ಬಾಂಗ್ಲಾದೇಶದಲ್ಲಿ ತಥಾಕಥಿತ ಇಸ್ಲಾಂ ಧರ್ಮಕ್ಕೆ ಅವಮಾನ; ಹಿಂದೂ ವ್ಯಕ್ತಿಯ ಬಂಧನ : Bangladesh Hindu Arrest

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಪಂಚಗಢ ಜಿಲ್ಲೆಯ ಬೋಡಾ ಉಪಜಿಲ್ಲೆಯ ಆಮತ್ಲಾ ಪೋಸ್ಟ್, ಕಲಿಟೋಲಾ ನಿವಾಸಿ ಸಂಜಯಚಂದ್ರ ರಾಯ್ (ವಯಸ್ಸು ೪೮) ಅವರ ಮೇಲೆ, ಮಹಮ್ಮದ್ ಅಬ್ದುಲ್ ಗಫೂರ್ (ವಯಸ್ಸು ೪೮) ಎಂಬುವವರು ಫೇಸ್‌ಬುಕ್‌ನಲ್ಲಿ ಹಜರತ್ ಮಹಮ್ಮದ್ ಅವರ ವಿರುದ್ಧ ಬರೆದು (ಪೋಸ್ಟ್ ಮಾಡಿ) ‘ಧರ್ಮನಿಂದನೆ’ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಿ ರಾಯ್ ಅವರನ್ನು ಬಂಧಿಸಲಾಗಿದೆ.

. ಈ ಘಟನೆಯ ಮಾಹಿತಿ ಲಭ್ಯವಾದ ಕೂಡಲೇ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಘಟನೆಯು ಪಂಚಗಢದ ಪೊಲೀಸ್ ಅಧೀಕ್ಷಕರು ಮತ್ತು ಬೋಡಾ ಪೊಲೀಸ್ ಠಾಣೆಯ ಅಧಿಕಾರಿಯೊಂದಿಗೆ ದೂರವಾಣಿ ಮೂಲಕ ಸಂಪರ್ಕ ಸಾಧಿಸಿತು. ತನಿಖೆಯಲ್ಲಿ ಈ ಪ್ರಕರಣವು ೪ ಜನರ ಸಾಕ್ಷ್ಯಗಳ ಆಧಾರದ ಮೇಲೆ ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣ ದಾಖಲಿಸಲು ಪಂಚಗಢ ಜಿಲ್ಲೆಯ ಹಿಫಾಜತೆ ಇಸ್ಲಾಂನ ಕಾರ್ಯದರ್ಶಿ ಮಹಮ್ಮದ್ ಅಬ್ದುಲ್ ಗಫೂರ್ ಪ್ರಮುಖ ಸೂತ್ರಧಾರರಾಗಿದ್ದಾರೆ. ಈ ಪ್ರಕರಣ ಸಂಪೂರ್ಣವಾಗಿ ನಕಲಿ ಮತ್ತು ಉದ್ದೇಶಪೂರ್ವಕವಾಗಿದೆ ಎಂದು ಸ್ಥಳೀಯರು ಈ ಸಂಘಟನೆಗೆ ತಿಳಿಸಿದ್ದಾರೆ. ಅಲ್ಲದೆ, ಪ್ರತ್ಯಕ್ಷದರ್ಶಿ ಸಾಕ್ಷಿಗಳು ಲಭ್ಯವಿಲ್ಲ ಮತ್ತು ಯಾವುದೇ ದೃಢವಾದ ಪುರಾವೆಗಳಿಲ್ಲ.

. ಈ ಪ್ರಕರಣದಲ್ಲಿ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಸ್ಥೆಯು, ‘ಕಾನೂನಿನ ದುರ್ಬಳಕೆಯಿಂದಾಗಿ ಅಲ್ಪಸಂಖ್ಯಾತರು ಪದೇ ಪದೇ ಕಿರುಕುಳ, ಹಿಂಸೆ ಮತ್ತು ಅನ್ಯಾಯವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ಈ ಪ್ರಕರಣದ ತನಿಖೆ ಸ್ವತಂತ್ರವಾಗಿ ಮತ್ತು ಪಕ್ಷಪಾತವಿಲ್ಲದೆ ನಡೆಯಬೇಕು. ನ್ಯಾಯಾಲಯದಲ್ಲಿ ಪುರಾವೆಗಳ ಆಧಾರದ ಮೇಲೆ ವಿಚಾರಣೆ ನಡೆದು ಎಚ್ಚರಿಕೆಯಿಂದ ನ್ಯಾಯದಾನವಾಗಬೇಕು. ಸಂಜಯಚಂದ್ರ ರಾಯ್ ಅವರನ್ನು ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಅಲ್ಪಸಂಖ್ಯಾತರನ್ನು ರಕ್ಷಿಸಬೇಕು,’ ಎಂದು ಆಗ್ರಹಿಸಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶ ಮತ್ತು ಭಾರತ ಎರಡರಲ್ಲೂ ಇಂತಹ ಸುಳ್ಳು ಆರೋಪಗಳನ್ನು ಮಾಡಿ ಹಿಂದೂಗಳಿಗೆ ಕಿರುಕುಳ ನೀಡುವ ಮತ್ತು ಅವರ ಮೇಲೆ ದಾಳಿ ಮಾಡುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂಬುದನ್ನು ಗಮನಿಸಿದರೆ, ಇಂತಹ ಆರೋಪ ಮಾಡುವವರನ್ನೇ ಮೊದಲು ತನಿಖೆಗೊಳಪಡಿಸಬೇಕು!