ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಪುಸ್ತಕಕ್ಕೆ ವಿದೇಶದಿಂದ ಆರ್ಥಿಕ ನೆರವು ಲಭಿಸಿದೆಯೇ? ಎಂಬ ಬಗ್ಗೆ ತನಿಖೆಗೆ ಆಗ್ರಹ

ಬುಲ್ಡಾಣಾ – ಕಾಮ್ರೇಡ್ ಗೋವಿಂದ ಪನ್ಸಾರೆ ಅವರು ಬರೆದ ‘ಶಿವಾಜಿ ಕೋಣ ಹೋತಾ?’ ಪುಸ್ತಕದಲ್ಲಿನ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ, ಇಲ್ಲಿನ ಶಿವಸೇನಾ ಶಾಸಕ ಶ್ರೀ. ಸಂಜಯ್ ಗಾಯಕ್ವಾಡ್ ಅವರು ಏಪ್ರಿಲ್ 27 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. “ಛತ್ರಪತಿ ಶಿವಾಜಿ ಮಹಾರಾಜರ ತಪ್ಪು ಇತಿಹಾಸವನ್ನು ಬರೆದ ಕಾಮ್ರೇಡ್ ಪನ್ಸಾರೆ ವಿರುದ್ಧ ಮರಣೋತ್ತರ ಮೊಕದ್ದಮೆ ದಾಖಲಿಸಬೇಕು. ಹಾಗೆಯೇ ಮಹಾರಾಜರ ಹೆಸರನ್ನು ಏಕವಚನದಲ್ಲಿ ಬಳಸಿದ ಕಾರಣಕ್ಕೆ ಮತ್ತು ಲೇಖಕರ ಮರಣದ ನಂತರ ಪುಸ್ತಕವನ್ನು ಮುದ್ರಿಸಿದ ಪ್ರಕಾಶಕ ಪ್ರಶಾಂತ್ ಅಂಬಿ ಅವರನ್ನು ಬಂಧಿಸಬೇಕು,” ಎಂದು ಅವರು ಈ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿಯಲ್ಲಿನ ಕೆಲ ಅಂಶಗಳು,
1. ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರ ಸೇರಿದಂತೆ ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ. ಅವರ ಹೆಸರನ್ನು ಬಳಸಿಕೊಂಡು ಕೆಲವು ಲೇಖಕರು ಮತ್ತು ಪ್ರಕಾಶಕರು ಆರ್ಥಿಕ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
2. ಈ ಪುಸ್ತಕದ ಮೂಲಕ ಮಹಾರಾಜರ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.
3. ಈ ಪುಸ್ತಕಕ್ಕೆ ವಿದೇಶದಿಂದ ಆರ್ಥಿಕ ನೆರವು ದೊರೆತಿದೆಯೇ? ಎಂಬ ಬಗ್ಗೆ ತನಿಖೆಯಾಗಬೇಕು, ಹಾಗೆಯೇ ಪುಸ್ತಕವನ್ನು ಮುದ್ರಿಸುವ ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಈ ಮನವಿಗೆ ಶಿವಸೇನೆಯ ವಿಜಯ್ ಅಂಭೋರೆ, ಸಂದೀಪ್ ಗಾಯಕ್ವಾಡ್, ಧನಂಜಯ್ ಬಾರೋಟೆ, ಸಂಜಯ್ ಹಾಡೆ, ವಿಜಯಸಿಂಗ್ ರಾಜಪೂರ್, ಜಿಜಾ ರಾಠೋಡ್, ಅನುಜಾ ಸಾವಳೆ, ಆಶಿಶ್ ಜಾಧವ್, ಶ್ರೀಕಾಂತ್ ಗಾಯಕ್ವಾಡ್ ಸೇರಿದಂತೆ ಹಲವು ಪದಾಧಿಕಾರಿಗಳು ಸಹಿ ಹಾಕಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ