ಆಂಧ್ರಪ್ರದೇಶದ ಕಡಪ್ಪಾ ನಗರದ ವೃತ್ತಕ್ಕೆ ‘ಟಿಪ್ಪು ಸುಲ್ತಾನ್’ ಹೆಸರಿಡಲು ಹಿಂದೂಗಳ ವಿರೋಧ

ಕಡಪ್ಪಾ (ಆಂಧ್ರಪ್ರದೇಶ) – ನಗರದ ‘ಅಲ್ಮಾಸ್‌ಪೇಟ್ ಸರ್ಕಲ್’ಗೆ ‘ಟಿಪ್ಪು ಸುಲ್ತಾನ್’ ಹೆಸರಿಡುವ ಚಟುವಟಿಕೆಗಳು ಆರಂಭವಾಗಿದ್ದು, ಇಲ್ಲಿನ ಪರಿಸ್ಥಿತಿ ಸ್ಫೋಟಕವಾಗಿದೆ. ಮೇ 9 ರಂದು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು ಅಲ್ಮಾಸ್‌ಪೇಟ್ ಸರ್ಕಲ್‌ನಲ್ಲಿ ಜಮಾಯಿಸಿದ್ದರು. ಇನ್ನೊಂದೆಡೆ, ಹಿಂದೂ ಸಂಘಟನೆಗಳು ಈ ವೃತ್ತಕ್ಕೆ ‘ಹನುಮಾನ್ ಚೌಕ’ ಎಂದು ಹೆಸರಿಡಬೇಕೆಂದು ಆಗ್ರಹಿಸಿದ್ದರಿಂದ ಉದ್ವಿಗ್ನತೆ ಹೆಚ್ಚಾಯಿತು.

1. ಮಹಾನಗರ ಪಾಲಿಕೆಯು ಈ ಹಿಂದೆ ವೃತ್ತಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಪ್ರಸ್ತಾವನೆಯನ್ನು ಅಂಗೀಕರಿಸಿತ್ತು. ಆದರೆ ಈ ಪ್ರಸ್ತಾವನೆಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಸಂಘಟನೆಗಳು ಮತ್ತು ಕಾಂಗ್ರೆಸ್ ನಾಯಕರು ಪ್ರತಿಭಟನೆ ಆರಂಭಿಸಿದರು. ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ ಮುಸ್ಲಿಮರು, ಆಡಳಿತ ಮಂಡಳಿಯು ನೀಡಿದ ಭರವಸೆಯನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

2. ಮತ್ತೊಂದೆಡೆ, ಭಾಜಪ ಮತ್ತು ಅನೇಕ ಹಿಂದೂ ಸಂಘಟನೆಗಳು ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿವೆ. ಟಿಪ್ಪು ಸುಲ್ತಾನ್ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿ ರಸ್ತೆಗಿಳಿದಿರುವ ಹಿಂದೂ ಸಂಘಟನೆಗಳು, ಈ ವೃತ್ತಕ್ಕೆ ‘ಹನುಮಾನ್ ಚೌಕ’ ಎಂದು ಹೆಸರಿಡಬೇಕೆಂದು ಒತ್ತಾಯಿಸಿವೆ. ಈ ಸಂದರ್ಭದಲ್ಲಿ ಎರಡೂ ಗುಂಪುಗಳು ಮುಖಾಮುಖಿಯಾಗಿದ್ದು, ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯಲು ಆಡಳಿತ ಮಂಡಳಿಯು ಅಲ್ಮಾಸ್‌ಪೇಟ್ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಿದೆ.

ಸಂಪಾದಕೀಯ ನಿಲುವು

ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಮತ್ತು ಭಾಜಪ ಮೈತ್ರಿ ಸರಕಾರವಿರುವಾಗ, ಕ್ರೂರಿ ಟಿಪ್ಪು ಸುಲ್ತಾನನ ಹೆಸರನ್ನು ಇಡಬಾರದು; ಇದಕ್ಕಾಗಿ ಹಿಂದೂಗಳು ಹೋರಾಟ ಮಾಡುವ ಪರಿಸ್ಥಿತಿ ಬರಬಾರದು ಎಂದೇ ಹಿಂದೂಗಳು ಬಯಸುತ್ತಾರೆ!