ಪ. ಬಂಗಾಳ: ಕಾಳಿಮಾತೆಯ ಮೂರ್ತಿ ಭಗ್ನಗೊಳಿಸಿದ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತನ ಬಂಧನ

‘ಕುಡಿದ ಅಮಲಿನಲ್ಲಿ ತಪ್ಪು ಮಾಡಿದೆ!’

ಕೋಲಕಾತಾ (ಪ.ಬಂಗಾಳ) – ದಕ್ಷಿಣ 24 ಪರಗಣ ಜಿಲ್ಲೆಯ ಕಾಕದ್ವೀಪ ನಗರದಲ್ಲಿ ಕಾಳಿಮಾತೆಯ ವಿಗ್ರಹವನ್ನು ಭಗ್ನಗೊಳಿಸಿದ ಪ್ರಕರಣದಲ್ಲಿ, ಪೊಲೀಸರು ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತ ನಾರಾಯಣ್ ಹಲ್ದಾರ್ ನನ್ನು ಬಂಧಿಸಿದ್ದಾರೆ. ರಹಸ್ಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು. ಕುಡಿದ ಅಮಲಿನಲ್ಲಿ ತಾನೇ ಮೂರ್ತಿಯನ್ನು ಒಡೆದಿರುವುದಾಗಿ ಆರೋಪಿಯು ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.

ದೇವಿ ಮೂರ್ತಿಯನ್ನು ಒಡೆಯುವುದರ ಹಿಂದೆ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಉದ್ದೇಶವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ; ಆದರೆ, ಒಂದು ಸುದ್ದಿ ವಾಹಿನಿಗೆ ನಾರಾಯಣ್ ತಂದೆ ಭೂಪತಿ ಅವರು ‘ತಾನು ಮತ್ತು ತನ್ನ ಮಗ ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲಿಗರು,’ ಎಂದು ಹೇಳಿದ್ದರು, ಜೊತೆಗೆ, ಕಾಳಿದೇವಿಯ ಮೂರ್ತಿ ಒಡೆಯುವಲ್ಲಿ 7-8 ಜನರು ಭಾಗಿಯಾಗಿದ್ದರು, ಆದರೂ ಪೊಲೀಸರು ತಮ್ಮ ಮಗನನ್ನು ಮಾತ್ರ ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ನಶೆಯಲ್ಲಿದ್ದಾಗ ಕಾಳಿಮಾತೆಯ ಮೂರ್ತಿಯನ್ನು ಒಡೆಯಲು ಹೇಗೆ ಸಾಧ್ಯ? ತೃಣಮೂಲ ಕಾಂಗ್ರೆಸ್‌ನ ಹಿಂದೂ ವಿರೋಧಿ ಸಿದ್ಧಾಂತವು ಅವರ ಕಾರ್ಯಕರ್ತರಲ್ಲಿ ಎಷ್ಟು ಆಳವಾಗಿ ಬೇರೂರಿದೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ!