ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮದ್ರೋಹಿ ಹೇಳಿಕೆ
ಮಂತ್ರಿಗಳ ಮದ್ಯಪಾನಕ್ಕೂ ವಿರೋಧವಿಲ್ಲ ಎಂಬ ನಾಚಿಕೆಗೇಡಿನ ಹೇಳಿಕೆ

ಬೆಂಗಳೂರು – ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮದ್ಯಪಾನ ಮಾಡುತ್ತಾರೆ. ನನ್ನ ಮಂತ್ರಿಮಂಡಳದ ಮಂತ್ರಿಗಳು ಕೂಡ ಮದ್ಯಪಾನ ಮಾಡುತ್ತಾರೆ. ವೈಯಕ್ತಿಕವಾಗಿ ನನ್ನ ಮದ್ಯಪಾನಕ್ಕೆ ವಿರೋಧವಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು. ಮುಖ್ಯಮಂತ್ರಿಗಳು, ”ಮದ್ಯಪಾನವು ಕೇವಲ ಒಂದು ಹವ್ಯಾಸವಾಗಿರಬೇಕು; ಆದರೆ ಅದು ಮನುಷ್ಯನ ನಿಯಂತ್ರಣವನ್ನು ಕಸಿದುಕೊಳ್ಳುವ ವ್ಯಸನವಾಗಬಾರದು. (ಹವ್ಯಾಸವಾಗಿ ಪ್ರಾರಂಭಿಸಿದ ಮದ್ಯಪಾನವು ವ್ಯಸನವಾಗಿ ಯಾವಾಗ ಬದಲಾಗುತ್ತದೆ ಎಂದು ತಿಳಿಯುವುದಿಲ್ಲ. ಹಾಗಾಗಿ ಆಡಳಿತಗಾರರು ಇಂತಹ ಆತ್ಮಘಾತಕ ಸಲಹೆಗಳನ್ನು ನೀಡುವುದು ಸರಿಯಲ್ಲ ! – ಸಂಪಾದಕರು)
🕉️ “Even Gods used to drink alcohol!” – Shocking anti-Hindu statement by Karnataka CM Siddaramaiah while defending ministers consuming alcohol.
A person elected with the votes of crores of Hindus openly insults Hindu beliefs, yet never dares to make such remarks against other… https://t.co/c5SCCkYmVP pic.twitter.com/YFA6zBpY0G
— Sanatan Prabhat (@SanatanPrabhat) May 11, 2026
ಪುರಾಣಗಳಲ್ಲೂ ದೇವರುಗಳು ಮದ್ಯಪಾನ ಮಾಡುತ್ತಿದ್ದರು ಎಂಬ ಉಲ್ಲೇಖಗಳಿವೆ ಎಂದು ಹೇಳಿದರು. ಈ ವೇಳೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಒಮ್ಮೆ ಸಂಸತ್ತಿನಲ್ಲಿ ನಡೆದ ಚರ್ಚೆಯನ್ನು ಅವರು ನೆನಪಿಸಿಕೊಂಡರು. ಹಳ್ಳಿಗಳಿಂದ ನಗರಗಳಿಗೆ ಹಾಲಿನ ಪೂರೈಕೆಯಾಗುತ್ತದೆ; ಆದರೆ ನಗರಗಳಿಂದ ಹಳ್ಳಿಗಳಿಗೆ ವಿಸ್ಕಿ, ಬ್ರಾಂಡಿಯಂತಹ ಮದ್ಯವನ್ನು ಕಳುಹಿಸಲಾಗುತ್ತದೆ’, ಎಂಬ ಅಂದಿನ ಚರ್ಚೆಯನ್ನು ಉಲ್ಲೇಖಿಸುತ್ತಾ, ಗ್ರಾಮೀಣ ಭಾಗಗಳಲ್ಲಿ ಮದ್ಯದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. (ಒಂದೆಡೆ ಮದ್ಯದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸುವುದು ಮತ್ತು ಇನ್ನೊಂದೆಡೆ ಮದ್ಯಪಾನವನ್ನು ವಿರೋಧಿಸುವುದು, ಇದು ಸಿದ್ದರಾಮಯ್ಯನವರ ಇಬ್ಬಗೆಯ ನೀತಿಯಾಗಿದೆ ! – ಸಂಪಾದಕರು)
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ