ಬಾಂಗ್ಲಾದೇಶದಲ್ಲಿ ಜಮೀನು ವಿವಾದ; ಮುಸ್ಲಿಂ ವ್ಯಕ್ತಿಯಿಂದ ೬೨ ವರ್ಷದ ಹಿಂದೂ ವೃದ್ಧನ ಕೊಲೆ Bangladesh Hindu Old Man Murdered

ಮಧು ಚಂದ್ರ ಶಿಲ್ ಮತ್ತು ಅವರ ನೆರೆಯ ನಿವಾಸಿ ಆಬೇದ್ ಅಲಿ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಕುರಿಗ್ರಾಮ್ ಜಿಲ್ಲೆಯ ರಾಜಾಹತ್ ಉಪಜಿಲ್ಲೆಯ ಜಾಯ್‌ದೇವ್ ಮಲಸಾಬಾರಿ ಗ್ರಾಮದಲ್ಲಿ ಜನವರಿ ೨೬ ರಂದು ಭೂ ವಿವಾದದ ಹಿನ್ನೆಲೆಯಲ್ಲಿ ೬೨ ವರ್ಷದ ಮಧು ಚಂದ್ರ ಶಿಲ್ ಎಂಬ ಹಿಂದೂ ವೃದ್ಧನನ್ನು ಮುಸ್ಲಿಂ ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದಾನೆ.

ಮಧು ಚಂದ್ರ ಶಿಲ್ ಮತ್ತು ಅವರ ನೆರೆಯ ನಿವಾಸಿ ಆಬೇದ್ ಅಲಿ ಎಂಬುವವರ ಕುಟುಂಬದ ನಡುವೆ ಜಮೀನಿನ ಗಡಿ ವಿಷಯವಾಗಿ ದೀರ್ಘಕಾಲದಿಂದ ವಿವಾದವಿತ್ತು. ಜನವರಿ ೨೬ ರಂದು ಇದೇ ವಿಷಯವಾಗಿ ಜಗಳ ತಾರಕಕ್ಕೇರಿತು. ಈ ಸಂದರ್ಭದಲ್ಲಿ ಆಬೇದ್ ಅಲಿ ಮಧು ಚಂದ್ರ ಅವರನ್ನು ಬಲವಾಗಿ ತಳ್ಳಿದ್ದರಿಂದ ಅವರು ಮೃತಪಟ್ಟಿದ್ದಾರೆ. ಪೊಲೀಸರು ಈಗಾಗಲೇ ಆಬೇದ್ ಅಲಿಯನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳನ್ನು ಸಾಯಿಸಲು ಮತಾಂಧರಿಗೆ ಯಾವುದೇ ಕಾರಣವಾದರೂ ಸಾಕಾಗುತ್ತದೆ ಎಂಬುದನ್ನು ಗಮನಿಸಿ!