ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೇವಲ ಒಂದು ವಾಕ್ಯದಿಂದ ಸಾಧಕಿಯ ಮನಸ್ಸಿನಲ್ಲಿನ ಸಂಘರ್ಷವು ಕಡಿಮೆಯಾಗಿ ಅವಳ ವಿಚಾರಗಳಲ್ಲಿ ಬದಲಾವಣೆ ಆಗುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸೌ. ಸುಪ್ರಿಯಾ ಆಠವಲೆ : ‘ಪ.ಪೂ. ಡಾಕ್ಟರ, ನಾನು ಹಿಂದಿನ ಸತ್ಸಂಗದಲ್ಲಿ ನಮ್ಮ ಮಗ ನಮ್ಮಿಂದ ದೂರ ಇರಲು ಹೋದ ನಂತರ ನನ್ನ ಮನಸ್ಸಿನಲ್ಲಿ ತುಂಬಾ ಸಂಘರ್ಷವಾಯಿತು’, ಈ ಕುರಿತು ನಾನು ನಿಮಗೆ ಹೇಳಿದ್ದೆ. ನನಗೆ ಮಗನ ಬಗ್ಗೆ ತುಂಬಾ ಸೆಳೆತ ಮತ್ತು ಅವನ ಮೇಲೆ ತುಂಬಾ ಪ್ರೀತಿ ಇರುವುದರಿಂದ ನನ್ನ ಮನಸ್ಸಿನಲ್ಲಿ ತುಂಬಾ ಸಂಘರ್ಷವಾಗುತ್ತಿತ್ತು; ಆದರೆ ತಮ್ಮ ಹಿಂದಿನ ಸತ್ಸಂಗದ ನಂತರ ಆ ಸಂಘರ್ಷವು ಬಹಳಷ್ಟು ಕಡಿಮೆ ಆಯಿತು. ಈಗ ನನ್ನ ವಿಚಾರಗಳಲ್ಲಿ ಬದಲಾವಣೆಯಾಗಿದೆ ಮತ್ತು ಈ ಬದಲಾವಣೆಯು ತನ್ನಿಂದ  ತಾನೆ ಆಗಿದೆ.

ಸೌ. ಸುಪ್ರಿಯಾ ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಈ ವಿಷಯದ ಬಗ್ಗೆ ನಾನು ಹಿಂದಿನ ಸತ್ಸಂಗದಲ್ಲಿ ಏನಾದರು ಹೇಳಿದ್ದೇನೇನು ?

ಸೌ. ಸುಪ್ರಿಯಾ ಆಠವಲೆ : ನೀವು, ”ಅದಂತೂ ಆಗುವುದೇ ಇತ್ತು. ಎಲ್ಲರೂ ಕೊನೆಯ ವರೆಗೂ ನಮ್ಮ ಜೊತೆಗೆ ಎಲ್ಲಿ ಇರುತ್ತಾರೆ ?’’ ಎಂದು ಹೇಳಿದ್ದೀರಿ. ಈ ನಿಮ್ಮ ವಾಕ್ಯದ ಮೇಲೆ ನನ್ನ ಚಿಂತನೆ ಆಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮನೋರೋಗತಜ್ಞರಿಗೆ (ಸೈಕ್ಯಾಟ್ರಿಸ್ಟ) ಒಬ್ಬೊಬ್ಬರೊಂದಿಗೆ ವೈಯಕ್ತಿಕವಾಗಿ ಮಾತನಾಡಬೇಕಾಗುತ್ತದೆ. ಇಲ್ಲಿ ನಾನು ಸಾಮಾನ್ಯ ವಾಕ್ಯವನ್ನು ಹೇಳಿದೆನು ಮತ್ತು ಇವರ ವಿಚಾರಗಳಲ್ಲಿ ತಕ್ಷಣ ಬದಲಾವಣೆ ಆಯಿತು !

ಸೌ. ಸುಪ್ರಿಯಾ ಆಠವಲೆ : ಗುರುದೇವ, ಈಗ ನನ್ನ ವಿಚಾರಗಳ ದಿಶೆಯೇ ಬದಲಾಗಿದೆ. ಈ ಮೊದಲು ‘ಮಗನು ನನ್ನ ಹತ್ತಿರ ಯಾವಾಗಲೂ ಇರಬಹುದೇ ?’ ಈ ರೀತಿಯ ಭಾವನಾತ್ಮಕ ವಿಚಾರಗಳು ನನ್ನ ಮನಸ್ಸಿನಲ್ಲಿ ಬರುತ್ತಿದ್ದವು. ಈಗ ಅದು ಕಡಿಮೆಯಾಗಿದೆ. ‘ದೇವರು ನನಗೆ ಸಾಧನೆ ಮಾಡಲು ಅವಕಾಶವನ್ನು ಕೊಟ್ಟಿದ್ದಾನೆ, ಇಲ್ಲದಿದ್ದರೆ ನಾನು ಮಗನಲ್ಲಿಯೇ ಸಿಲುಕುತ್ತಿದ್ದೆನು’, ಎಂಬ ವಿಚಾರಗಳು ನನ್ನ ಮನಸ್ಸಿನಲ್ಲಿ ತನ್ನಿಂದ ತಾನೆ ಬರುತ್ತಿದ್ದವು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅರೆ ವಾ ! ಇದು ತುಂಬಾ ಒಳ್ಳೆಯದಾಯಿತು !’