ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಹೈ ಕೋರ್ಟ್!

ಕೇರಳ: ಕ್ಯಾಥೋಲಿಕ್ ಶಾಲೆಯಲ್ಲಿ ಹಿಜಾಬ್‌ಗೆ ಅನುಮತಿ ನೀಡಿದ ಪ್ರಕರಣ!

ತಿರುವನಂತಪುರಂ – ಮುಸ್ಲಿಂ ವಿದ್ಯಾರ್ಥಿನಿಗೆ ಖಾಸಗಿ ಶಾಲೆಯಲ್ಲಿ ಹಿಜಾಬ್ (ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ವಸ್ತ್ರ) ಧರಿಸಲು ಅನುಮತಿ ನೀಡುವ ಸರಕಾರಿ ಆದೇಶಕ್ಕೆ ತಕ್ಷಣ ತಡೆಯಾಜ್ಞೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿದೆ. ಅಂತಿಮ ನಿರ್ಧಾರ ನೀಡುವ ಮೊದಲು ರಾಜ್ಯ ಸರಕಾರವು ತನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸುವಂತೆ ಉಚ್ಚ ನ್ಯಾಯಾಲಯವು ಸೂಚಿಸಿದೆ. ಎರ್ನಾಕುಲಂನ ಉಪ ಶಿಕ್ಷಣ ನಿರ್ದೇಶಕರು ಕ್ರಿಶ್ಚಿಯನ್ ಆಡಳಿತದಲ್ಲಿರುವ ಸೇಂಟ್ ರೀಟಾ ಪಬ್ಲಿಕ್ ಶಾಲೆಯಲ್ಲಿನ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಆದೇಶಿಸಿದ್ದರು. ಈ ಆದೇಶವನ್ನು ಶಾಲೆಯು ನೇರವಾಗಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.

೧. ರಾಜ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ‘ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ’ಯ (‘ಸಿ.ಬಿ.ಎಸ್.ಇ.’ಯ) ಶಾಲೆಗಳ ಆಂತರಿಕ ನಿಯಮಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ ಎಂದು ಶಾಲೆಯು ವಾದಿಸಿದೆ. ‘ಡ್ರೆಸ್ ಕೋಡ್’ (ವಸ್ತ್ರ ಸಂಹಿತೆ) ನಂತಹ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೇವಲ ‘ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ’ಗೆ ಮಾತ್ರ ಇದೆ.

೨. ಧಾರ್ಮಿಕ ಉಡುಪಿಗೆ ಅನುಮತಿ ನೀಡಿದರೆ ಸಂಸ್ಥೆಯ ‘ಧರ್ಮ ನಿರಪೇಕ್ಷ ಮತ್ತು ಸಮಗ್ರ ವಾತಾವರಣ’ದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೂಡ ಶಾಲೆಯು ಹೇಳಿದೆ.

೩. ಸೇಂಟ್ ರೀಟಾ ಶಾಲೆಯು ‘ಸಿ.ಬಿ.ಎಸ್.ಇ.’ ಶಾಲೆಯಾಗಿರುವುದರಿಂದ, ಅದು ನೇರವಾಗಿ ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ. ಆದ್ದರಿಂದ, ಸರಕಾರವು ಶಾಲೆಯ ವಿರುದ್ಧ ಯಾವುದೇ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನ್ಯಾಯಮೂರ್ತಿಗಳು, ಸರಕಾರದ ನಿಲುವನ್ನು ಸ್ಪಷ್ಟಪಡಿಸುವಂತೆ ರಾಜ್ಯದ ವಕೀಲರಿಗೆ ನಿರ್ದೇಶನ ನೀಡಿದ್ದಾರೆ.