇವರು ಕೂಡ ಮದ್ಯಪಾನ ಮಾಡುತ್ತಿದ್ದರು ! – ಮುಖ್ಯಮಂತ್ರಿ ಸಿದ್ದರಾಮಯ್ಯ

  • ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮದ್ರೋಹಿ ಹೇಳಿಕೆ

  • ಮಂತ್ರಿಗಳ ಮದ್ಯಪಾನಕ್ಕೂ ವಿರೋಧವಿಲ್ಲ ಎಂಬ ನಾಚಿಕೆಗೇಡಿನ ಹೇಳಿಕೆ

ಬೆಂಗಳೂರು – ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮದ್ಯಪಾನ ಮಾಡುತ್ತಾರೆ. ನನ್ನ ಮಂತ್ರಿಮಂಡಳದ ಮಂತ್ರಿಗಳು ಕೂಡ ಮದ್ಯಪಾನ ಮಾಡುತ್ತಾರೆ. ವೈಯಕ್ತಿಕವಾಗಿ ನನ್ನ ಮದ್ಯಪಾನಕ್ಕೆ ವಿರೋಧವಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು. ಮುಖ್ಯಮಂತ್ರಿಗಳು, ”ಮದ್ಯಪಾನವು ಕೇವಲ ಒಂದು ಹವ್ಯಾಸವಾಗಿರಬೇಕು; ಆದರೆ ಅದು ಮನುಷ್ಯನ ನಿಯಂತ್ರಣವನ್ನು ಕಸಿದುಕೊಳ್ಳುವ ವ್ಯಸನವಾಗಬಾರದು. (ಹವ್ಯಾಸವಾಗಿ ಪ್ರಾರಂಭಿಸಿದ ಮದ್ಯಪಾನವು ವ್ಯಸನವಾಗಿ ಯಾವಾಗ ಬದಲಾಗುತ್ತದೆ ಎಂದು ತಿಳಿಯುವುದಿಲ್ಲ. ಹಾಗಾಗಿ ಆಡಳಿತಗಾರರು ಇಂತಹ ಆತ್ಮಘಾತಕ ಸಲಹೆಗಳನ್ನು ನೀಡುವುದು ಸರಿಯಲ್ಲ ! – ಸಂಪಾದಕರು)

ಪುರಾಣಗಳಲ್ಲೂ ದೇವರುಗಳು ಮದ್ಯಪಾನ ಮಾಡುತ್ತಿದ್ದರು ಎಂಬ ಉಲ್ಲೇಖಗಳಿವೆ ಎಂದು ಹೇಳಿದರು. ಈ ವೇಳೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಒಮ್ಮೆ ಸಂಸತ್ತಿನಲ್ಲಿ ನಡೆದ ಚರ್ಚೆಯನ್ನು ಅವರು ನೆನಪಿಸಿಕೊಂಡರು. ಹಳ್ಳಿಗಳಿಂದ ನಗರಗಳಿಗೆ ಹಾಲಿನ ಪೂರೈಕೆಯಾಗುತ್ತದೆ; ಆದರೆ ನಗರಗಳಿಂದ ಹಳ್ಳಿಗಳಿಗೆ ವಿಸ್ಕಿ, ಬ್ರಾಂಡಿಯಂತಹ ಮದ್ಯವನ್ನು ಕಳುಹಿಸಲಾಗುತ್ತದೆ’, ಎಂಬ ಅಂದಿನ ಚರ್ಚೆಯನ್ನು ಉಲ್ಲೇಖಿಸುತ್ತಾ, ಗ್ರಾಮೀಣ ಭಾಗಗಳಲ್ಲಿ ಮದ್ಯದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. (ಒಂದೆಡೆ ಮದ್ಯದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸುವುದು ಮತ್ತು ಇನ್ನೊಂದೆಡೆ ಮದ್ಯಪಾನವನ್ನು ವಿರೋಧಿಸುವುದು, ಇದು ಸಿದ್ದರಾಮಯ್ಯನವರ ಇಬ್ಬಗೆಯ ನೀತಿಯಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

  • ರಾಜ್ಯದ ಕೋಟ್ಯಂತರ ಹಿಂದೂಗಳ ಮತಗಳಿಂದ ಆಯ್ಕೆಯಾಗಿ ಬರುವ ಸಿದ್ದರಾಮಯ್ಯನವರು ಇಂತಹ ಹೇಳಿಕೆ ನೀಡುವ ಧೈರ್ಯ ಮಾಡುವುದು, ರಾಜ್ಯದ ಸಮಸ್ತ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ಹಿಂದೂಗಳಿಗೆ ಸಿದ್ದರಾಮಯ್ಯನವರ ಈ ಹೇಳಿಕೆ ಒಪ್ಪಿಗೆಯಾಗಿದೆಯೇ ? ಹಿಂದೂಗಳು ಇಂತಹ ಪ್ರವೃತ್ತಿಗಳ ವಿರುದ್ಧ ಸಂಘಟಿತರಾಗಿ ಅವರು ಹಿಂದೂಗಳ ಕ್ಷಮೆಯಾಚಿಸುವಂತೆ ಮಾಡಬೇಕು !
  • ಸಿದ್ದರಾಮಯ್ಯನವರು ಇಂತಹ ಹೇಳಿಕೆಯನ್ನು ಎಂದಿಗೂ ಇತರ ಪಂಥದವರ ಶ್ರದ್ಧಾಕೇಂದ್ರಗಳ ಬಗ್ಗೆ ನೀಡುವ ಧೈರ್ಯ ತೋರುವುದಿಲ್ಲ ಎಂಬುದನ್ನು ಗಮನಿಸಿ !
  • ಸಿದ್ದರಾಮಯ್ಯನವರು ಪ್ರಜ್ಞೆಯಲ್ಲಿ ಇದ್ದಿದ್ದರೆ, ಅವರು ಇಂತಹ ಹೇಳಿಕೆ ನೀಡುತ್ತಿರಲಿಲ್ಲ ಎಂದು ಯಾರಿಗಾದರೂ ಅನ್ನಿಸಿದರೆ ಅದರಲ್ಲಿ ತಪ್ಪೇನಿದೆ ?
  • ಸಮಾಜದ ಮುಂದೆ ಆಡಳಿತಗಾರರು ಆದರ್ಶವನ್ನು ಸ್ಥಾಪಿಸಬೇಕಾಗುತ್ತದೆ. ಆಡಳಿತಗಾರರೇ ಮದ್ಯಪಾನದಂತಹ ಸಮಾಜಘಾತುಕ ವಿಷಯಗಳನ್ನು ಬೆಂಬಲಿಸಲು ಪ್ರಾರಂಭಿಸಿದರೆ, ಸಮಾಜವು ಆದರ್ಶವಾಗಿ ಯಾರನ್ನು ನೋಡಬೇಕು ? ಯಥಾ ರಾಜಾ ತಥಾ ಪ್ರಜಾ ಎಂಬ ನ್ಯಾಯದಂತೆ ಮುಂದೆ ಸಮಾಜವು ವ್ಯಸನಕ್ಕೆ ತುತ್ತಾಗಬಹುದು ಎಂಬುದನ್ನು ಆಡಳಿತಗಾರರು ಮರೆಯಬಾರದು !