‘ಬಾಬರಿ ಮಸೀದಿಯನ್ನು ಮತ್ತೊಮ್ಮೆ ಕಟ್ಟಲಾಗುವುದು’ ಎಂದು ಬರೆದ ಮುಸಲ್ಮಾನನ ಮೇಲಿನ ಪ್ರಕರಣ ರದ್ದುಗೊಳಿಸಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ Supreme Court Babri Masjid Muslims

ನವ ದೆಹಲಿ – ‘ತುರ್ಕಿಯಲ್ಲಿ ಯಾವ ರೀತಿ ಸೋಫಿಯಾ ಮಸೀದಿಯನ್ನು ಮತ್ತೆ ಕಟ್ಟಲಾಗಿದೆಯೋ, ಅದೇ ರೀತಿ ಒಂದು ದಿನ ಬಾಬರಿ ಮಸೀದಿಯನ್ನು ಸಹ ಮತ್ತೆ ಕಟ್ಟಲಾಗುವುದು’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದ ಮಹಮ್ಮದ್ ಫೈಯಾಜ್ ಮನ್ಸೂರಿ ಎಂಬಾತನ ಮೇಲಿನ ಪ್ರಕರಣವನ್ನು ರದ್ದುಗೊಳಿಸಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದ್ದು, ಅಲಹಾಬಾದ್ ಉಚ್ಚ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿದಿದೆ. ಅಲಹಾಬಾದ್ ಉಚ್ಚ ನ್ಯಾಯಾಲಯವು ಮೊಕದ್ದಮೆಯನ್ನು ರದ್ದುಗೊಳಿಸಲು ನಿರಾಕರಿಸಿದ ನಂತರ ಮನ್ಸೂರಿ ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದನು.

ಆರೋಪಿ ಫೈಯಾಜ್ ಮನ್ಸೂರಿ ೫ ಆಗಸ್ಟ್ ೨೦೨೦ ರಂದು ಬಾಬರಿ ಮಸೀದಿಯ ಕುರಿತು ಮೇಲಿನ ವಿವಾದಾತ್ಮಕ ಬರಹವನ್ನು ಬರೆದಿದ್ದನು. ಅದರ ಮರುದಿನವೇ ಅವನ ವಿರುದ್ಧ ದೂರು ದಾಖಲಿಸಲಾಯಿತು ಮತ್ತು ೮ ಆಗಸ್ಟ್ ೨೦೨೦ ರಂದು ಅವನನ್ನು ಬಂಧಿಸಲಾಯಿತು. ನಂತರ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ಯಡಿಯಲ್ಲಿ ಅವನ ಮೇಲೆ ಪ್ರಕರಣವನ್ನು ಸಹ ದಾಖಲಿಸಲಾಯಿತು.

ಸಂಪಾದಕೀಯ ನಿಲುವು

ಬಾಬರನ ವಂಶಸ್ಥರು ಈ ದೇಶದಲ್ಲಿ ಇನ್ನೂ ಉಳಿದಿರುವುದರಿಂದ ಶ್ರೀರಾಮಮಂದಿರಕ್ಕೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಹಿಂದೂಗಳು ಮರೆಯಬಾರದು. ಹಿಂದೂಗಳ ಮಂದಿರಗಳನ್ನು ರಕ್ಷಿಸಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದಕ್ಕೆ ಬೇರೆ ದಾರಿಯಿಲ್ಲ !