
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗಳ ನಾಯಕರ ಸಭೆ ನಡೆದ ವಿಡಿಯೋ ಬೆಳಕಿಗೆ ಬಂದಿದೆ. ಈ ಸಭೆಯು ಗುಜ್ರನ್ವಾಲಾ ನಗರದಲ್ಲಿ ನಡೆದಿದ್ದು, ಅದರಲ್ಲಿ ಹಮಾಸ್ ನ ಕಮಾಂಡರ್ ನಾಜಿ ಜಹೀರ್ ಮತ್ತು ಲಷ್ಕರ್-ಎ-ತೊಯ್ಬಾ ಕಮಾಂಡರ್ ರಶೀದ್ ಅಲಿ ಸಂಧು ಇಬ್ಬರೂ ಭಾಗವಹಿಸಿದ್ದರು. ಲಷ್ಕರ್-ಎ-ತೊಯ್ಬಾದ ರಾಜಕೀಯ ಮುಖ ಎಂದು ಪರಿಗಣಿಸಲಾದ ‘ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್’ ಆಯೋಜನೆ ಮಾಡಿದ್ದ ಒಂದು ಕಾರ್ಯಕ್ರಮದಲ್ಲಿ ಈ ಸಭೆ ನಡೆದಿದೆ.
ಫೆಬ್ರವರಿ ೨೦೨೫ ರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕೆಲವೇ ವಾರಗಳ ಮೊದಲು, ನಾಜಿ ಜಹೀರ್ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬಂದಿದ್ದನು. ಅಲ್ಲಿಯೇ ಅವನು ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ನ ಕಮಾಂಡರ್ಗಳೊಂದಿಗೆ ಭಾರತ ವಿರೋಧಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದನು.
ಸಂಪಾದಕೀಯ ನಿಲುವುಇಸ್ರೇಲ್ ಹಮಾಸ್ ನ ಗುಂಪನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮುಂದಾಗಿದೆ. ಇದರಿಂದ ಹಮಾಸ್ನ ಶಕ್ತಿ ಕುಗ್ಗಿದೆ. ಇನ್ನೊಂದೆಡೆ ಭಾರತವು ‘ಆಪರೇಷನ್ ಸಿಂದೂರ’ ದ ಮೂಲಕ ಲಷ್ಕರ್-ಎ-ತೊಯ್ಬಾದ ಕೆಲವು ನೆಲೆಗಳನ್ನು ನಾಶಪಡಿಸಿದೆ. ಆದರೂ ಅದನ್ನು ಇನ್ನೂ ಸಂಪೂರ್ಣವಾಗಿ ನಾಶ ಮಾಡಿಲ್ಲ. ಆದ್ದರಿಂದ, ಈಗ ಸರಕಾರವು ಇಸ್ರೇಲಿ ಧೋರಣೆಯನ್ನು ಸ್ವೀಕರಿಸಿ ಲಷ್ಕರ್-ಎ-ತೊಯ್ಬಾದ ಸಂಪೂರ್ಣ ನಾಶ ಮಾಡಬೇಕು, ಹೀಗೆ ನಿರೀಕ್ಷೆ ಇದೆ! |
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine