ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶಿಯರ ಗಡೀಪಾರು ಮತ್ತು ನಿರಾಶ್ರಿತರ ಬಿಕ್ಕಟ್ಟಿನ ಭೀತಿ

ಬಾಂಗ್ಲಾದೇಶ: ಸಂಸದ ಅಖ್ತರ್ ಹುಸೇನ್ ಅವರ ಆತಂಕ

ಢಾಕಾ (ಬಾಂಗ್ಲಾದೇಶ) – ಪಶ್ಚಿಮ ಬಂಗಾಳದಲ್ಲಿ ಭಾಜಪ ಸರಕಾರ ಅಸ್ತಿತ್ವಕ್ಕೆ ಬಂದರೆ, ಅಲ್ಲಿರುವ ಎಲ್ಲಾ ಬಾಂಗ್ಲಾದೇಶಿಯರನ್ನು ಅವರು ವಾಪಸ್ ಕಳುಹಿಸುತ್ತಾರೆ. ಇದು ನಮಗೆ ದೊಡ್ಡ ನಿರಾಶ್ರಿತರ ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಈ ಬಗ್ಗೆ ನಾವು ಆತಂಕದಲ್ಲಿದ್ದೇವೆ ಎಂದು ಬಾಂಗ್ಲಾದೇಶದ ಎನ್‌ಸಿಪಿ ಪಕ್ಷದ ಸಂಸದ ಅಖ್ತರ್ ಹುಸೇನ್ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳ ಅಂದಾಜಿನ ಪ್ರಕಾರ ಭಾಜಪ ಜಯಗಳಿಸಬಹುದು, ಇದರಿಂದಾಗಿ ಲಕ್ಷಾಂತರ ಅಕ್ರಮ ವಲಸಿಗರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವ ಸಾಧ್ಯತೆಯಿದೆ. ಇಂತಹ ಕ್ರಮವು ಬಾಂಗ್ಲಾದೇಶದಲ್ಲಿ ವಲಸಿಗರ ಮಹಾಪೂರವನ್ನೇ ಹರಿಸಬಹುದು. ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತರಿಯಿಲ್ಲ. ಆದ್ದರಿಂದ ನಾವು ಒಗ್ಗಟ್ಟಾಗಿ ಇರಬೇಕೆಂದು ಸಂಸದ ಹುಸೇನ್ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ವಿರುದ್ಧ ಭಾಜಪ ಸಂಸದ ನಿಶಿಕಾಂತ್ ದುಬೆ ಟೀಕೆ

ಭಾಜಪ ಸಂಸದ ನಿಶಿಕಾಂತ್ ದುಬೆ ಅವರು ‘X’ ನಲ್ಲಿ ಪೋಸ್ಟ್ ಮಾಡಿದ್ದು, “ಬಂಗಾಳದಲ್ಲಿ ಭಾಜಪಯ ಗೆಲುವು ಅಕ್ರಮ ವಲಸೆಯನ್ನು ತಡೆಯುತ್ತದೆ ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ಹೊರಹಾಕುತ್ತದೆ ಎಂದು ಬಾಂಗ್ಲಾದೇಶದ ಸಂಸದ ಅಖ್ತರ್ ಹುಸೇನ್ ಇಂದು ಬಾಂಗ್ಲಾದೇಶದ ಸಂಸತ್ತಿನಲ್ಲಿ ಹೇಳಿರುವುದು ಅಪಾಯಕಾರಿ ಸಂಗತಿಯಾಗಿದೆ. ತೃಣಮೂಲ ಕಾಂಗ್ರೆಸ್‌ನ ಸಹಾಯಕರು ಈಗ ನಿಧಾನವಾಗಿ ಮುನ್ನೆಲೆಗೆ ಬರುತ್ತಿದ್ದಾರೆ” ಎಂದು ದುಬೆ ಹೇಳಿದ್ದಾರೆ.

ಬಾಂಗ್ಲಾದೇಶಿ ನಾಗರಿಕರಿಗೂ ಭಾಜಪ ಸರಕಾರ ಬರುವ ಅರಿವಾಗಿದೆ!

ಭಾಜಪ ನಾಯಕ ಸೈಯದ್ ಶಹನವಾಜ್ ಹುಸೇನ್ ಈ ಬಗ್ಗೆ ಮಾತನಾಡಿ, “ಈಗ ಬಾಂಗ್ಲಾದೇಶಿಯರಿಗೂ ಬಂಗಾಳದಲ್ಲಿ ಭಾಜಪ ಸರಕಾರ ಬರಲಿದೆ ಮತ್ತು ಅಕ್ರಮ ವಲಸೆ ತಡೆಯಲಿದೆ ಎಂಬ ಭಾವನೆ ಮೂಡಿದೆ. ಭಾಜಪಯ ಆಡಳಿತಾವಧಿಯಲ್ಲಿ ಬಾಂಗ್ಲಾದೇಶಿ ನುಸುಳುಕೋರರನ್ನು ಅವರು ಎಲ್ಲಿಂದ ಬಂದಿದ್ದಾರೋ ಅಲ್ಲಿಗೆ ವಾಪಸ್ ಕಳುಹಿಸಲಾಗುತ್ತದೆ ಎಂಬ ಅರಿವು ಅವರಿಗಾಗಿದೆ. ದೀದಿ (ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ) ಅಕ್ರಮ ವಲಸಿಗರನ್ನು ಅತಿಥಿಗಳಂತೆ ನೋಡಿಕೊಳ್ಳುತ್ತಾರೆ; ಆದರೆ ಭಾಜಪ ಸರಕಾರ ಬಂದರೆ ಬಾಂಗ್ಲಾದೇಶಿ ನುಸುಳುಕೋರರಿಗೆ ಉಳಿಗಾಲವಿಲ್ಲ. ನಮಗೆ ನಮ್ಮ ದೇಶದ ಮೇಲೆ ಹೇಗೆ ಪ್ರೀತಿಯಿದೆಯೋ, ಹಾಗೆಯೇ ಅವರಿಗೂ ಬಾಂಗ್ಲಾದೇಶದ ಮೇಲೆ ಪ್ರೀತಿ ಇರಬೇಕು ಮತ್ತು ಅವರು ತಮ್ಮ ದೇಶಕ್ಕೆ ಮರಳಬೇಕು,” ಎಂದು ಹುಸೇನ್ ಹೇಳಿದರು.