ಮುರ್ಷಿದಾಬಾದ ನಂತರ ಈಗ ಭಾಗ್ಯನಗರ (ತೆಲಂಗಾಣ) ಇಲ್ಲಿ ನಿರ್ಮಾಣವಾಗಲಿದೆ ಬಾಬರಿ ಸ್ಮಾರಕ! – Babri Masjid Memorial

ತೆಹ್ರೀಕ್ ಮುಸ್ಲಿಂ ಶಬ್ಬನ್ ಸಂಘಟನೆಯ ಅಧ್ಯಕ್ಷ ಮುಷ್ತಾಕ್ ಮಲಿಕ್ (ಬಲ)

ಭಾಗ್ಯನಗರ (ತೆಲಂಗಾಣ) – ಬಂಗಾಲದ ಮುರ್ಷಿದಾಬಾದನಲ್ಲಿರುವ ಬೇಲಡಂಗಾದಲ್ಲಿ ಬಾಬರಿ ಮಸೀದಿಯ ಶಿಲಾನ್ಯಾಸವಾದ ಬಳಿಕ ‘ತಹರೀಕ್ ಮುಸ್ಲಿಂ ಶಬ್ಬನ್’ ಹೆಸರಿನ ಸಂಘಟನೆಯು ಗ್ರೇಟರ್ ಹೈದರಾಬಾದನಲ್ಲಿ ಬಾಬರಿ ಸ್ಮಾರಕವನ್ನು ನಿರ್ಮಿಸುವುದಾಗಿ ಘೋಷಿಸಿದೆ. ಇದರೊಂದಿಗೆ ಕಲ್ಯಾಣಕಾರಿ ಸಂಸ್ಥೆಯನ್ನು ಸ್ಥಾಪಿಸುವ ಯೋಜನೆಯೂ ಇದೆ. ಸಂಘಟನೆಯ ಅಧ್ಯಕ್ಷ ಮುಶ್ತಾಕ್ ಮಲಿಕ್ ಅವರು, ಶೀಘ್ರದಲ್ಲಿಯೇ ಸ್ಮಾರಕ ನಿರ್ಮಿಸುವ ದಿನಾಂಕವನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

ಬಾಬರಿ ಧ್ವಂಸಕ್ಕೆ ೩೩ ವರ್ಷಗಳು ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡುತ್ತಾ ಮಲಿಕ್ ಅವರು, ಬಾಬರ್ ಹೆಸರಿನಿಂದ ಯಾರಿಗೂ ತೊಂದರೆಯಾಗಬಾರದು. ಸ್ಮಾರಕವು ಭ್ರಾತೃತ್ವವನ್ನು ತೋರಿಸುತ್ತದೆ ಎಂದು ಹೇಳಿದರು. (ಬಾಬರ್ ಹೆಸರಿನಲ್ಲಿ ಸ್ಮಾರಕವನ್ನು ಕಟ್ಟದಿರುವುದೇ ಭ್ರಾತೃತ್ವವನ್ನು ತೋರಿಸಿದಂತೆ ಆಗುತ್ತಿತ್ತು, ಇದನ್ನು ಮಲಿಕ್ ಏಕೆ ಮಾಡಲಿಲ್ಲ? – ಸಂಪಾದಕರು)

ಸಂಪಾದಕೀಯ ನಿಲುವು

ದೇಶದಲ್ಲಿ ಮತ್ತೆ ಬಾಬರನ ಹೆಸರಿನಲ್ಲಿ ಹಿಂದೂಗಳ ಮೇಲೆ ವೈಚಾರಿಕ ಆಕ್ರಮಣಗಳೊಂದಿಗೆ ದೈಹಿಕ ಆಕ್ರಮಣಗಳ ಸಿದ್ಧತೆ ಮಾಡಲಾಗುತ್ತಿದೆ ಎಂಬುದನ್ನು ಗಮನಿಸಿ ಮತ್ತು ಈ ಸ್ಥಿತಿ ಬರುವ ಮೊದಲು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ!