ಚಿಕ್ಕಮಗಳೂರಿನಲ್ಲಿ ಶ್ರೀ ದತ್ತ ಜಯಂತಿಯ ಫಲಕವನ್ನು ಅಜ್ಞಾತ ವ್ಯಕ್ತಿಗಳಿಂದ ಕತ್ತರಿ ! : Datta Poster Torn

ಶ್ರೀ ದತ್ತ ಜಯಂತಿ ಫಲಕವನ್ನು ಅಪರಿಚಿತ ವ್ಯಕ್ತಿಗಳು ಹರಿದು ಹಾಕಿದ್ದಾರೆ.

ಚಿಕ್ಕಮಗಳೂರು – ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶದಿಂದ, ಚಿಕ್ಕಮಗಳೂರಿನಲ್ಲಿ ಶ್ರೀ ದತ್ತ ಜಯಂತಿ ನಿಮಿತ್ತ ಹಿಂದೂ ಸಂಘಟನೆಗಳು ಅಳವಡಿಸಿದ್ದ ಫಲಕಗಳನ್ನು ಕತ್ತರಿಯಿಂದ ಹರಿದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ನಗರದ ಸೂಕ್ಷ್ಮ ಪ್ರದೇಶಗಳಲ್ಲೊಂದಾದ ಐ.ಜಿ. ರಸ್ತೆಯಲ್ಲಿರುವ ಉರ್ದು ಶಾಲೆಯ ಎದುರು ಹಾಕಲಾಗಿದ್ದ ಫಲಕಕ್ಕೆ ಸಂಬಂಧಿಸಿದೆ. (ಈ ಕೃತ್ಯವನ್ನು ಯಾರು ಮಾಡಿದ್ದಾರೆ ಎಂಬುದು ಘಟನಾ ಸ್ಥಳದಿಂದಲೇ ತಿಳಿದುಬರುತ್ತದೆ! – ಸಂಪಾದಕರು) ಈ ಘಟನೆಯಿಂದ ನಗರದಲ್ಲಿ ಆಕ್ರೋಶದ ವಾತಾವರಣ ಸೃಷ್ಟಿಯಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

(ಈ ಛಾಯಾಚಿತ್ರಗಳನ್ನು ಜನರ ರಾಷ್ಟ್ರೀಯ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶದಿಂದ ಪ್ರಕಟಿಸಲಾಗಿಲ್ಲ, ಬದಲಾಗಿ ವಿಡಂಬನೆಯನ್ನು ಪ್ರಸಿದ್ಧಿಪಡಿಸುವ ಉದ್ದೇಶದಿಂದ ಪ್ರಕಟಿಸಲಾಗಿದೆ. – ಸಂಪಾದಕರು)

ಸಂಪಾದಕೀಯ ನಿಲುವು

ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳು ತಮ್ಮ ಹಬ್ಬಗಳನ್ನು ಭಯದ ನೆರಳಿನಲ್ಲೇ ಆಚರಿಸಬೇಕಾಗುತ್ತದೆ ಎಂಬುದನ್ನು ಗಮನಿಸಿ!