ಕೇವಲ ಇತರರಿಗೆ ಸಾಧನೆಯನ್ನು ಹೇಳುವುದು ಮಹತ್ವದ್ದಾಗಿರದೇ ತನ್ನ ಪ್ರಗತಿಗಾಗಿ ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯನ್ನು ನಡೆಸಿ ಸ್ವಭಾವದೋಷಗಳ ನಿರ್ಮೂಲನೆ ಮಾಡುವುದು ಆವಶ್ಯಕವಾಗಿದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸೌ. ಅವನಿ ಕರಮಳಕರ (ಪೂರ್ವಾಶ್ರಮದ ಕು. ಶ್ರೇಯಾ ಗುಬ್ಯಾಡ), ಕೊಲ್ಹಾಪುರ : ನನ್ನಿಂದಾಗುವ ತಪ್ಪುಗಳಲ್ಲಿ ನನ್ನಲ್ಲಿನ ಅಹಂಕಾರವೇ ಕಾರಣ. ಅದರ ಮೂಲ ಕಾರಣ ನನ್ನ ಬಹಿರ್ಮುಖತೆ ! ನಾನು ಯಾವಾಗ ಅಂತರ್ಮುಖ ವಾಗಿರುತ್ತೇನೆಯೋ, ಆಗ ನಿಮ್ಮ ಕೃಪೆಯಿಂದ ನನ್ನಿಂದ ಭಾವಪೂರ್ಣ ಮತ್ತು ಪರಿಪೂರ್ಣ ಸೇವೆಯಾಗುತ್ತದೆ; ಆದರೆ ನನ್ನ ಬಹಿರ್ಮುಖತೆ ಹೆಚ್ಚಾದಾಗ ನನ್ನಿಂದ ತಪ್ಪುಗಳಾಗುತ್ತವೆ ಅಥವಾ ನನ್ನ ಅಹಂಕಾರ ಹೆಚ್ಚಾಗುತ್ತದೆ.

ಸೌ. ಅವನಿ ಕರಮಳಕರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅದಕ್ಕಾಗಿ ಸ್ವಯಂಸೂಚನೆಗಳ ಸತ್ರಗಳನ್ನು ಮಾಡುತ್ತಿಯಲ್ಲ ?

ಸೌ. ಅವನಿ ಕರಮಳಕರ : ಇಲ್ಲ ನನ್ನಿಂದ ಸ್ವಯಂಸೂಚನೆಯ ಸತ್ರಗಳು ಆಗುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮನಸ್ಸಿಗೆ ಸ್ವಯಂಸೂಚನೆಗಳನ್ನು ಕೊಡುವುದು ಅತ್ಯಂತ ಮಹತ್ವದ್ದಾಗಿದೆ. ನೀನು ಇತರರಿಗೆ ಸಾಧನೆಯ ಬಗ್ಗೆ ಹೇಳಿದ ನಂತರ ಅವರು ನೀನು ಹೇಳಿದ್ದನ್ನು ಕೇಳಿ ಸಾಧನೆ ಮಾಡುವುದರಿಂದ ಅವರ ಪ್ರಗತಿಯಾಗುವುದು; ಆದರೆ ನಿನ್ನಲ್ಲಿ ಸ್ವಭಾವದೋಷಗಳು ಉಳಿದರೆ ನಿನ್ನ ಪ್ರಗತಿ ಆಗಲಾರದು.