ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಶ್ರೀ. ನಾಗೇಶ ಬಿರಾದಾರ : ‘ನಮಸ್ಕಾರ ! ನಾನು ಕಟ್ಟಡನಿರ್ಮಾಣ ಕಾರ್ಯದ ಸ್ಥಳದಲ್ಲಿ ಸ್ವಚ್ಛತೆಯ ಸೇವೆ ಮಾಡುತ್ತೇನೆ. ನನ್ನ ನಾಮಜಪ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ವ್ಯಷ್ಟಿ ಸಾಧನೆಯ ವರದಿಗೆ ಹೋಗಲು ತಡವಾಗುತ್ತದೆ; ಆದ್ದರಿಂದ ಹೋಗಲು ಆಗುತ್ತಿಲ್ಲ. ನನ್ನ ಮನೆ ಆಶ್ರಮದಿಂದ ೧೦ ಕಿ.ಮೀ. ದೂರದಲ್ಲಿದೆ. ನಾನು ಆಶ್ರಮದ ಹೊರಗಡೆ ಸೇವೆಯಲ್ಲಿರುತ್ತೇನೆ. ಆಗ ‘ನನಗೆ ತಡವಾಗುತ್ತಿದೆ’ ಎಂದು ಅನಿಸುವುದಿಲ್ಲ. ನನಗೆ ೨ ಗಂಟೆ ಜಪ ಮಾಡಲು ಹೇಳಿದ್ದರೂ ಒಂದೂವರೆ ಗಂಟೆ ನಾಮಜಪ ಮಾಡುತ್ತೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಒಂದನ್ನು ನೆನಪಿಡಿ, ‘ಒಂದು ಗಂಟೆ ಅಥವಾ ಒಂದೂವರೆ ಗಂಟೆ ಜಪ ಮಾಡುತ್ತೇನೆ’ ಎನ್ನುವುದು ಕೇಳಲು ಸರಿಯಾಗಿರಬಹುದು. ನಮಗೆ ದೇಹ ತ್ಯಜಿಸಿ ಹೋಗುವಾಗ ಯಾವುದೇ ಸಾಧನೆಅಥವಾ ಸೇವೆ ಮಾಡಲು ಸಾಧ್ಯವಿಲ್ಲ. ನಾವು ಕೇವಲ ಜಪವನ್ನು ಮಾಡಬಹುದು. ಹಾಗಾಗಿ ‘ಸಾಧನೆ ಅಥವಾ ಸೇವೆ ಮಾಡಿದ್ದೇನೆ’, ಎಂಬುದಕ್ಕೆ ಮಹತ್ವವಿಲ್ಲ. ಅದಕ್ಕಾಗಿಯೇ ಈಗಿನಿಂದಲೇ ಬಹಳಷ್ಟು ಜಪ ಮಾಡುವ ಅಭ್ಯಾಸವಿರಬೇಕು. ಜಪವನ್ನು ಹೆಚ್ಚಿಸಬೇಕು !

ಸೇವೆಗೆ ನಾಮಜಪವನ್ನು ಜೊತೆಗೂಡಿಸಿ !

ಶ್ರೀ. ನಾಗೇಶ ಬಿರಾದಾರ

ಶ್ರೀ. ನಾಗೇಶ ಬಿರಾದಾರ : ನಾನು ಆಶ್ರಮದ ಹೊರಗೂ ಸೇವೆಯಲ್ಲಿರುತ್ತೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು, ಆದರೆ ಸೇವೆಗೆ ನಾಮಜಪವನ್ನು ಜೋಡಿಸಬೇಕು.