ಹೀಗಿದೆ ‘ಸನಾತನ ಪ್ರಭಾತ’ !

‘ಸನಾತನ ಪ್ರಭಾತ’ ಈಶ್ವರನಿರ್ಮಿತವಾಗಿದೆ. ಸ್ವತಃ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಇದರ ನಿರ್ಮಾತೃರಾಗಿದ್ದು ಕಾಲದ ಅವಶ್ಯಕತೆಯನ್ನು ಗುರುತಿಸಿ ಈ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯು ತತ್ತ್ವ, ಧ್ಯೇಯ ಮತ್ತು ಧರ್ಮನಿಷ್ಠವಾಗಿದೆ. ‘ಸನಾತನ ಪ್ರಭಾತನ್ನು  ‘ಹಿಂದೂ ಧರ್ಮದ ಮುಖವಾಣಿ’ ಎಂದು ಕರೆದರೆ ಅದು ತಪ್ಪಾಗಲಾರದು. ಹಿಂದೂ ಧರ್ಮಕ್ಕಾಗಿ ಹೋರಾಡುವ, ಹಿಂದೂ ಧರ್ಮೀಯರನ್ನು ಸಂಘಟಿಸುವ ಮತ್ತು ಭಾರತದಾದ್ಯಂತದ ಎಲ್ಲಾ ಹಿಂದೂ ಸಂಘಟನೆಗಳನ್ನು ಒಂದೇ ವೇದಿಕೆಯ ಮೇಲೆ ತರುವ ಏಕೈಕ  ಪತ್ರಿಕೆಯಾಗಿದೆ. ಹಿಂದೂ ಧರ್ಮದ ಬಗ್ಗೆ ಅನಾಸಕ್ತಿ ಹೊಂದಿರುವ, ರಾಷ್ಟ್ರಪ್ರೇಮವಿಲ್ಲದ ನಿದ್ರಾವಸ್ಥೆಯಲ್ಲಿರುವ ಹಿಂದೂಗಳನ್ನು ಜಾಗೃತಗೊಳಿಸಿ ಜಾಗೃತ ಕರ್ಮಹಿಂದೂಗಳಿಗೆ ಧರ್ಮಪ್ರೇಮ ಮತ್ತು ರಾಷ್ಟ್ರಪ್ರೇಮವನ್ನು ಕಲಿಸಿ ಅವರನ್ನು ಕ್ರಿಯಾಶೀಲರನ್ನಾಗಿ ಮಾಡುವ ಏಕೈಕ ನಿಯತಕಾಲಿಕೆ ಎಂದರೆ ‘ಸನಾತನ ಪ್ರಭಾತ’ !

ಕೇವಲ ವಾರ್ತೆಗಳನ್ನು ನೀಡುವ ದಿನಪತ್ರಿಕೆಯಲ್ಲ, ಬದಲಾಗಿ ಸಂತರಿಂದ ‘ಧರ್ಮಪೀಠ’ ಎಂದು ಗೌರವಿಸಲ್ಪಟ್ಟಂತಹ ಶ್ರೇಷ್ಠ ಪತ್ರಿಕೆ ‘ಸನಾತನ ಪ್ರಭಾತ’!

ಪ್ರತಿಯೊಬ್ಬ ಧರ್ಮಾಭಿಮಾನಿಗೆ ಪ್ರೇರಣಾದಾಯಕ ಮತ್ತು ಪ್ರತಿಯೊಬ್ಬ ರಾಷ್ಟ್ರಾಭಿಮಾನಿಯಲ್ಲಿ ರಾಷ್ಟ್ರಪ್ರೇಮದ ಕಿಚ್ಚನ್ನು ಹಚ್ಚುವ ಚೈತನ್ಯದ ಮೂಲವೇ ‘ಸನಾತನ ಪ್ರಭಾತ’ !

ಬ್ರಾಹ್ಮತೇಜ ಮತ್ತು  ಕ್ಷಾತ್ರತೇಜದ ಬರವಣಿಗೆಯ ಮಾಧ್ಯಮದಿಂದ ತಾರಕ ಮತ್ತು ಮಾರಕ ಚೈತನ್ಯವನ್ನು ಪ್ರಕ್ಷೇಪಿಸುವ ಪತ್ರಿಕೆ ಎಂದರೆ ‘ಸನಾತನ ಪ್ರಭಾತ’ !