ಗೋರೆಗಾಂವ್ (ಮುಂಬಯಿ) ದಲ್ಲಿ ಶೋಭಾಯಾತ್ರೆಯಲ್ಲಿ ಶ್ರೀರಾಮನ ಭಕ್ತಿಗೀತೆಗಳ ವಿಚಾರವಾಗಿ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ!

  • ಬಜರಂಗದಳದ ೩ ಕಾರ್ಯಕರ್ತರಿಗೆ ಗಂಭೀರ ಗಾಯ

  • ೮ ಜನರ ಬಂಧನ

  • ದಾಳಿಕೋರರ ಅನಧಿಕೃತ ಮನೆಗಳನ್ನು ನೆಲಸಮಗೊಳಿಸಿದ ಪಾಲಿಕೆ!

ಎಐ ಚಿತ್ರ

ಮುಂಬಯಿ – ಇಲ್ಲಿನ ಗೋರೆಗಾಂವ್ (ಪೂರ್ವ) ದ ದಿಂಡೋಶಿ ಸಂತೋಷನಗರ ಪರಿಸರದಲ್ಲಿ ದಕ್ಷಿಣ ಭಾರತೀಯ ಸಮಾಜದಿಂದ ಶ್ರೀ ಮರಿಯಮ್ಮಾದೇವಿಯ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶೋಭಾಯಾತ್ರೆಯಲ್ಲಿ ಶ್ರೀರಾಮನ ಭಕ್ತಿಗೀತೆಗಳನ್ನು ಹಾಕಲಾಗಿತ್ತು. ಆಗ ಮುಸಲ್ಮಾನರು ಕತ್ತಿ ಮತ್ತು ಕಬ್ಬಿಣದ ರಾಡ್‌ಗಳಿಂದ ಹಿಂದೂಗಳ ಮೇಲೆ ದಾಳಿ ಮಾಡಿದರು. ಇದರಲ್ಲಿ ಬಜರಂಗದಳದ ೩ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ೮ ಜನರನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಇದು ಕೇವಲ ತೋರಿಕೆಗಾಗಿ ಮಾಡಿದ ಕ್ರಮವಾಗಿದ್ದರೆ, ನಾವು ಮತ್ತೆ ಹೋರಾಟ ಮಾಡುತ್ತೇವೆ’ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ. (ಹಿಂದೂಗಳೇ, ಪದೇ ಪದೇ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಾರದಂತೆ ತಡೆಯಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ! – ಸಂಪಾದಕರು)

ತದನಂತರ ದಾಳಿಕೋರರ ಅನಧಿಕೃತ ಮನೆಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಯಿತು. ಈ ಮನೆಗಳು ಅನಧಿಕೃತವಾಗಿವೆ ಎಂಬ ದೂರು ಮಹಾನಗರ ಪಾಲಿಕೆ ಆಡಳಿತಕ್ಕೆ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

‘ಹನುಮಾನ್ ಚಾಲೀಸಾ’ ಪಠಿಸುವ ಹಿಂದೂಗಳಿಗೇ ಪೊಲೀಸರ ಅಡ್ಡಿ!

ದಾಳಿಕೋರ ಮತಾಂಧರಿಗಲ್ಲ, ಬದಲಾಗಿ ಹಿಂದೂಗಳ ಮೇಲೆಯೇ ದರ್ಪ ತೋರುವ ಪೊಲೀಸರನ್ನು ವಜಾಗೊಳಿಸಲೇಬೇಕು!

ಶೋಭಾಯಾತ್ರೆಯಲ್ಲಿ ದಾಳಿ ನಡೆದ ಸ್ಥಳದಲ್ಲಿ ಬಜರಂಗದಳದಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡಲಾಗುತ್ತಿತ್ತು. ಆಗ ಪೊಲೀಸರು ಕಾರ್ಯಕರ್ತರಿಗೆ, “ಹನುಮಾನ್ ಚಾಲೀಸಾ ಪಠಣವನ್ನು ಹೊರಗೆ ಮಾಡಿ. ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ” ಎಂದು ಹೇಳಿದರು. ಆದರೆ ಬಜರಂಗದಳದ ಕಾರ್ಯಕರ್ತರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು.

ಸಂಪಾದಕೀಯ ನಿಲುವು

  • ಶ್ರೀರಾಮನ ಭಕ್ತಿಗೀತೆಗಳನ್ನು ವಿರೋಧಿಸುವ ಮತಾಂಧರನ್ನು ಭಾರತದಿಂದ ಓಡಿಸಲೇಬೇಕು!
  • ರಾಮರಾಜ್ಯ ಬರಲಿರುವ ಭಾರತದಲ್ಲಿ ಶ್ರೀರಾಮನ ಗೀತೆಗಳು ಮೊಳಗಿಯೇ ಮೊಳಗುತ್ತವೆ ಎಂಬುದನ್ನು ಮತಾಂಧರು ನೆನಪಿನಲ್ಲಿಡಬೇಕು!
  • ಹಿಂದೂಗಳೇ, ಇನ್ನೂ ಎಷ್ಟು ಕಾಲ ಮತಾಂಧರಿಂದ ಹೊಡೆತ ತಿನ್ನುತ್ತೀರಿ? ಹಿಂದೂ ಸಂಘಟನೆಯ ಸಾಮರ್ಥ್ಯವನ್ನು ಯಾವಾಗ ತೋರಿಸುತ್ತೀರಿ?