
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ನೋವಾಖಾಲಿ ಜಿಲ್ಲೆಯ ಸುವರ್ಣಚರ ಉಪಜಿಲ್ಲೆಯಲ್ಲಿ ೪೨ ವರ್ಷದ ಹಿಂದೂ ವ್ಯಕ್ತಿ ಸುಬ್ರತ ಚಂದ್ರ ದಾಸ್ ಅವರನ್ನು ಹತ್ಯೆ ಮಾಡಲಾಗಿದೆ.
ಸುಬ್ರತ ಚಂದ್ರ ದಾಸ್ ಅವರು ತಮ್ಮ ಪತ್ನಿ ರಿಕ್ತಾ ರಾಣಿ ದಾಸ್ ಅವರನ್ನು ಕೆಲಸದ ಸ್ಥಳದಿಂದ ಕರೆತರಲು ಹೋಗುತ್ತಿದ್ದರು. ರಿಕ್ತಾ ರಾಣಿ ದಾಸ್ ಅವರು ‘ಚರ ಜಬ್ಬಾರ್ ಯೂನಿಯನ್ ಹೆಲ್ತ್ ಆ್ಯಂಡ್ ಫ್ಯಾಮಿಲಿ ವೆಲ್ಫೇರ್ ಸೆಂಟರ್’ನಲ್ಲಿ ‘ಫೀಲ್ಡ್ ಇನ್ಸ್ಪೆಕ್ಟರ್’ ಆಗಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಗಳು ಸುಬ್ರತ ಅವರನ್ನು ತಡೆದು, ಹರಿತವಾದ ಆಯುಧಗಳಿಂದ ಅವರ ಕತ್ತು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳೀಯ ಗ್ರಾಮಸ್ಥರ ಪ್ರಕಾರ, ಈ ಕೊಲೆಯ ಹಿಂದೆ ಇಸ್ಲಾಮಿಕ್ ಜಿಹಾದಿ ಗುಂಪುಗಳ ಕೈವಾಡವಿರಬಹುದು; ಏಕೆಂದರೆ ದಾಳಿಯ ವಿಧಾನವು ಇಸ್ಲಾಮಿಕ್ ಸ್ಟೇಟ್ನ ಕ್ರೂರ ಹತ್ಯೆಯಂತ್ಯೆಯೇ ಇತ್ತು.
Noakhali horror: Hindu man brutally killed, throat slit in Subarnachar.
Villagers say ISIS‑style execution by fanatics.
If ignored, will Bangladesh’s Hindus vanish, ending all news of their suffering?#SaveHindusInBangladesh #HindusUnderAttack pic.twitter.com/G0YTLluLla
— Sanatan Prabhat (@SanatanPrabhat) October 22, 2025
ಅಲ್ಪಸಂಖ್ಯಾತ ನಾಯಕರು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಮುಂದಿನ ಕೆಲವು ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಒಬ್ಬ ಹಿಂದುವೂ ಉಳಿಯುವುದಿಲ್ಲ. ಅದರ ನಂತರವೇ ಇಂತಹ ಸುದ್ದಿ ನಿಲ್ಲುತ್ತದೆ; ಏಕೆಂದರೆ ಅವರ ರಕ್ಷಣೆಗಾಗಿ ಯಾರೂ ಏನನ್ನೂ ಮಾಡುತ್ತಿಲ್ಲ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !