
ಇಸ್ಲಾಮಾಬಾದ್ (ಪಾಕಿಸ್ತಾನ) – ಲಾಹೋರ್ ಸಮೀಪವಿರುವ ಮುರೀದಕೆಯಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಧ್ವಂಸಗೊಂಡ ಪ್ರಧಾನ ಕಚೇರಿ ‘ಮರ್ಕಜ್ ತಯ್ಯಬಾ’ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಲಷ್ಕರ್-ಎ-ತೊಯ್ಬಾ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿಯನ್ನು ಗುಂಡಿಕ್ಕಿ ಮತ್ತು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ.
೧. ಮಾರ್ಚ್ ೨೨ ರಂದು ಮಧ್ಯಾಹ್ನ ಮರ್ಕಜ್ ತಯ್ಯಬಾ ಪ್ರದೇಶದಲ್ಲಿ ಈದ್ ನ ನಮಾಜ್ ಆಯೋಜಿಸಲಾಗಿತ್ತು. ಇದರಲ್ಲಿ ಮೌಲಾನಾ ಅಬು ಜಾರ್, ಮೌಲಾನಾ ಅಬ್ದುಲ್ ರೆಹಮಾನ್ ಆಬಿದ್ ಸೇರಿದಂತೆ ಲಷ್ಕರ್-ಎ-ತೊಯ್ಬಾದ ಅನೇಕ ಪ್ರಮುಖ ಕಮಾಂಡರ್ಗಳು ಉಪಸ್ಥಿತರಿದ್ದರು.
೨. ನಮಾಜ್ ಮುಗಿದ ನಂತರ ಬಿಲಾಲ್ ಆರಿಫ್ ಸಲಾಫಿ ಹೊರಬಂದಾಗ, ಒಬ್ಬ ವ್ಯಕ್ತಿ ಆತನ ಮೇಲೆ ಗುಂಡು ಹಾರಿಸಿದರೆ, ಒಬ್ಬ ಮಹಿಳೆ ಚೂರಿಯಿಂದ ಇರಿದಿದ್ದಾಳೆ.
೩. ಆ ನಂತರ ಇತರ ಭಯೋತ್ಪಾದಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಲಾಫಿಯನ್ನು ಆಸ್ಪತ್ರೆಗೆ ಕರೆದೊಯ್ದರು.
೪. ಮೂಲಗಳ ಪ್ರಕಾರ, ಸಲಾಫಿ ೨೦೦೫ ರಿಂದ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಹೊಂದಿದ್ದನು ಮತ್ತು ಸಂಘಟನೆಗಾಗಿ ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದನು.
೫. ಸಲಾಫಿಯು ಮುರೀದಕೆಯಲ್ಲಿನ ತಯ್ಯಬಾ ಕಾಲೋನಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದನು. ಅಲ್ಲಿ ಸೇನೆಯ ಇತರ ಕಮಾಂಡರ್ಗಳು ಸಹ ವಾಸವಾಗಿದ್ದಾರೆ.
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !
ಇರಾನ್ ಮೇಲಿನ ನಿರ್ಬಂಧಗಳಿಗೆ 60 ದಿನಗಳ ವಿನಾಯಿತಿ ನೀಡಿದ ಅಮೆರಿಕ!
ಜೈಪುರದಲ್ಲಿ (ರಾಜಸ್ಥಾನ) ‘ಜೈಶ್-ಎ-ಮೊಹಮ್ಮದ್’ ಸಂಪರ್ಕದಲ್ಲಿ ಹಿಂದೂ ಮಹಿಳೆ !