‘ಕಾಶ್ಮೀರದ ಸಮಸ್ಯೆಗಳ ಪ್ರತಿಧ್ವನಿ’ ಕೆಂಪುಕೋಟೆಯ ಮುಂದೆ ಮೊಳಗಿತು !’ – ನಾಲಿಗೆ ಹರಿಬಿಟ್ಟ ಮೆಹಬೂಬಾ ಮುಫ್ತಿ

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರೂ ಭಯೋತ್ಪಾದಕರನ್ನು ಬೆಂಬಲಿಸುವ ಹೇಳಿಕೆ

ಮೆಹಬೂಬಾ ಮುಫ್ತಿ

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಭಾಜಪ ಸರಕಾರವು ಜಗತ್ತಿಗೆ ಹೇಳಿದೆ; ಆದರೆ ಕಾಶ್ಮೀರದ ಸಮಸ್ಯೆಗಳು ಕೆಂಪುಕೋಟೆಯ ಮುಂದೆ ಪ್ರತಿಧ್ವನಿಸುತ್ತಿವೆ. ನೀವು (ಸರಕಾರ) ಜಮ್ಮು-ಕಾಶ್ಮೀರವನ್ನು ಸುರಕ್ಷಿತಗೊಳಿಸುವುದಾಗಿ ಭರವಸೆ ನೀಡಿದ್ದೀರಿ; ಆದರೆ ಆ ಭರವಸೆಯನ್ನು ಪೂರೈಸುವ ಬದಲು, ನಿಮ್ಮ ನೀತಿಗಳಿಂದಾಗಿ ದೆಹಲಿ ಅಸುರಕ್ಷಿತವಾಗಿದೆ ಎಂದು ಟೀಕಿಸುತ್ತಾ, ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಜಿಹಾದಿ ಭಯೋತ್ಪಾದಕರನ್ನು ಬೆಂಬಲಿಸಿದರು. ದೆಹಲಿ ಬಾಂಬ್ ಸ್ಫೋಟದ ಪ್ರಕರಣದ ಬಗ್ಗೆ ಅವರು ಮಾತನಾಡುತ್ತಿದ್ದರು.

ಮೆಹಬೂಬಾ ಅವರು ಮಾತು ಮುಂದುವರೆಸಿ,

ಹಿಂದೂ-ಮುಸಲ್ಮಾನ ರಾಜಕಾರಣ ಮಾಡುವುದರಿಂದ ಮತಗಳು ಸಿಗಬಹುದು; ಆದರೆ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ದೆಹಲಿಯ ಜನರಿಗೆ ಬಹುಶಃ ಹಿಂದೂ-ಮುಸಲ್ಮಾನ ವಿಭಜನೆ ಎಷ್ಟು ಹೆಚ್ಚಾಗುತ್ತದೆಯೋ ಅಷ್ಟು ಹೆಚ್ಚು ರಕ್ತಪಾತವಾಗುತ್ತದೆ, ಅವರಿಗೆ ಹೆಚ್ಚು ಮತಗಳು ಸಿಗುತ್ತವೆ ಎಂದು ಅನಿಸುತ್ತದೆ. ಅವರು ಪುನರ್ವಿಮರ್ಶೆ ಮಾಡಬೇಕು ಎಂದು ನನಗೆ ಅನಿಸುತ್ತದೆ. ದೇಶವು ಕುರ್ಚಿಗಿಂತಲೂ ಬಹಳ ದೊಡ್ಡದಾಗಿದೆ.

ಕಾಶ್ಮೀರಿ ಯುವಕರು ಸ್ಫೋಟಗಳನ್ನು ನಡೆಸಬಾರದು! – ಮೆಹಬೂಬಾ ಅವರ ಕರೆ

ಮೆಹಬೂಬಾ ಮುಫ್ತಿ ಅವರು, ಸ್ಫೋಟ ನಡೆಸುವ ಯುವಕರಿಗೆ ನಾನು, ನೀವು ಏನು ಮಾಡುತ್ತಿದ್ದೀರೋ, ಅದೆಲ್ಲವೂ ತಪ್ಪು. ಇದು ಕೇವಲ ನಿಮಗಾಗಿ ಅಲ್ಲ, ನಿಮ್ಮ ಕುಟುಂಬಕ್ಕಾಗಿ, ಜಮ್ಮು-ಕಾಶ್ಮೀರಕ್ಕಾಗಿ ಮತ್ತು ಇಡೀ ದೇಶಕ್ಕಾಗಿ ಅಪಾಯಕಾರಿ. ನೀವು ದೊಡ್ಡ ಅಪಾಯವನ್ನು ಎದುರಿಸುತ್ತಿದ್ದೀರಿ; ಏಕೆಂದರೆ ನೀವು ನಿಮ್ಮ ಪ್ರೀತಿಪಾತ್ರರ ಜೀವನವನ್ನು ನಾಶ ಮಾಡುತ್ತಿದ್ದೀರಿ. ಅನೇಕ ಅಮಾಯಕ ಜನರ ಜೀವನ ಅಪಾಯದಲ್ಲಿದೆ, ಎಂದು ನಾನು ನಿಮಗೆ ಮತ್ತೊಮ್ಮೆ ಹೇಳುತ್ತಿದ್ದೇನೆ, ಎಂದು ಕರಿ ನೀಡಿದರು.(ಇದು ಈ ಯುವಕರಿಗೆ ತಿಳಿದಿದೆ, ಆದರೂ ಅವರು ಸ್ಫೋಟಗಳನ್ನು ನಡೆಸುತ್ತಿದ್ದಾರೆ. ಇದರರ್ಥ ಅವರ ಉದ್ದೇಶ ಅದಕ್ಕಿಂತ ಭಿನ್ನವಾಗಿದೆ ಎಂಬುದು ಸ್ಪಷ್ಟವಾಗಿದೆ. ಮೆಹಬೂಬಾ ಎಷ್ಟೇ ಮನವಿ ಮಾಡಿದರೂ, ಅದು ಮನಃಪೂರ್ವಕವಾಗಿಲ್ಲ, ಕೇವಲ ತೋರಿಕೆಯ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬರುತ್ತದೆ! – ಸಂಪಾದಕರು)

ಸಂಪಾದಕೀಯ ನಿಲುವು

  • ಒಂದು ವೇಳೆ ಈ ರೀತಿ ಕಾಶ್ಮೀರದ ತಥಾಕಥಿತ ಸಮಸ್ಯೆಗಳನ್ನು ಮಂಡಿಸುತ್ತಿದ್ದರೆ, ಕಾಶ್ಮೀರದ ಹಿಂದೂಗಳೂ ಅದೇ ರೀತಿ ಮಂಡಿಸಿದರೆ, ಮೆಹಬೂಬಾ ಮುಫ್ತಿ ಅವರಿಗೆ ನಡೆಯಲಿದೆಯೇ?
  • ಅಬ್ದುಲ್ಲಾ ಕುಟುಂಬ ಮತ್ತು ಮೆಹಬೂಬಾ ಮುಫ್ತಿ ಅವರ ವಿಚಾರಗಳು ಒಂದೇ ಆಗಿವೆ. ಅಂದರೆ ಕಾಶ್ಮೀರದ ನಾಯಕರು ಮತ್ತು ಅಲ್ಲಿನ ಮತಾಂಧ ಮುಸಲ್ಮಾನರು ಮತ್ತು ಜಿಹಾದಿಗಳು ಒಂದೇ ಸಿದ್ಧಾಂತದವರಾಗಿದ್ದಾರೆ. ಈ ಕಾರಣಕ್ಕಾಗಿಯೇ ಅಲ್ಲಿನ ಭಯೋತ್ಪಾದನೆ ನಾಶವಾಗುತ್ತಿಲ್ಲ!